ಆ್ಯಪ್ನಗರ

ತಾಳ್ಮೆ, ಪರಿಶ್ರಮದಿಂದ ಯಶಸ್ಸು

ಧಾರವಾಡ : ಮಾನವ ಸಮಾಜ ಜೀವಿ. ಸಮಾಜದಿಂದ ನಾವು ಪಡೆದಿದ್ದರಲ್ಲಿ ಸ್ವಲ್ಪ ಅಂಶವನ್ನಾದರೂ ಸಮಾಜಕ್ಕೆ ಮರಳಿ ನೀಡಿದಲ್ಲಿ ನಮ್ಮಂತೆ ಇತರರೂ ಬೆಳೆಯಲು ಸಾಧ್ಯ ಎಂದು ಜನತಾ ಶಿಕ್ಷ ಣ ಸಮಿತಿಯ ಕಾರ್ಯದರ್ಶಿ ಡಾ. ನ.ವಜ್ರಕುಮಾರ ಹೇಳಿದರು.

Vijaya Karnataka 12 Jun 2019, 5:00 am
ಧಾರವಾಡ : ಮಾನವ ಸಮಾಜ ಜೀವಿ. ಸಮಾಜದಿಂದ ನಾವು ಪಡೆದಿದ್ದರಲ್ಲಿ ಸ್ವಲ್ಪ ಅಂಶವನ್ನಾದರೂ ಸಮಾಜಕ್ಕೆ ಮರಳಿ ನೀಡಿದಲ್ಲಿ ನಮ್ಮಂತೆ ಇತರರೂ ಬೆಳೆಯಲು ಸಾಧ್ಯ ಎಂದು ಜನತಾ ಶಿಕ್ಷ ಣ ಸಮಿತಿಯ ಕಾರ್ಯದರ್ಶಿ ಡಾ. ನ.ವಜ್ರಕುಮಾರ ಹೇಳಿದರು.
Vijaya Karnataka Web DRW-11RANGA03
ಧಾರವಾಡ ಜೈನ್‌ ಮಿಲನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನ.ವಜ್ರಕುಮಾರ ಅವರನ್ನು ಸನ್ಮಾನಿಸಲಾಯಿತು.


ಇಲ್ಲಿನ ಧಾರವಾಡ ಜೈನ್‌ ಮಿಲನ ವತಿಯಿಂದ ಆಯೋಜಿಸಿದ್ದ ನ.ವಜ್ರಕುಮಾರ 80ನೇ ವರ್ಷದ ಹುಟ್ಟುಹಬ್ಬದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ತಾಳ್ಮೆ, ಪರಿಶ್ರಮ, ಅಂತಕರಣದ ಸಮ್ಮಿಶ್ರಣವೇ ಯಶಸ್ಸು ಎಂದರು.

ಜೆಎಸ್‌ಎಸ್‌ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಮಾತನಾಡಿ, ಒಬ್ಬ ವ್ಯಕ್ತಿ ಹೇಗೆ ಶಕ್ತಿಯಾಗಿ ಬೆಳೆಯುವ ಜತೆಗೆ ಸಮಾಜ ಕಟ್ಟಬಲ್ಲ ಎಂಬುದಕ್ಕೆ ನ. ವಜ್ರಕುಮಾರವರೇ ಸಾಕ್ಷಿ. ವಿದ್ಯಾಗಿರಿಯನ್ನು ವಿದ್ಯಾಕಾಶಿಯನ್ನಾಗಿ ಪರಿವರ್ತಿಸಿ ಜೈನ ಮಿಲನ ಧಾರವಾಡದ ಸ್ಥಾಪಕರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಸಮಾಜ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಇದೇ ವೇಳೆ ಜೈನ್‌ ಮಿಲನದ ಸದಸ್ಯರಿಗಾಗಿ ಧಾರ್ಮಿಕ ಕ್ವಿಜ್‌ ಹಾಗೂ ವಿವಿಧ ಸ್ಪರ್ಧೆ ನಡೆಯಿತು.

ದತ್ತಾ ಡೋರ್ಲೆ, ಸುಜಾತಾ ಹಡಗಲಿ, ಪಾಶ್ರ್ವನಾಥ ಶೆಟ್ಟಿ, ಸೋನಾಲಿ ಗೋಗಿ, ಪ್ರೀತಿ ಬ್ಯಾಡಿಗಿಇತರರು ಇದ್ದರು. ಮಹಾವೀರ ಉಪಾಧ್ಯೆ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ