ಆ್ಯಪ್ನಗರ

ಪಥ ಸಂಚಲನ ಹಿನ್ನೆಲೆ ಮಾರ್ಗ ಬದಲಾವಣೆ

ಹುಬ್ಬಳ್ಳಿ: ದಸರಾ ಹಬ್ಬದ ನಿಮಿತ್ತ ಹುಬ್ಬಳ್ಳಿ ಶಹರದ ನೆಹರು ಮೈದಾನದಲ್ಲಿರಾಷ್ಟ್ರೀಯ ಸ್ವಯಂ ಸೇವಕ(ಆರ್‌ಎಸ್‌ಎಸ್‌) ಸಂಘದವರು ಅ. 13ರಂದು ಪಥ ಸಂಚಲನ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿಮಧ್ಯಾಹ್ನ 3 ರಿಂದ 6ರ ವರೆಗೆ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Vijaya Karnataka 13 Oct 2019, 5:00 am
ಹುಬ್ಬಳ್ಳಿ: ದಸರಾ ಹಬ್ಬದ ನಿಮಿತ್ತ ಹುಬ್ಬಳ್ಳಿ ಶಹರದ ನೆಹರು ಮೈದಾನದಲ್ಲಿರಾಷ್ಟ್ರೀಯ ಸ್ವಯಂ ಸೇವಕ(ಆರ್‌ಎಸ್‌ಎಸ್‌) ಸಂಘದವರು ಅ. 13ರಂದು ಪಥ ಸಂಚಲನ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿಮಧ್ಯಾಹ್ನ 3 ರಿಂದ 6ರ ವರೆಗೆ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Vijaya Karnataka Web path traffic background changes
ಪಥ ಸಂಚಲನ ಹಿನ್ನೆಲೆ ಮಾರ್ಗ ಬದಲಾವಣೆ


ಗದಗ ರೋಡ್‌ ಕಡೆಯಿಂದ ಬರುವ ವಾಹನಗಳು ಅಂಡರ್‌ ಬ್ರಿಡ್ಜ್‌ದಿಂದ ಕೆ.ಎಚ್‌. ಪಾಟೀಲ ರಸ್ತೆ ಮೂಲಕ ಶೃಂಗಾರ, ಮೆನಕಾ, ಹೋಟೇಲ್‌, ಡಿಆರ್‌ಎಂ ಆಫೀಸ್‌ ಮೂಲಕ ರೈಲ್ವೆ ಆಫೀಸರ್ಸ್ ಗಾಲ್ಪ ಮೈದಾನದ ಮುಂದಿನ ರಸ್ತೆ ಮೂಲಕ ಹಾಯ್ದು ದೇಸಾಯಿ ಸರ್ಕಲ್‌, ಕೋರ್ಟ ಸರ್ಕಲ್‌, ವಾಸನ್‌ ಐ ಕೇರ ರಸ್ತೆಯ ಮುಖಾಂತರ ಐ.ಬಿ ಮುಂದೆ ಹಾಯ್ದು ಕಾಟನ್‌ ಮಾರ್ಕೆಟ್‌, ಹೊಸೂರ ಸರ್ಕಲ್‌ ದಿಂದ ಗೋಕುಲ ರೋಡ ಮೂಲಕ ಬೆಳಗಾವಿ, ಬೆಂಗಳೂರ, ಕಾರವಾರ, ಧಾರವಾಡ ಕಡೆಗೆ ಹೋಗುವುದು.

ನವಲಗುಂದ ಕಡೆಯಿಂದ ಬರುವ ವಾಹನಗಳು ಕೇಶ್ವಾಪೂರ ಸರ್ಕಲ್‌ದಿಂದ ದೇಸಾಯಿ ಸರ್ಕಲ್‌, ಕೋರ್ಟ್‌ ಸರ್ಕಲ್‌, ವಾಸನ ಐ ಕೇರ ರಸ್ತೆಯ ಮುಖಾಂತರ ಹೊಸೂರ ಸರ್ಕಲ್‌ ದಿಂದ ಗೋಕುಲ ರೋಡ ಮೂಲಕ ಬೆಳಗಾವಿ, ಬೆಂಗಳೂರ, ಕಾರವಾರ, ಧಾರವಾಡ ಕಡೆಗೆ ಹೋಗುವುದು.

ಸ್ಟೇಷನ ರೋಡ ಕಡೆಯಿಂದ ಬರುವ ವಾಹನಗಳಿಗೆ ಪಿಂಟೋ ಸರ್ಕಲ್‌ ಮಾರ್ಗವಾಗಿ, ದೇಸಾಯಿ ಸರ್ಕಲ್‌, ವಿವೇಕಾನಂದ ಆಸ್ಪತ್ರೆ ಕ್ರಾಸ್‌, ಕಾಟನ್‌ ಮಾರ್ಕೆಟ್‌ ಮೂಲಕ ವಿವಿಧೆಡೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

ಅಯೋಧ್ಯೆ ಹೊಟೇಲ್‌ದಿಂದ ಹಾಗೂ ನೀಲಿಜನ ಕಡೆಯಿಂದ ಬರುವ ಎಲ್ಲಾವಾಹನಗಳು ಕೋರ್ಟ ಸರ್ಕಲ್‌ ದೇಸಾಯಿ ಸರ್ಕಲ್‌ ಓವರ ಬ್ರೀಜ್‌ ಮಾರ್ಗವಾಗಿ ನವಲಗುಂದ ಕಡೆಗೆ ಹೋಗುವ ವಾಹನಗಳು ಸರ್ವೋದಯ ಸರ್ಕಲ್‌ ಮುಖಾಂತರ ಹೋಗುವುದು ಅದೇ ರೀತಿ ಗದಗ ಕಡೆಗೆ ಹೋಗುವ ವಾಹನಗಳು ಗಾಲ್ಫ ಗ್ರೌಂಡ ಕ್ರಾಸ್‌, ಶ್ರೀಂಗಾರ ಹೊಟೇಲ್‌ ಕ್ರಾಸ್‌, ಏಂಡ್ರಾಡ್‌ ಸ್ಕೂಲ್‌ ಕ್ರಾಸ್‌ ಮಾರ್ಗವಾಗಿ ಗದಗ ಕಡೆಗೆ ಹೋಗುವುದು.

ಶಿವಾಜಿ ಸರ್ಕಲ್‌ದಿಂದ ನ್ಯೂ ದುರ್ಗದ ಬೈಲ್‌ ಕಡೆಗೆ ಬರುವ ವಾಹನಗಳನ್ನು ಶಿವಾಜಿ ಸರ್ಕಲ್‌ದಿಂದ ಮೇದಾರ ಓಣಿ ಕಡೆಗೆ ಕಳುಹಿಸುವುದು. ವನೇಸನ್ಸ್‌ ಕ್ರಾಸ್‌ದಿಂದ ಶಿವಾಜಿ ಸರ್ಕಲ್‌, ನ್ಯೂ ದುರ್ಗದ ಬೈಲ್‌ ಕಡೆಗೆ ಬರುವ ವಾಹನಗಳನ್ನು ಶಿವಾಜಿ ಸರ್ಕಲ್‌ದಿಂದ ಮೇದಾರ ಓಣಿ ಕಡೆಗೆ ಕಳುಹಿಸುವುದು. ಸ್ಟೇಶನ್‌ರೋಡ್‌ ಕಡೆಯಿಂದ ಬರುವ ವಾಹನಗಳನ್ನು ಗಣೇಶಪೇಟ್‌ ಸರ್ಕಲ್‌ ಮುಖಾಂತರ ಫಿಶ್‌ ಮಾರ್ಕೇಟ್‌ ಕಡೆಗೆ ಕಳುಹಿಸುವುದು. ಬಂಕಾಪೂರ ಚೌಕನಿಂದ ಘಂಟಿಕೇರಿ ಪೊಲೀಸ್‌ ಠಾಣೆಗೆ ಬರುವ ವಾಹನಗಳನ್ನು ಬಮ್ಮಾಪೂರ ಓಣಿ ಕಡೆಗೆ ಕಳುಹಿಸುವುದು.

ಅದರಂತೆ ಪಾಟೀಲಗಲ್ಲಿಕ್ರಾಸ್‌ನಿಂದ ಯಲ್ಲಾಪೂರ ಓಣಿ ಕಡೆಗೆ ಹೋಗುವ ಮತ್ತು ಬರುವ ವಾಹನಗಳನ್ನು ಅಲ್ಫಾ ಹೋಟೆಲ್‌ ಕ್ರಾಸ್‌ ಮುಖಾಂತರ ಕೆ.ಬಿ. ನಗರ ಕ್ರಾಸ್‌ ಕಡೆಗೆ ಕಳುಹಿಸುವುದು. ಸಿಬಿಟಿ ಕಡೆಗೆ ಮತ್ತು ಮಂಗಳವಾರ ಪೇಟ ಕ್ರಾಸ್‌ ಕಡೆಗೆ ಬರುವ ವಾಹನಗಳನ್ನು ಕುವೆಂಪು ಸರ್ಕಲ್‌ದಿಂದ ಕೆ.ಇ.ಬಿ ಕ್ರಾಸ್‌ ಮುಖಾಂತರ ಬಾಕಳೆ ಗಲ್ಲಿಕ್ರಾಸ್‌ ಕಡೆಗೆ ಕಳುಹಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ