ಆ್ಯಪ್ನಗರ

ವ್ಯಕ್ತಿತ್ವ ವಿಕಸನ ಅತೀ ಅವಶ್ಯ: ರವಿ ನಾಯ್ಕ

ಹುಬ್ಬಳ್ಳಿ : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವ್ಯಕ್ತಿತ್ವ ವಿಕಸನ ಅತೀ ಅವಶ್ಯವಾಗಿದೆ ಎಂದು ಪೊಲೀಸ್‌ ಉಪ ಅಧೀಕ್ಷಕ ರವಿ ನಾಯ್ಕ ಹೇಳಿದರು.

Vijaya Karnataka 26 Apr 2019, 5:00 am
ಹುಬ್ಬಳ್ಳಿ : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವ್ಯಕ್ತಿತ್ವ ವಿಕಸನ ಅತೀ ಅವಶ್ಯವಾಗಿದೆ ಎಂದು ಪೊಲೀಸ್‌ ಉಪ ಅಧೀಕ್ಷಕ ರವಿ ನಾಯ್ಕ ಹೇಳಿದರು.
Vijaya Karnataka Web personality evolution is essential ravi naika
ವ್ಯಕ್ತಿತ್ವ ವಿಕಸನ ಅತೀ ಅವಶ್ಯ: ರವಿ ನಾಯ್ಕ


ನಗರದ ಘಂಟಿಕೇರಿಯ ಬಾಲಕಿಯರ ಸರಕಾರಿ ಬಾಲಮಂದಿದಲ್ಲಿ ಗುರುವಾರ ಬಾಲ ಮಂದಿರದ ಮಕ್ಕಳಿಗೆ ಆಯೋಜಿಸಿದ್ದ ಒಂದು ವಾರದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತಮ ವ್ಯಕ್ತಿತ್ವ ಸಹಕಾರಿಯಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕಷ್ಟಪಟ್ಟು ಓದಿದರೆ ಮುಂದೆ ಜೀವನದಲ್ಲಿ ಗೆಲುವು ಶತಸಿದ್ಧ ಎಂದು ತಿಳಿಸಿದರು.

ಮುಖ್ಯ ಅತಿಥಿ ಶಂಕರ ಹಲಗತ್ತಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ವ್ಯಕ್ತಿಯು ಒಬ್ಬ ಪ್ರತಿಭಾವಂತ ವ್ಯಕ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲೆ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ಹೆಣ್ಣು ಮಕ್ಕಳಿಗೆ ತಮ್ಮ ಆತ್ಮರಕ್ಷ ಣೆ ಕಲೆ ಅತೀ ಅವಶ್ಯವಾಗಿದೆ ಎಂದರು.

ವಿಶೇಷ ಭೂ ಸ್ವಾಧೀನಾಧಿಕಾರಿ ಶಾರದಾ ಕೋಲಕಾರ ಮಾತನಾಡಿ ಹೆಣ್ಣು ಮಕ್ಕಳು ನಮ್ಮ ದೇಶದ ಆಸ್ತಿ ಹಾಗೂ ಅವರ ಸಂರಕ್ಷ ಣೆಯೇ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ಅದಕ್ಕೂ ಮುನ್ನ ಏಪ್ರೀಲ್‌ ತಿಂಗಳಲ್ಲಿ ಜನಿಸಿದ ಸಂಸ್ಥೆಯ ಎಲ್ಲ ಮಕ್ಕಳ ಹುಟ್ಟುಹಬ್ಬ ವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು.

ಬಾಲವಿಕಾಸ ಅಕಾಡೆಮಿ ಕಚೇರಿಯ ಅಧೀಕ್ಷಕ ಸಿ. ಮುತ್ತಣ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಜಯರಾಜ ಪೂವಣಿ, ಅಶ್ವಿನಿ ಮೊರಬ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ