ಆ್ಯಪ್ನಗರ

ಶಾಂತಿ ಸಹನೆ ಭಾರತದ ಹೆಮ್ಮೆ

ಕುಂದಗೋಳ : ನಮ್ಮ ರಾಷ್ಟ್ರವು ಪ್ರಪಂಚದಲ್ಲೇ ಶಾಂತಿಗೆ ಹೆಸರಾಗಿದ್ದು, ದೇಶದಲ್ಲಿನ ಪ್ರತಿಯೊಬ್ಬ ನಾಗರಿಕ ಶಾಂತಿದೂತನಾಗಿ ತನ್ನ ಆಹಾರ ವಿಹಾರವನ್ನು ಮೌಲ್ಯಾಧಾರಿತದಲ್ಲಿಬಳಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಕೊಪ್ಪದ ಹೇಳಿದರು.

Vijaya Karnataka 21 Sep 2019, 5:00 am
ಕುಂದಗೋಳ : ನಮ್ಮ ರಾಷ್ಟ್ರವು ಪ್ರಪಂಚದಲ್ಲೇ ಶಾಂತಿಗೆ ಹೆಸರಾಗಿದ್ದು, ದೇಶದಲ್ಲಿನ ಪ್ರತಿಯೊಬ್ಬ ನಾಗರಿಕ ಶಾಂತಿದೂತನಾಗಿ ತನ್ನ ಆಹಾರ ವಿಹಾರವನ್ನು ಮೌಲ್ಯಾಧಾರಿತದಲ್ಲಿಬಳಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಕೊಪ್ಪದ ಹೇಳಿದರು.
Vijaya Karnataka Web peace tolerance is indias pride
ಶಾಂತಿ ಸಹನೆ ಭಾರತದ ಹೆಮ್ಮೆ


ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿನೆಹರೂ ಯುವ ಕೇಂದ್ರ ಮತ್ತು ಕಾಲೇಜು ಸಂಯುಕ್ತಾಶ್ರಯದಲ್ಲಿಮಂಗಳವಾರ ನಡೆದ ವಿಶ್ವಶಾಂತಿ ದಿನ ಹಾಗೂ ರಾಷ್ಟ್ರೀಯ ಪೌಷ್ಟಿಕಾಂಶ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಅಕ್ಕಪಕ್ಕದ ಕೆಲ ಸಣ್ಣ-ಪುಟ್ಟ ರಾಷ್ಟ್ರಗಳು ಕಾಲು ಕೆದರಿ ಯುದ್ಧಕ್ಕೆ ಮುಂದಾಗುತ್ತಿದ್ದರೂ ನಾವು ಶಾಂತಿ ಮಂತ್ರ ಪಠಿಸುತ್ತಿದ್ದೇವೆ. ನಮ್ಮ ಸಹನೆ ಕಂಡ ಇತರೆ ರಾಷ್ಟ್ರಗಳೇ ನಮ್ಮನ್ನು ಪ್ರೋತ್ಸಾಹಿಸಲು ಮುಂದಾಗುತ್ತಿದ್ದರೂ ನಾವು ಶಾಂತಿ-ಸಹನೆಯಿಂದ ಸಾಗುತ್ತಿದ್ದೇವೆ. ಇದನ್ನು ಕಂಡ ಪ್ರಪಂಚವು ಸಹನಾಭೂತ ರಾಷ್ಟ್ರವೆಂದು ಹೊಗಳುತ್ತಿರುವುದು ಭಾರತಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.

ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ಯುಜನತೆಯು ಪೌಷ್ಟಿಕ ಆಹಾರ ಸೇವನೆಯತ್ತ ಗಮನಹರಿಸಿ ಕಾಲ-ಕಾಲಕ್ಕೆ ಆಹಾರ-ವಿಹಾರಗಳನ್ನು ಪಡೆಯುತ್ತ ನಿರೋಗಿಗಳಾಗÜಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಎಂ.ಕೆ.ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ತರಾಮತಿ ನಾಕೋಡ, ಅಂಬಿಳಿ ಪಿಳೈ, ಕೃಷ್ಣಪ್ಪ ಲಮಣಿ, ಜ್ಯೋತಿ ಹಿರೇಮಠ, ವಿಜಯಲಕ್ಷಿತ್ರ್ಮ ಗೋವಣ್ಣವರ ಹಾಗೂ ಲಿಂಗರಾಜ ನಿಡೋಣಿ ಸೇರಿದಂತೆ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ