ಹುಬ್ಬಳ್ಳಿ : ವಿದ್ಯಾನಗರದ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ 8 ನೇ ಪದವಿ ಪ್ರದಾನ ಸಮಾರಂಭದಲ್ಲಿ 311 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಬಿ.ಎಸ್ಸಿ ವಿಭಾಗದಿಂದ 196, ಬಿ.ಸಿ.ಎ ವಿಭಾಗದಿಂದ 77, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 6, ಎಂ.ಎಸ್ಸಿ ಬಯೋಟೆಕ್ನಾಲಜಿ ವಿಭಾಗದಿಂದ 7, ಎಂ.ಎಸ್ಸಿ ಕೆಮೆಸ್ಟ್ರಿ ವಿಭಾಗದಿಂದ 17, ಎಂ.ಎಸ್ಸಿ ಫಿಜಿಕ್ಸ್ ವಿಭಾಗದಿಂದ 8 ವಿದ್ಯಾರ್ಥಿಗಳಿಗೆ ಸೇರಿದಂತೆ ಒಟ್ಟು 311 ವಿದ್ಯಾರ್ಥಿಗಳಿಗೆ ಪದವಿ ಸ್ವೀಕರಿಸಿದರು.
ಪದವಿ ಪ್ರದಾನಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರಮೋದ ಗಾಯಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಕೆಲವು ಬದಲಾವಣೆ ಆಗಬೇಕು. ವಿದ್ಯಾರ್ಥಿಗಳು ಕೌಶಲಯುತ ಶಿಕ್ಷಣ ಪಡೆಯುವಂತಾಗಬೇಕು. ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನಿಗೆ ಯಂತ್ರಗಳು ಸಹ ಸ್ಪರ್ಧೆ ನೀಡುತ್ತಿವೆ. ಮನುಷ್ಯನ ಕೆಲಸದ ಅವಕಾಶವನ್ನು ಯಂತ್ರಗಳು ಕಸಿದುಕೊಳ್ಳುತ್ತಿವೆ ಎಂದರು.
ವಿದ್ಯಾರ್ಥಿಗಳು ಸಮಯ, ತಂತ್ರಜ್ಞಾನ ಬಳಸಿಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ತಮ್ಮದೇಯಾದ ಶೈಲಿ ಹಾಗೂ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹೊಂದಬೇಕು. ಪದವಿ ಪಡೆದ ನಂತರ ಕೆಲಸ ಹುಡುಕಲು ಹೆಚ್ಚು ಸಮಯ ಹಾಳು ಮಾಡದೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸಂಶೋಧನೆಗಳು, ಆವಿಷ್ಕಾರ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಯುಗವು ವಿಜ್ಞಾನ ಯುಗವಾಗಿ ಪರಿವರ್ತನೆಯಾಗುತ್ತಿರುವುದರಿಂದ ಶಿಕ್ಷ ಕರು ಉತ್ತಮ ಭೋಧನಾ ಮಾರ್ಗಗಳನ್ನು ಅನುಸರಿಸಬೇಕು. ಅವರು ಭೋಧಿಸುವ ವಸ್ತುಗಳು ಆವಿಷ್ಕಾರ, ಸಂಶೋಧನೆಗಳಿಗೆ ಪೂರಕವಾಗಿರಬೇಕು. ಈ ನಿಟ್ಟಿನಿಲ್ಲಿ ಶಿಕ್ಷ ಕರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಉತ್ತಮ ಮಾನವ ಸಂಪನ್ಮೂಲ ಅಗತ್ಯ : ಲೋನಿಯ ಪ್ರವರಾ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕುಲಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲಗಳ ಅವಶ್ಯಕತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಜ್ಞಾನ, ಕೌಶಲ ಹಾಗೂ ಸ್ಪರ್ಧಾತ್ಮಕತೆ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿನ ಶಿಕ್ಷ ಣ ದೇಶದ ಅಭಿವೃದ್ಧಿಗೆ ಪೂರಕವಾಗುವಂತಿರಬೇಕು. ತಂತ್ರಜ್ಞಾನ, ಖಾಸಗಿಕರಣ, ಉದಾರಿಕರಣ, ಜಾಗತಿಕರಣದ ಇಂದಿನ ಯುಗದಲ್ಲಿ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯವು ಪ್ರಾದೇಶಿಕ, ರಾಷ್ಟ್ರೀಯ, ಅಂತರಾಷ್ಟ್ರೀಯ ದೃಷ್ಟಿ ಇಟ್ಟುಕೊಂಡು ಶಿಕ್ಷ ಣ ನೀಡುತ್ತಿರುವುದು ಉತ್ತಮ ಸಂಗತಿ ಎಂದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಕವಿವಿ ಮೌಲ್ಯಮಾಪನ ಕುಲಸಚಿವ ಎನ್.ಎಂ.ಸಾಲಿ, ಪ್ರಾಚಾರ್ಯ ಎಸ್.ವಿ.ಪಾಟೀಲ, ಧೀರೇಂದ್ರ ವಾದಿರಾಜ ಸೇರಿದಂತೆ ಅನೇಕರು ಇದ್ದರು.
ಪ್ರಾಚಾರ್ಯ ಡಾ. ಎಸ್.ವಿ. ಹಿರೇಮಠ ಸ್ವಾಗತಿಸಿದರು. ಡಾ.ವೈ.ವೈ.ಪಟ್ಟಣಶೆಟ್ಟಿ ತೈತ್ತರೀಯೋಪನಿಷತ್ತಿನ ಅನುಶಾಸನವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಡಾ. ಎ.ಬಿ. ಸೋನಪ್ಪನವರ ಮತ್ತು ಡಾ. ಭೂಷಣ ಕುಲಕರ್ಣಿ ನಿರೂಪಿಸಿದರು.
ಬಂಗಾರ ಪದಕ ವಿಜೇತರು : ಐಶ್ವರ್ಯ ಯಾದಗಿರಿ (ಬಿಎಸ್ಸಿ), ಅರ್ಪಣಾ ಅನಂತ ಪ್ರಭು (ಬಿಸಿಎ), ಅಶ್ವಿನಿ ಶೆಲ್ಲಿಕೇರಿ (ಎಂ.ಎಸ್ಸಿ ಬಯೋಟೆಕ್ನಾಲಜಿ), ಹೈದರ್ಅಲಿ ಮುಲ್ಲಾ (ಎಂ.ಎಸ್ಸಿ ಕೆಮೇಸ್ಟ್ರಿ), ವಸಂತ ಕಾತೋಟೆ (ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್), ಭಾಗ್ಯಶ್ರೀ ಗೌರವ (ಎಂ.ಎಸ್ಸಿ ಫಿಜಿಕ್ಸ್) ಬಂಗಾರದ ಪದಕ ಪಡೆದರು.
ಸಮಾರಂಭದಲ್ಲಿ ಬಿ.ಎಸ್ಸಿ ವಿಭಾಗದಿಂದ 196, ಬಿ.ಸಿ.ಎ ವಿಭಾಗದಿಂದ 77, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 6, ಎಂ.ಎಸ್ಸಿ ಬಯೋಟೆಕ್ನಾಲಜಿ ವಿಭಾಗದಿಂದ 7, ಎಂ.ಎಸ್ಸಿ ಕೆಮೆಸ್ಟ್ರಿ ವಿಭಾಗದಿಂದ 17, ಎಂ.ಎಸ್ಸಿ ಫಿಜಿಕ್ಸ್ ವಿಭಾಗದಿಂದ 8 ವಿದ್ಯಾರ್ಥಿಗಳಿಗೆ ಸೇರಿದಂತೆ ಒಟ್ಟು 311 ವಿದ್ಯಾರ್ಥಿಗಳಿಗೆ ಪದವಿ ಸ್ವೀಕರಿಸಿದರು.
ಪದವಿ ಪ್ರದಾನಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರಮೋದ ಗಾಯಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಕೆಲವು ಬದಲಾವಣೆ ಆಗಬೇಕು. ವಿದ್ಯಾರ್ಥಿಗಳು ಕೌಶಲಯುತ ಶಿಕ್ಷಣ ಪಡೆಯುವಂತಾಗಬೇಕು. ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನಿಗೆ ಯಂತ್ರಗಳು ಸಹ ಸ್ಪರ್ಧೆ ನೀಡುತ್ತಿವೆ. ಮನುಷ್ಯನ ಕೆಲಸದ ಅವಕಾಶವನ್ನು ಯಂತ್ರಗಳು ಕಸಿದುಕೊಳ್ಳುತ್ತಿವೆ ಎಂದರು.
ವಿದ್ಯಾರ್ಥಿಗಳು ಸಮಯ, ತಂತ್ರಜ್ಞಾನ ಬಳಸಿಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು. ತಮ್ಮದೇಯಾದ ಶೈಲಿ ಹಾಗೂ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹೊಂದಬೇಕು. ಪದವಿ ಪಡೆದ ನಂತರ ಕೆಲಸ ಹುಡುಕಲು ಹೆಚ್ಚು ಸಮಯ ಹಾಳು ಮಾಡದೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸಂಶೋಧನೆಗಳು, ಆವಿಷ್ಕಾರ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಯುಗವು ವಿಜ್ಞಾನ ಯುಗವಾಗಿ ಪರಿವರ್ತನೆಯಾಗುತ್ತಿರುವುದರಿಂದ ಶಿಕ್ಷ ಕರು ಉತ್ತಮ ಭೋಧನಾ ಮಾರ್ಗಗಳನ್ನು ಅನುಸರಿಸಬೇಕು. ಅವರು ಭೋಧಿಸುವ ವಸ್ತುಗಳು ಆವಿಷ್ಕಾರ, ಸಂಶೋಧನೆಗಳಿಗೆ ಪೂರಕವಾಗಿರಬೇಕು. ಈ ನಿಟ್ಟಿನಿಲ್ಲಿ ಶಿಕ್ಷ ಕರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಉತ್ತಮ ಮಾನವ ಸಂಪನ್ಮೂಲ ಅಗತ್ಯ : ಲೋನಿಯ ಪ್ರವರಾ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕುಲಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲಗಳ ಅವಶ್ಯಕತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಜ್ಞಾನ, ಕೌಶಲ ಹಾಗೂ ಸ್ಪರ್ಧಾತ್ಮಕತೆ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿನ ಶಿಕ್ಷ ಣ ದೇಶದ ಅಭಿವೃದ್ಧಿಗೆ ಪೂರಕವಾಗುವಂತಿರಬೇಕು. ತಂತ್ರಜ್ಞಾನ, ಖಾಸಗಿಕರಣ, ಉದಾರಿಕರಣ, ಜಾಗತಿಕರಣದ ಇಂದಿನ ಯುಗದಲ್ಲಿ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯವು ಪ್ರಾದೇಶಿಕ, ರಾಷ್ಟ್ರೀಯ, ಅಂತರಾಷ್ಟ್ರೀಯ ದೃಷ್ಟಿ ಇಟ್ಟುಕೊಂಡು ಶಿಕ್ಷ ಣ ನೀಡುತ್ತಿರುವುದು ಉತ್ತಮ ಸಂಗತಿ ಎಂದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಕವಿವಿ ಮೌಲ್ಯಮಾಪನ ಕುಲಸಚಿವ ಎನ್.ಎಂ.ಸಾಲಿ, ಪ್ರಾಚಾರ್ಯ ಎಸ್.ವಿ.ಪಾಟೀಲ, ಧೀರೇಂದ್ರ ವಾದಿರಾಜ ಸೇರಿದಂತೆ ಅನೇಕರು ಇದ್ದರು.
ಪ್ರಾಚಾರ್ಯ ಡಾ. ಎಸ್.ವಿ. ಹಿರೇಮಠ ಸ್ವಾಗತಿಸಿದರು. ಡಾ.ವೈ.ವೈ.ಪಟ್ಟಣಶೆಟ್ಟಿ ತೈತ್ತರೀಯೋಪನಿಷತ್ತಿನ ಅನುಶಾಸನವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಡಾ. ಎ.ಬಿ. ಸೋನಪ್ಪನವರ ಮತ್ತು ಡಾ. ಭೂಷಣ ಕುಲಕರ್ಣಿ ನಿರೂಪಿಸಿದರು.
ಬಂಗಾರ ಪದಕ ವಿಜೇತರು : ಐಶ್ವರ್ಯ ಯಾದಗಿರಿ (ಬಿಎಸ್ಸಿ), ಅರ್ಪಣಾ ಅನಂತ ಪ್ರಭು (ಬಿಸಿಎ), ಅಶ್ವಿನಿ ಶೆಲ್ಲಿಕೇರಿ (ಎಂ.ಎಸ್ಸಿ ಬಯೋಟೆಕ್ನಾಲಜಿ), ಹೈದರ್ಅಲಿ ಮುಲ್ಲಾ (ಎಂ.ಎಸ್ಸಿ ಕೆಮೇಸ್ಟ್ರಿ), ವಸಂತ ಕಾತೋಟೆ (ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್), ಭಾಗ್ಯಶ್ರೀ ಗೌರವ (ಎಂ.ಎಸ್ಸಿ ಫಿಜಿಕ್ಸ್) ಬಂಗಾರದ ಪದಕ ಪಡೆದರು.