ಆ್ಯಪ್ನಗರ

ಪ್ರಧಾನಿ ಮೋದಿಗೆ ಒಕ್ಕೂಟ ವ್ಯವಸ್ಥೆಯ ಕಲ್ಪನೆಯೇ ಇಲ್ಲ : ಎಸ್‌.ಆರ್‌.ಪಾಟೀಲ ಟೀಕೆ

ಪ್ರವಾಹದ ನಂತರ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಎರಡನೇ ಬಾರಿ ಬಂದರೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆ ಎಂದ ಕಲ್ಪನೆಯೇ ಮೋದಿ ಅವರಿಗಿಲ್ಲಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ ಟೀಕಿಸಿದ್ದಾರೆ.

Vijaya Karnataka Web 3 Jan 2020, 7:32 pm
ಧಾರವಾಡ: ಪ್ರವಾಹದ ನಂತರ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಎರಡನೇ ಬಾರಿ ಬಂದಿದ್ದಾರೆ. ಚಂದ್ರಯಾನ ವೀಕ್ಷ ಣೆಗೆ ಬಂದಾಗಲೂ ರಾಜ್ಯದ ಸಮಸ್ಯೆ ಕೇಳಲಿಲ್ಲ. ಈಗಲೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆ ಎನ್ನುವ ಕಲ್ಪನೆ ಮೋದಿ ಅವರಿಗಿಲ್ಲಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ ಹೇಳಿದರು.
Vijaya Karnataka Web sr patil


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ ಪ್ರಧಾನಿ ರಾಜ್ಯಕ್ಕೆ ಎರಡೆರಡು ಬಾರಿ ಬಂದರೂ ಸಮಸ್ಯೆ ಆಲಿಸದೇ, ಕೇವಲ ಭಾಷಣ ಬಿಗಿದು ಹೋಗುತ್ತಿದ್ದಾರೆ. ಜನರ ಸಂಕಷ್ಟ ಹಾಗೂ ಸಮಸ್ಯೆಗಳನ್ನು ಆಲಿಸದಿದ್ದರೆ ಹೇಗೆ? ನಮ್ಮ ಮನವಿಗೂ ಪಿಎಂ ಸ್ಪಂದಿಸಿಲ್ಲ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದನ್ನು ನೋಡಿದರೆ ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿಇದೆ ಎಂಬ ಕಲ್ಪನೆ ಅವರಿಗೆ ಇಲ್ಲ’ ಎಂದು ಕುಟುಕಿದರು.

ರಾಜಕೀಯ ಭಾಷಣಕ್ಕೆ ಕಿಡಿ:
‘ಇಡೀ ಜಗತ್ತಿನಲ್ಲಿಯೇ ತ್ರಿವಿಧ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಮಠದಲ್ಲಿಮೋದಿ ಭಾಷಣ ಮಾಡುವಾಗ ರಾಜಕೀಯ ಪ್ರಸ್ತಾಪಿಸಿರುವುದು ಸರಿಯಾದ ಬೆಳವಣಿಗೆ ಅಲ್ಲ. ಶ್ರೀಮಠದಲ್ಲಿಹತ್ತು ಸಾವಿರ ವಿದ್ಯಾರ್ಥಿಗಳಿದ್ದಾರೆ. ಅಲ್ಲಿಯಾವ ಜಾತಿ-ಧರ್ಮ ಕೇಳಲ್ಲ. ಬಸವಾದಿ ಶರಣರ ಆಶಯಕ್ಕೆ ಅನುಗುಣವಾಗಿ ನಡೆಯುವ ಮಠದ ಮಕ್ಕಳ ಮುಂದೆ ರಾಜಕೀಯ ಮಾತು ಆಡಬಾರದಿತ್ತು. ಸಿದ್ಧಗಂಗಾ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಘೋಷಿಸಬಹುದೆಂದು ನಾಡಿನ ಜನ ಭಾವಿಸಿದ್ದರು. ಆದರೆ ಅವರು ದ್ವೇಷ, ಅಸೂಯೆ ಮಾತು ಆಡಿದ್ದಾರೆ’ ಎಂದು ದೂರಿದರು.

ಸಿದ್ದರಾಮಯ್ಯನವರಿಗೆ ರಾಜಕೀಯ ಯಾವುದು, ಧಾರ್ಮಿಕ ಯಾವುದು ತಿಳಿದಿಲ್ಲ: ನಳಿನ್‌ ಆಕ್ರೋಶ

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ಲಖಾತೆ ಮುಖ್ಯಮಂತ್ರಿ ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಆದಷ್ಟು ಬೇಗನೇ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಸಂಪುಟ ವಿಸ್ತರಣೆ ಮಾಡಿದ ಬಳಿಕ ಈ ಸರಕಾರದ ನಿಜವಾದ ಬಣ್ಣ ಬಯಲಾಗಲಿದೆ’ಎಂದರು.

ತುಟಿ ಬಿಚ್ಚದ ನಾಯಕರು
ಗೋವಾ ಮಹದಾಯಿ ನೀರು ಕಳ್ಳತನ ಮಾಡಿದೆ. ಕಳ್ಳತನದ ಬಗ್ಗೆ ಸ್ವತಃ ಗೋವಾ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಈ ಭಾಗದಲ್ಲಿಇಬ್ಬರು ಕೇಂದ್ರ ಮಂತ್ರಿಗಳಿದ್ದು, ಸುಮಲತಾ ಸೇರಿ 26 ಜನ ಬಿಜೆಪಿ ಸಂಸದರು, 117 ಜನ ಬಿಜೆಪಿ ಶಾಸಕರು ಇದ್ದಾರೆ. ಆದರೂ ರಾಜ್ಯಕ್ಕೆ ಅನ್ಯಾಯ ಆದಾಗ ತುಟಿ ಪಿಟಕ್‌ ಎನ್ನುವುದಿಲ್ಲ. ಮಹದಾಯಿ ವಿಷಯದಲ್ಲಿಗೋವಾ ರಾಜ್ಯದ ವಿರೋಧ ಪಕ್ಷ ದ ಒಪ್ಪಿಗೆ ತರುವಂತೆ ಪ್ರಧಾನಿ ಹೇಳಿದ್ದಾರೆ. ದೇಶದ ಇತಿಹಾಸದಲ್ಲೇ ಓರ್ವ ಪ್ರಧಾನಿ ಈ ರೀತಿ ಹೇಳಿದ್ದು ನಾಚಿಗೇಡು. ಶೇಮ್‌..ಶೇಮ್‌.. ಎಂದು ಕುಟುಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ