ಆ್ಯಪ್ನಗರ

ನಾಳೆ ಸರ್ಪದೋಷ ಪರಿಹಾರ ಶಾಂತಿ

ಹುಬ್ಬಳ್ಳಿ: ಇಲ್ಲಿಯ ವಿಶ್ವೇಶ್ವರ ನಗರದ ಶ್ರೀ ಲಕ್ಷ್ಮೇನರಸಿಂಹ, ಶ್ರೀ ಮುಖ್ಯಪ್ರಾಣ, ಶ್ರೀ ಶನಿದೇವರ ಹಾಗೂ ಶ್ರೀ ಪರಿವಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಸ್ಕಂದಷಷ್ಠಿ(ಚಂಪಾಷಷ್ಠಿ) ಅಂಗವಾಗಿ ಡಿ. 2ರಂದು ಬೆಳಗ್ಗೆ 9.30ರಿಂದ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ಸರ್ಪದೋಷ ಪರಿಹಾರ ಶಾಂತಿ ಕಾರ್ಯಕ್ರಮ ನಡೆಯಲಿದೆ.

Vijaya Karnataka 1 Dec 2019, 5:00 am
ಹುಬ್ಬಳ್ಳಿ: ಇಲ್ಲಿಯ ವಿಶ್ವೇಶ್ವರ ನಗರದ ಶ್ರೀ ಲಕ್ಷ್ಮೇನರಸಿಂಹ, ಶ್ರೀ ಮುಖ್ಯಪ್ರಾಣ, ಶ್ರೀ ಶನಿದೇವರ ಹಾಗೂ ಶ್ರೀ ಪರಿವಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಸ್ಕಂದಷಷ್ಠಿ(ಚಂಪಾಷಷ್ಠಿ) ಅಂಗವಾಗಿ ಡಿ. 2ರಂದು ಬೆಳಗ್ಗೆ 9.30ರಿಂದ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ಸರ್ಪದೋಷ ಪರಿಹಾರ ಶಾಂತಿ ಕಾರ್ಯಕ್ರಮ ನಡೆಯಲಿದೆ.
Vijaya Karnataka Web 30 KALMESH 4053809
ವಿಶ್ವೇಶ್ವರ ನಗರದಲ್ಲಿರುವ ಸುಬ್ರಹ್ಮಣ್ಯ ದೇವರ ಮೂರ್ತಿ..


ಅಂದು ಬೆಳಗ್ಗೆ 6ಕ್ಕೆ ಸುಪ್ರಭಾತ, 6.30ಕ್ಕೆ ಅಭಿಷೇಕ, 7.30ಕ್ಕೆ ಅಲಂಕಾರ, 8.30ಕ್ಕೆ ಮಹಾಮಂಗಳಾರತಿ, 9ಕ್ಕೆ ಆಶ್ಲೇಷಾ ಬಲಿ ಸರ್ಪದೋಷ ನಿವಾರಣೆ ಸಾಮೂಹಿಕ ಯಜ್ಞ ನಡೆಯಲಿದೆ. ಅದರಂತೆ ಮಧ್ಯಾಹ್ನ 1ಕ್ಕೆ ತೀರ್ಥ ಪ್ರಸಾದ, ಸಂಜೆ 4ಕ್ಕೆ ಸಂಗೀತ, ಭಜನೆ, ಕೀರ್ತನೆ ನಡೆಯಲಿದ್ದು, 7ಕ್ಕೆ ಕಾರ್ತಿಕ ದೀಪೋತ್ಸವ ನಡೆಯಲಿದೆ.

ಈ ಎಲ್ಲಕಾರ್ಯಕ್ರಮಗಳು ಸಮೀರಾಚಾರ್ಯ ಮಣ್ಣೂರ ಹಾಗೂ ಶ್ರಾವಣಿ ಸಮೀರಾಚಾರ್ಯರ ಉಪಸ್ಥಿತಿಯಲ್ಲಿನೆರವೇರಲಿವೆ. ಹೆಚ್ಚಿನ ಮಾಹಿತಿಗೆ ಮೊ. 93434-00556 ಗೆ ಸಂಪರ್ಕಿಸಬಹುದು ಎಂದು ದೇವಸ್ಥಾನದ ಧರ್ಮಾಧಿಕಾರಿ ರಾಘವೇಂದ್ರಾಚಾರ್ಯ ಮಣ್ಣೂರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ