ಆ್ಯಪ್ನಗರ

ಹಜ್‌ ಯಾತ್ರಿಗಳಿಗೆ ಬಿಳ್ಕೋಡುಗೆ

ನವಲಗುಂದ : ಶ್ರೀಮಂತರಾಗಲಿ, ಬಡವರಾಗಲಿ ಪ್ರತಿಯೊಬ್ಬ ಮುಸ್ಲಿಂರು ಜೀವನದಲ್ಲಿ ಪವಿತ್ರ ಹಜ್‌ ಯಾತ್ರೆ ಮಾಡಿ ಅಲ್ಲಾಹುವಿನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಬೇಕೆಂಬ ಹಂಬಲ ಹೊಂದಿರುತ್ತಾನೆ. ಆದರೆ, ಬಡವರು ಆರ್ಥಿಕ ಮುಗ್ಗಟ್ಟಿನಿಂದ ಇಂತಹ ಪವಿತ್ರ ಯಾತ್ರೆ ನಡೆಸಲು ಆಗದ ಕಾರಣ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಸಚಿವ ಜಮೀರ ಅಹಮ್ಮದ ಹಜ್‌ ಯಾತ್ರೆ ಸಂಪೂರ್ಣ ವೆಚ್ಚ ಭರಿಸಿ ಪಟ್ಟಣದಿಂದ 5ಜನ ಮೌಲ್ವಿಗಳಿಗೆ ಯಾತ್ರೆಯ ಅವಕಾಶ ಒದಗಿಸಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ ಹೇಳಿದರು.

Vijaya Karnataka 15 Jul 2019, 5:00 am
ನವಲಗುಂದ : ಶ್ರೀಮಂತರಾಗಲಿ, ಬಡವರಾಗಲಿ ಪ್ರತಿಯೊಬ್ಬ ಮುಸ್ಲಿಂರು ಜೀವನದಲ್ಲಿ ಪವಿತ್ರ ಹಜ್‌ ಯಾತ್ರೆ ಮಾಡಿ ಅಲ್ಲಾಹುವಿನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಬೇಕೆಂಬ ಹಂಬಲ ಹೊಂದಿರುತ್ತಾನೆ. ಆದರೆ, ಬಡವರು ಆರ್ಥಿಕ ಮುಗ್ಗಟ್ಟಿನಿಂದ ಇಂತಹ ಪವಿತ್ರ ಯಾತ್ರೆ ನಡೆಸಲು ಆಗದ ಕಾರಣ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಸಚಿವ ಜಮೀರ ಅಹಮ್ಮದ ಹಜ್‌ ಯಾತ್ರೆ ಸಂಪೂರ್ಣ ವೆಚ್ಚ ಭರಿಸಿ ಪಟ್ಟಣದಿಂದ 5ಜನ ಮೌಲ್ವಿಗಳಿಗೆ ಯಾತ್ರೆಯ ಅವಕಾಶ ಒದಗಿಸಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ ಹೇಳಿದರು.
Vijaya Karnataka Web DRW-14-NVL-1

ನವಲಗುಂದದಿಂದ ಹಜ್‌ ಯಾತ್ರೆಗೆ ತೆರಳಿದ ಮೌಲ್ವಿಗಳನ್ನು ವಿನೋದ ಅಸೂಟಿ ಬಿಳ್ಕೋಟ್ಟರು. ಅಲ್ತಾಫ ಕಿತ್ತೂರ,ಉಸ್ಮಾನ ಬಬರ್ಚಿ,ಆರ್‌.ಡಿ.ಧಾರವಾಡ ಇದ್ದರು.


ಶನಿವಾರ ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಹಜ್‌ ಯಾತ್ರಾರ್ಥಿಗಳಿಗೆ ಆಯೋಜಿಸಿದ್ದ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹಜ್‌ ಯಾತ್ರಿಗಳಿಗೆ ಪ್ರತ್ಯೇಕವಾಗಿ ಸಹಾಯಧನ ವಿತರಿಸಿದರು.

ಹಿರಿಯ ಮುಖಂಡರಾದ ಅಲ್ತಾಫ್‌ ಕಿತ್ತೂರ ಮಾತನಾಡಿ, ಹಜ್‌ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬರೂ ಪುಣ್ಯವಂತರೇ ಸರಿ, ಯಾತ್ರೆಗೆ ತೆರಳಿದ ಎಲ್ಲರೂ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ಸೌಹಾರ್ದಯುತ, ಸಮೃದ್ಧ ಜೀವನ ನಡೆಸುವಂತೆ ಪ್ರಾರ್ಥನೆ ಸಲ್ಲಿಸಬೇಕು ಎಂದರು.

ಇಮ್ತ್ತಿಯಾಜಹಮ್ಮದ ಮಕಾನದಾರ,ಮೆಹಬೂಬ ಅಲಮ್‌ ದರಾದ್ದೂನ್‌,ಅಬ್ದುಲ್‌ ಅಹಮ್ಮದ ಖಾಜಿ,ಖಾದ್ರಿಸಾಬ್‌ ಸನ್ನುಭಾಯಿ ಅವರನ್ನು ಸತ್ಕರಿಸಲಾಯಿತು. ಮುಖಂಡರಾದ ಉಸ್ಮಾನ್‌ ಬಬರ್ಚಿ,ದಾವಲಸಾಬ್‌ ಮಸೂತಿ,ಆರ್‌.ಡಿ.ಧಾರವಾಡ,ಅಬ್ಬಾಸ್‌ ದೇವರಿಡು,ಐ.ಡಿ.ಭಾಗವಾನ್‌,ಕಾಶೀಮ ನಾಶಿಪುಡಿ,ಇಮಾಮಸಾಬ ಪೀರಖಾನ್‌,ಎ.ಎಮ್‌.ನದಾಫ್‌ ಮತ್ತಿತರರಿದ್ದರು. ರಿಯಾಜ್‌ಅಹಮ್ಮದ ಪೀರಜಾದೆ ನಿರೂಪಿಸಿದರು.ಎ.ಎಂ.ನದಾಫ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ