ಹುಬ್ಬಳ್ಳಿ : ನಗರದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಸಂಸ್ಥೆ ಆಡಳಿತ ಮಂಡಳಿಯ 52 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶನಿವಾರ ಶಾಂತಿಯುತ ಮತದಾನ ನಡೆಯಿತು. ಶೇ.71.86 ರಷ್ಟು ಮತದಾನವಾಗಿದ್ದು, ಜೂ. 16ರಂದು ಮತ ಎಣಿಕೆ ನಡೆಯಲಿದೆ. ಅಂದು ಸಂಜೆ ಹೊತ್ತಿಗೆ ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.
ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ 11,480 ಮತದಾರರ ಪೈಕಿ 8,249 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಚುನಾವಣೆ ಕಾವು ಹೆಚ್ಚಾಗಿದ್ದು ಮತದಾನದ ವೇಳೆ ಕಂಡು ಬಂದಿತು. ಕಳೆದ ವರ್ಷದ ಏಪ್ರಿಲ್ನಲ್ಲೇ ಚುನಾವಣೆ ನಡೆಯಬೇಕಿತ್ತು. ಆದರೆ ವಿವಿಧ ವಿಚಾರಗಳಿಗಾಗಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಇದರಿಂದಾಗಿ ಚುನಾವಣೆ ವಿಳಂಬವಾಗಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್ ಜೂ.15ರೊಳಗೆ ಚುನಾವಣೆ ಮುಗಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ನಡೆಯಿತು.
ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ, ನಿರ್ದೇಶಕರು, ಅಜೀವ ಸದಸ್ಯರು, ಆಸ್ಪತ್ರೆ ಮಂಡಳಿ, ಶೈಕ್ಷಣಿಕ ಮಂಡಳಿ ಸೇರಿದಂತೆ ವಿವಿಧ 52 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೆಳಗಿನಿಂದಲೇ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಮಂಡಳಿಯ 52 ಸ್ಥಾನಗಳಿಗೆ ಒಟ್ಟು 160 ಸ್ಪರ್ಧಾಳುಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
25 ಮತಗಟ್ಟೆಗಳು
ಶಾಂತಿಯುತ ಮತದಾನಕ್ಕಾಗಿ ಇಲ್ಲಿನ ನೆಹರು ಕಾಲೇಜಿನಲ್ಲಿ ಒಟ್ಟು 25 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು. ಮತಗಟ್ಟೆಯೊಳಗೆ ಮೊಬೈಲ್ ನಿಷೇಧಿಸಿದ್ದರೂ, ಪೊಲೀಸರನ್ನು ಕಣ್ತಪ್ಪಿಸಿ ಅನೇಕರು ಮತಗಟ್ಟೆಯಲ್ಲಿ ಮೊಬೈಲ್ ಒಯ್ಯುತ್ತಿದ್ದ ದೃಶ್ಯ ಅಲ್ಲಿ ಸಾಮಾನ್ಯವಾಗಿತ್ತು. ಮತಗಟ್ಟೆ ಹೊರಗೆ ಅಭ್ಯರ್ಥಿಗಳು, ಅವರ ಬೆಂಬಲಿತರು ಮತದಾರರನ್ನು ಸೆಳೆಯುತ್ತಿದ್ದ ದೃಶ್ಯವಂತೂ ಸಾಮಾನ್ಯವಾಗಿತ್ತು.
ಬೆಲೆಯೇ ಇರಲಿಲ್ಲ
ಮತದಾನ ಸಂದರ್ಭದಲ್ಲಿ ಮತಗಟ್ಟೆಯ ಸುತ್ತಲಿನ ಪ್ರದೇಶದಲ್ಲಿ ಗದ್ದಲ, ಗಲಾಟೆ ಉಂಟಾಗಬಾರದೆಂಬ ಉದ್ದೇಶದಿಂದ ಮತಗಟ್ಟೆಯ 200 ಮೀಟರ್ ಅಂತರದಲ್ಲಿ 144ನೇ ಕಲಮಿನನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಇಲ್ಲಿ ನಿಷೇಧಾಜ್ಞೆಗೆ ಬೆಲೆಯೇ ಇರಲಿಲ್ಲ. ಮತಗಟ್ಟೆಗೆ ಹೋಗುತ್ತಿರಲಿಲ್ಲವಾದರೂ ಮತಗಟ್ಟೆಯಿಂದ ಅಣತಿ ದೂರದಲ್ಲಿ ಜನರು ಗುಂಪು ಗೂಡಿ ನಿಂತಿರುತ್ತಿದ್ದರು. ಅಲ್ಲದೆ, ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅನೇಕರು ಮನವಿ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಪದೇ ಪದೆ ಜನರನ್ನು ಇಲ್ಲಿ ನಿಷೇಧಾಜ್ಞೆ ಇದೆ. ಆ ಕಡೆ ತೆರಳಿ ಎಂದು ಮೈಕ್ ಮೂಲಕ ಸೂಚನೆ ನೀಡುತ್ತಿದ್ದರು. ಆದರೆ ಅಭ್ಯರ್ಥಿಗಳು ಸೇರಿದಂತೆ ಅವರ ಬೆಂಬಲಿಗರು ಇದಕ್ಕೆ ಕ್ಯಾರೆ ಎನ್ನದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಚುನಾವಣೆಗಾಗಿ ಪಿಆರ್ಒಗಳನ್ನಾಗಿ 30 ಜನ ಅಧಿಕಾರಿಗಳನ್ನು, ಎಪಿಆರ್ಒಗಳನ್ನಾಗಿ 130 ಅಧಿಕಾರಿಗಳನ್ನು ಪೊಲಿಂಗ್ ಆಫೀಸರ್ಗಳನ್ನಾಗಿ 136 ಜನರನ್ನು ನಿಯೋಜಿಸಲಾಗಿತ್ತು. ಭದ್ರತೆಗಾಗಿ ಒಬ್ಬ ಎಸಿಪಿ, 4 ಜನ ಪಿಐ, 11 ಜನ ಪಿಎಸ್ಐ, ಎಎಸ್ಐ-30, ಮುಖ್ಯಪೇದೆ-50, ಪೇದೆ-60 ಜನ ಸೇರಿದಂತೆ 158 ಜನ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ಚುನಾವಣಾಧಿಕಾರಿ ಶಶಿಧರ ಮಾಡ್ಯಾಳ್ ತಿಳಿಸಿದ್ದಾರೆ.
ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ 11,480 ಮತದಾರರ ಪೈಕಿ 8,249 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಚುನಾವಣೆ ಕಾವು ಹೆಚ್ಚಾಗಿದ್ದು ಮತದಾನದ ವೇಳೆ ಕಂಡು ಬಂದಿತು. ಕಳೆದ ವರ್ಷದ ಏಪ್ರಿಲ್ನಲ್ಲೇ ಚುನಾವಣೆ ನಡೆಯಬೇಕಿತ್ತು. ಆದರೆ ವಿವಿಧ ವಿಚಾರಗಳಿಗಾಗಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಇದರಿಂದಾಗಿ ಚುನಾವಣೆ ವಿಳಂಬವಾಗಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್ ಜೂ.15ರೊಳಗೆ ಚುನಾವಣೆ ಮುಗಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ನಡೆಯಿತು.
ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ, ನಿರ್ದೇಶಕರು, ಅಜೀವ ಸದಸ್ಯರು, ಆಸ್ಪತ್ರೆ ಮಂಡಳಿ, ಶೈಕ್ಷಣಿಕ ಮಂಡಳಿ ಸೇರಿದಂತೆ ವಿವಿಧ 52 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೆಳಗಿನಿಂದಲೇ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಮಂಡಳಿಯ 52 ಸ್ಥಾನಗಳಿಗೆ ಒಟ್ಟು 160 ಸ್ಪರ್ಧಾಳುಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
25 ಮತಗಟ್ಟೆಗಳು
ಶಾಂತಿಯುತ ಮತದಾನಕ್ಕಾಗಿ ಇಲ್ಲಿನ ನೆಹರು ಕಾಲೇಜಿನಲ್ಲಿ ಒಟ್ಟು 25 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು. ಮತಗಟ್ಟೆಯೊಳಗೆ ಮೊಬೈಲ್ ನಿಷೇಧಿಸಿದ್ದರೂ, ಪೊಲೀಸರನ್ನು ಕಣ್ತಪ್ಪಿಸಿ ಅನೇಕರು ಮತಗಟ್ಟೆಯಲ್ಲಿ ಮೊಬೈಲ್ ಒಯ್ಯುತ್ತಿದ್ದ ದೃಶ್ಯ ಅಲ್ಲಿ ಸಾಮಾನ್ಯವಾಗಿತ್ತು. ಮತಗಟ್ಟೆ ಹೊರಗೆ ಅಭ್ಯರ್ಥಿಗಳು, ಅವರ ಬೆಂಬಲಿತರು ಮತದಾರರನ್ನು ಸೆಳೆಯುತ್ತಿದ್ದ ದೃಶ್ಯವಂತೂ ಸಾಮಾನ್ಯವಾಗಿತ್ತು.
ಬೆಲೆಯೇ ಇರಲಿಲ್ಲ
ಮತದಾನ ಸಂದರ್ಭದಲ್ಲಿ ಮತಗಟ್ಟೆಯ ಸುತ್ತಲಿನ ಪ್ರದೇಶದಲ್ಲಿ ಗದ್ದಲ, ಗಲಾಟೆ ಉಂಟಾಗಬಾರದೆಂಬ ಉದ್ದೇಶದಿಂದ ಮತಗಟ್ಟೆಯ 200 ಮೀಟರ್ ಅಂತರದಲ್ಲಿ 144ನೇ ಕಲಮಿನನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಇಲ್ಲಿ ನಿಷೇಧಾಜ್ಞೆಗೆ ಬೆಲೆಯೇ ಇರಲಿಲ್ಲ. ಮತಗಟ್ಟೆಗೆ ಹೋಗುತ್ತಿರಲಿಲ್ಲವಾದರೂ ಮತಗಟ್ಟೆಯಿಂದ ಅಣತಿ ದೂರದಲ್ಲಿ ಜನರು ಗುಂಪು ಗೂಡಿ ನಿಂತಿರುತ್ತಿದ್ದರು. ಅಲ್ಲದೆ, ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅನೇಕರು ಮನವಿ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಪದೇ ಪದೆ ಜನರನ್ನು ಇಲ್ಲಿ ನಿಷೇಧಾಜ್ಞೆ ಇದೆ. ಆ ಕಡೆ ತೆರಳಿ ಎಂದು ಮೈಕ್ ಮೂಲಕ ಸೂಚನೆ ನೀಡುತ್ತಿದ್ದರು. ಆದರೆ ಅಭ್ಯರ್ಥಿಗಳು ಸೇರಿದಂತೆ ಅವರ ಬೆಂಬಲಿಗರು ಇದಕ್ಕೆ ಕ್ಯಾರೆ ಎನ್ನದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಚುನಾವಣೆಗಾಗಿ ಪಿಆರ್ಒಗಳನ್ನಾಗಿ 30 ಜನ ಅಧಿಕಾರಿಗಳನ್ನು, ಎಪಿಆರ್ಒಗಳನ್ನಾಗಿ 130 ಅಧಿಕಾರಿಗಳನ್ನು ಪೊಲಿಂಗ್ ಆಫೀಸರ್ಗಳನ್ನಾಗಿ 136 ಜನರನ್ನು ನಿಯೋಜಿಸಲಾಗಿತ್ತು. ಭದ್ರತೆಗಾಗಿ ಒಬ್ಬ ಎಸಿಪಿ, 4 ಜನ ಪಿಐ, 11 ಜನ ಪಿಎಸ್ಐ, ಎಎಸ್ಐ-30, ಮುಖ್ಯಪೇದೆ-50, ಪೇದೆ-60 ಜನ ಸೇರಿದಂತೆ 158 ಜನ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ಚುನಾವಣಾಧಿಕಾರಿ ಶಶಿಧರ ಮಾಡ್ಯಾಳ್ ತಿಳಿಸಿದ್ದಾರೆ.