ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ನೇಮಕ ಮಾಡುವಲ್ಲಿರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಶೀಘ್ರವಾಗಿ ಕುಲಪತಿಯನ್ನು ನೇಮಕ ಮಾಡದಿದ್ದಲ್ಲಿಆಮ್ ಆದ್ಮಿ ಪಕ್ಷದ ವತಿಯಿಂದ ಸರಣಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಎಪಿ ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ಸಂತೋಷ ನರಗುಂದ ಹೇಳಿದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಳೆದ 15 ತಿಂಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೇವಲ ಪ್ರಭಾರ ಕುಲಪತಿಗಳನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಶೈಕ್ಷಣಿಕ ಪ್ರಗತಿಯಲ್ಲಿಹಿನ್ನೆಡೆ ಅನುಭವಿಸುತ್ತಿದೆ. ಕೇವಲ ಪ್ರಭಾರ ಕುಲಪತಿಗಳ ನೇಮಕದಿಂದ ವಿವಿ ಆಡಳಿತ ಸಮರ್ಥವಾಗಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ವಿವಿಗೆ ಕುಲಪತಿ ನೇಮಕ ಮಾಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕುಲಪತಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸರಕಾರ ಹಾಗೂ ರಾಜ್ಯಪಾಲರು ವಿವಿಗೆ ಮುಂದಿನ ಹತ್ತು ದಿನಗಳಲ್ಲಿಕಾಯಂ ಕುಲಪತಿ ನೇಮಕ ಮಾಡಬೇಕು ಎಂದರು.
ನಾಗರಾಜ ಕರೆಣ್ಣಾವರ, ಅನಂತಕುಮಾರ ಭಾರತಿಯ, ಕರ್ನಾಟಕ ಮಹಿಳಾ ವಿವಿ ಹಿಂದಿನ ಕುಲಪತಿ ಡಾ. ವಿ.ಬಿ. ಮಾಗನೂರ, ಶಶಿಕುಮಾರ ಸುಳ್ಳದ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಳೆದ 15 ತಿಂಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೇವಲ ಪ್ರಭಾರ ಕುಲಪತಿಗಳನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಶೈಕ್ಷಣಿಕ ಪ್ರಗತಿಯಲ್ಲಿಹಿನ್ನೆಡೆ ಅನುಭವಿಸುತ್ತಿದೆ. ಕೇವಲ ಪ್ರಭಾರ ಕುಲಪತಿಗಳ ನೇಮಕದಿಂದ ವಿವಿ ಆಡಳಿತ ಸಮರ್ಥವಾಗಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ವಿವಿಗೆ ಕುಲಪತಿ ನೇಮಕ ಮಾಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕುಲಪತಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸರಕಾರ ಹಾಗೂ ರಾಜ್ಯಪಾಲರು ವಿವಿಗೆ ಮುಂದಿನ ಹತ್ತು ದಿನಗಳಲ್ಲಿಕಾಯಂ ಕುಲಪತಿ ನೇಮಕ ಮಾಡಬೇಕು ಎಂದರು.
ನಾಗರಾಜ ಕರೆಣ್ಣಾವರ, ಅನಂತಕುಮಾರ ಭಾರತಿಯ, ಕರ್ನಾಟಕ ಮಹಿಳಾ ವಿವಿ ಹಿಂದಿನ ಕುಲಪತಿ ಡಾ. ವಿ.ಬಿ. ಮಾಗನೂರ, ಶಶಿಕುಮಾರ ಸುಳ್ಳದ ಇತರರು ಸುದ್ದಿಗೋಷ್ಠಿಯಲ್ಲಿದ್ದರು.