ಆ್ಯಪ್ನಗರ

ಪಕ್ಷ ವಿರೋಧಿ ಕೆಲಸ ಮಾಡಿಲ್ಲ: ಗಡ್ಡಿ

ನವಲಗುಂದ : ಪಕ್ಷ ದ ನಿಷ್ಠಾವಂತ ಕಾರ್ಯಕರ್ತನಾಗಿ ತಾಲೂಕಾ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ನಾಗಿ ಶಾಸಕ ಸಚಿವನಾಗಿ ಪಕ್ಷ ದ ಏಳ್ಗೆಗೆ ಶ್ರಮಿಸಿದ ತಮ್ಮನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಪಕ್ಷ ದ ಟಿಕೆಟ್‌ ಕೈತಪ್ಪಿದ್ದರಿಂದಾಗಿ ಏನೂ ತೋಚದಂತಾಗಿ ತಟಸ್ಥ ನಿಲುವು ತಳಿದ್ದೇ ಹೊರತು ಪಕ್ಷ ವಿರೋಧಿ ಕೆಲವ ಮಾಡಿಲ್ಲ ಎಂದು ಮಾಜಿ ಸಚಿವ ಕೆ.ಎನ್‌.ಗಡ್ಡಿ ಹೇಳಿದರು.

Vijaya Karnataka 3 Feb 2019, 5:00 am
ನವಲಗುಂದ : ಪಕ್ಷ ದ ನಿಷ್ಠಾವಂತ ಕಾರ್ಯಕರ್ತನಾಗಿ ತಾಲೂಕಾ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ನಾಗಿ ಶಾಸಕ ಸಚಿವನಾಗಿ ಪಕ್ಷ ದ ಏಳ್ಗೆಗೆ ಶ್ರಮಿಸಿದ ತಮ್ಮನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಪಕ್ಷ ದ ಟಿಕೆಟ್‌ ಕೈತಪ್ಪಿದ್ದರಿಂದಾಗಿ ಏನೂ ತೋಚದಂತಾಗಿ ತಟಸ್ಥ ನಿಲುವು ತಳಿದ್ದೇ ಹೊರತು ಪಕ್ಷ ವಿರೋಧಿ ಕೆಲವ ಮಾಡಿಲ್ಲ ಎಂದು ಮಾಜಿ ಸಚಿವ ಕೆ.ಎನ್‌.ಗಡ್ಡಿ ಹೇಳಿದರು.
Vijaya Karnataka Web DRW-1-NVL-1
ನವಲಗುಂದ ಕನಕ ಕಲ್ಯಾಣ ಕೇಂದ್ರದಲ್ಲಿ ಜರುಗಿದ ಮಾಜಿ ಸಚಿವ ಗಡ್ಡಿ ಅವರ ಅಭಿಮಾನಿ ಬಳಗದ ಸಭೆಯಲ್ಲಿ ಕೆ.ಎನ್‌.ಗಡ್ಡಿ ಮಾತನಾಡಿದರು.


ಶುಕ್ರವಾರ ಇಲ್ಲಿನ ಕನಕ ಕಲ್ಯಾಣ ಕೇಂದ್ರದಲ್ಲಿ ಮಾಜಿ ಸಚಿವ ಕೆ.ಎನ್‌.ಗಡ್ಡಿ ಅಭಿಮಾನಿ ಬಳಗ ಆಯೋಜಿಸಿದ್ದ ವಿಧಾನಸಭಾ ಕ್ಷೇತ್ರದ ರಾಜಕೀಯ ವಿದ್ಯಮಾನಗಳ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ತಟಸ್ಥ ನಿಲುವು ತಾಳಿದ್ದರಿಂದ ಕೆಲ ವಿರೋಧಿಗಳು ಇದರ ಲಾಭ ಪಡೆದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಪಕ್ಷ ದ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಸೃಷ್ಟಿ ಸುವಲ್ಲಿ ಯಶಸ್ವಿಯಾದರು. ಆದರೆ ಇಂದಿಗೂ ನಾನು ಪಕ್ಕಾ ಕಾಂಗ್ರೆಸ್ಸಿಗನಾಗಿದ್ದು, ಅಭಿಮಾನಿಗಳು ಮುಂದಿನ ದಿನಮಾನಗಳಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿ ಪಕ್ಷ ದಲ್ಲಿ ಮುನ್ನಡೆಯುವ ಇಚ್ಛೆಯನ್ನು ಗಡ್ಡಿ ವ್ಯಕ್ತ ಪಡಿಸಿದರು.

ಕಾಂಗ್ರೆಸ್‌ ಮುಖಂಡ ವಿ.ಪಿ. ಪಾಟೀಲ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ನಾಯಕರು ಮುಂದಿನ ದಿನಗಳಲ್ಲಿ ಮೊದಲಿನಿಂದ ಪಕ್ಷ ನಿಷ್ಠೆ, ಪಕ್ಷ ದ ಸಿದ್ಧಾಂತಗಳನ್ನು ಪಾಲಿಸಿಕೊಂಡು ಪರಿಶ್ರಮವಹಿಸುತ್ತ ಪಕ್ಷ ದ ಬೆನ್ನಲಬುವಾಗಿರುವ ಕೆ.ಎನ್‌.ಗಡ್ಡಿಯವರಿಗೆ ಬರಲಿರುವ ಲೋಕಸಭಾ ಚುನಾಣೆಯಲ್ಲಿ ಟಿಕೆಟ್‌ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.

ತಾ.ಪಂ. ಅಧ್ಯಕ್ಷೆ ವೆಂಕವ್ವ ಚಾಕಲಬ್ಬಿ, ಶಂಕ್ರು ಕುರಿ, ಶಿವಣ್ಣ ಬಾಳೋಜಿ, ಫಕ್ಕೀರಗೌಡ್ರ, ಕೆಂಪೇಗೌಡ್ರು, ಕಲ್ಲಪ್ಪ ಹುಬ್ಬಳ್ಳಿ, ಮೊದಲಾದವರು ಮಾತನಾಡಿ ಕೆ.ಎನ್‌.ಗಡ್ಡಿಯವರ ಬೆಂಬಲಕ್ಕೆ ಎಲ್ಲರೂ ಕೈ ಜೋಡಿಸಿ ನಿಲ್ಲಬೇಕು ಎಂದರು.

ಸಭೆ ನಿರ್ಧಾರ

ಕ್ಷೇತ್ರದಲ್ಲಿ ಪಕ್ಷ ವನ್ನು ಮುನ್ನಡೆಸುವ ಗಟ್ಟಿ ನಾಯಕರಿಲ್ಲದೇ ಸೊರಗಿದ ಪಕ್ಷ ಕ್ಕೆ ಶಕ್ತಿ ತುಂಬಲು ಕಾಂಗ್ರೆಸ್‌ ನಾಯಕರು ಗಡ್ಡಿ ಅವರಿಗೆ ಎಂಪಿ ಟಿಕೆಟ್‌ ನೀಡಬೇಕು. ಅವರ ನೇತೃತ್ವದಲ್ಲಿಯೇ ಪಕ್ಷ ಮುನ್ನಡೆಸಲು ಕೈ ಹೈಕಮಾಂಡ್‌ ಒಪ್ಪಿಗೆ ಸೂಚಿಸಬೇಕೆಂದು ನಿರ್ಣಕ ಕೈಗೊಳ್ಳುವುದರ ಮೂಲಕ ಫೆ.6 ರಂದು ರಾಜ್ಯದ ಕಾಂಗ್ರೆಸ್‌ ಪ್ರಮುಖ ನಾಯಕರ ಭೇಟಿಗೆ ಬೆಂಗಳೂರಿಗೆ ತೆರಳಲು ನಿರ್ಧರಿಸಲಾಯಿತು.

ಜಿ.ಪಂ. ಸದಸ್ಯೆ ಗಾಯತ್ರಿ ರಾಯರಡ್ಡಿ, ತಾ.ಪಂ. ಉಪಾಧ್ಯಕ್ಷ ಯೋಗಪ್ಪ ಗೋಲನಾಯ್ಕರ, ಸರನಾಡಗೌಡ್ರ, ಬಸವರಾಜ ಗುಡೆಣ್ಣವರ, ಎಂ.ಎಸ್‌. ಕರಿ, ಸೋಮು ಕವಟೆಕರ, ಕನಕ ಕಲ್ಯಾಣ ಕೇಂದ್ರದ ಅಧ್ಯಕ್ಷೆ ಪ್ರೇಮಾ ನಾಯ್ಕರ, ಈಶ್ವರ ಕಾಳಪ್ಪನವರ, ಪರಸುರಾಮ ದಿವಾನದವರ, ಇದ್ದರು. ಶಿವಾನಂದ ಜೆಟ್ಟೆಣ್ಣವರ, ಬಸವರಾಜ ಗುಡೆಣ್ಣವರ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ