ಆ್ಯಪ್ನಗರ

ಲಾಕ್‌ಡೌನ್‌ ಅವಧಿಯ ವೇತನ ನೀಡಿ

ಕುಂದಗೋಳ: ವಸತಿ ಶಾಲೆ, ಹಾಸ್ಟೆಲ್‌, ಆಶ್ರಮ ಶಾಲೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿಹೊರಗುತ್ತಿಗೆ ಆಧಾರದಲ್ಲಿಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯ ವೇತನ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ ಬಸುರಾಜ ಮೆಳವಂಕಿ ಅವರ ಮೂಲಕ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆ ಸಚಿವರಿಗೆ ತಾಲೂಕಾ ವಸತಿ ನಿಲಯ ಕಾರ್ಮಿಕರ ಸಂಘವು ಮಂಗಳವಾರ ಮನವಿ ನೀಡಿತು.

Vijaya Karnataka 11 Jun 2020, 5:00 am
ಕುಂದಗೋಳ: ವಸತಿ ಶಾಲೆ, ಹಾಸ್ಟೆಲ್‌, ಆಶ್ರಮ ಶಾಲೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿಹೊರಗುತ್ತಿಗೆ ಆಧಾರದಲ್ಲಿಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯ ವೇತನ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ ಬಸುರಾಜ ಮೆಳವಂಕಿ ಅವರ ಮೂಲಕ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆ ಸಚಿವರಿಗೆ ತಾಲೂಕಾ ವಸತಿ ನಿಲಯ ಕಾರ್ಮಿಕರ ಸಂಘವು ಮಂಗಳವಾರ ಮನವಿ ನೀಡಿತು.
Vijaya Karnataka Web pay lockdown period pay
ಲಾಕ್‌ಡೌನ್‌ ಅವಧಿಯ ವೇತನ ನೀಡಿ


ಮುಖ್ಯಮಂತ್ರಿಗಳು ಘೋಷಿಸಿದಂತೆ ಆಯಾ ಶಾಲೆ-ಹಾಸ್ಟೆಲ್‌ಗಳಲ್ಲಿಸೇವೆ ಸಲ್ಲಿಸುತ್ತಿರುವ ಎಲ್ಲಕಾರ್ಮಿಕರಿಗೆ ಜೂನ್‌ ತಿಂಗಳಿನಿಂದ ಎಂದಿನಂತೆ ವೇತನ ನೀಡಬೇಕು, ಸಮಾಜ ಕಲ್ಯಾಣ ಇಲಾಖೆಯಲ್ಲಿಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು, ಕ್ವಾರಂಟೈನ್‌ ಕೇಂದ್ರಗಳಾಗಿ ಪರಿವರ್ತಿತ ಶಾಲೆ ಹಾಗೂ ನಿಲಯಗಳಲ್ಲಿನ ಕರ್ತವ್ಯನಿರತ ಹೊರಗುತ್ತಿಗೆ ಸಿಬ್ಬಂದಿಗೆ ವಿಶೇಷ ಭತ್ಯೆ ಕಲ್ಪಿಸಬೇಕು, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ವಿಶೇಷ ಜೀವವಿಮಾ ಸೌಲಭ್ಯ ಈ ಗುತ್ತಿಗೆ ಆಧಾರಿತ ಕಾರ್ಮಿಕರಿಗೂ ವಿಸ್ತರಿಸಬೇಕು, ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಮನವಿಯಲ್ಲಿವಿವರಿಸಲಾಗಿದೆ.

ಗಂಗಾಧರ ಗುಡೆಮ್ಮನವರ, ಶಾಂತವ್ವ ನರೇಗಲ್‌, ಚನ್ನಬಸವ್ವ ಬಳ್ಳಾರಿ, ಸವಿತಾ ಹೊಸಮನಿ, ಕುಸುಮಾ ಗೌಳಿ, ರತ್ನಾ ನೆರ್ತಿ, ಶೇಕವ್ವಾ ಹುಲಗೂರ, ಸಂತೋಷ ಚೂರಿ, ರತ್ನಾ ಧಾರವಾಡ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ