ಬೇಂದ್ರೆ ಬದುಕೇ ಕಾವ್ಯ
ಧಾರವಾಡ: ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿವರಕವಿ ಡಾ.ದ.ರಾ.ಬೇಂದ್ರೆಯವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಬಳಿಕ ಪ್ರೊ.ಬಸವರಾಜ ಒಕ್ಕುಂದ ಅವರು, ಕರುಣವೇ ಬೇಂದ್ರೆ ಕಾವ್ಯದ ಸ್ಥಾಯಿ ವಿಷಯದ ಕುರಿತು ಮಾತನಾಡಿ, ಬೇಂದ್ರೆ ಅವರ ಬದುಕೇ ಕಾವ್ಯವಾಗಿತ್ತು. ನರಬಲಿ
Vijaya Karnataka 29 Oct 2019, 5:00 am
ಧಾರವಾಡ: ನಗರದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿವರಕವಿ ಡಾ.ದ.ರಾ.ಬೇಂದ್ರೆಯವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಬಳಿಕ ಪ್ರೊ.ಬಸವರಾಜ ಒಕ್ಕುಂದ ಅವರು, ಕರುಣವೇ ಬೇಂದ್ರೆ ಕಾವ್ಯದ ಸ್ಥಾಯಿ ವಿಷಯದ ಕುರಿತು ಮಾತನಾಡಿ, ಬೇಂದ್ರೆ ಅವರ ಬದುಕೇ ಕಾವ್ಯವಾಗಿತ್ತು. ನರಬಲಿ ಕವನ ಬರೆದು ಜೈಲುವಾಸವನ್ನು ಅನುಭವಿಸಿ ಶಿಕ್ಷಕ ವೃತ್ತಿಯನ್ನು ಕೂಡ ಕಳೆದುಕೊಂಡರು. ಇಂತಹ ಕವಿ ಅವರ ಕಾವ್ಯದ ಮೂಲ ಸ್ಥಾಯಿ ಕರುಣವೇ ಆಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಬೇಂದ್ರೆ ಅವರ ಭಾವಚಿತ್ರಕ್ಕೆ ಅಧ್ಯಕ್ಷರು ಹಾಗೂ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ಯುವ ಗಾಯಕಿ ಸಂಗೀತಾ ಎಲ್.ನಾಯ್ಕ ಅವರು ಬೇಂದ್ರೆಯವರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.ಅವರಿಗೆ ತಬಲಾದಲ್ಲಿಅನಿಲ ಮೇತ್ರಿ ಹಾಗೂ ಹಾರ್ಮೊನಿಯಂನಲ್ಲಿಡಾ.ಪರಶುರಾಮ ಕಟ್ಟಿಸಂಗಾವಿ ಸಾಥ್ ನೀಡಿದರು.
ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಡಾ.ಸಂಗಮನಾಥ ಲೋಕಾಪೂರ, ಪ್ರೊ.ಎ.ಜಿ.ಸಬರದ, ಕೆ.ವಿ.ಹಾವನೂರ, ಜಿ.ಬಿ.ಹೊಂಬಳ, ಬಿ.ಎಸ್.ಶಿರೋಳ, ಬಸವರಾಜ ಹಿರೇಮಠ, ಕಸ್ತೂರಿ ಒಕ್ಕುಂದ, ಭಾರ್ಗವಿ ಹೆಗಡೆ, ಶಿವಲೀಲಾ ಮರಿಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸತೀಶ ಜಾಧವ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.
ಬಳಿಕ ಪ್ರೊ.ಬಸವರಾಜ ಒಕ್ಕುಂದ ಅವರು, ಕರುಣವೇ ಬೇಂದ್ರೆ ಕಾವ್ಯದ ಸ್ಥಾಯಿ ವಿಷಯದ ಕುರಿತು ಮಾತನಾಡಿ, ಬೇಂದ್ರೆ ಅವರ ಬದುಕೇ ಕಾವ್ಯವಾಗಿತ್ತು. ನರಬಲಿ ಕವನ ಬರೆದು ಜೈಲುವಾಸವನ್ನು ಅನುಭವಿಸಿ ಶಿಕ್ಷಕ ವೃತ್ತಿಯನ್ನು ಕೂಡ ಕಳೆದುಕೊಂಡರು. ಇಂತಹ ಕವಿ ಅವರ ಕಾವ್ಯದ ಮೂಲ ಸ್ಥಾಯಿ ಕರುಣವೇ ಆಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಬೇಂದ್ರೆ ಅವರ ಭಾವಚಿತ್ರಕ್ಕೆ ಅಧ್ಯಕ್ಷರು ಹಾಗೂ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ಯುವ ಗಾಯಕಿ ಸಂಗೀತಾ ಎಲ್.ನಾಯ್ಕ ಅವರು ಬೇಂದ್ರೆಯವರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.ಅವರಿಗೆ ತಬಲಾದಲ್ಲಿಅನಿಲ ಮೇತ್ರಿ ಹಾಗೂ ಹಾರ್ಮೊನಿಯಂನಲ್ಲಿಡಾ.ಪರಶುರಾಮ ಕಟ್ಟಿಸಂಗಾವಿ ಸಾಥ್ ನೀಡಿದರು.
ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಡಾ.ಸಂಗಮನಾಥ ಲೋಕಾಪೂರ, ಪ್ರೊ.ಎ.ಜಿ.ಸಬರದ, ಕೆ.ವಿ.ಹಾವನೂರ, ಜಿ.ಬಿ.ಹೊಂಬಳ, ಬಿ.ಎಸ್.ಶಿರೋಳ, ಬಸವರಾಜ ಹಿರೇಮಠ, ಕಸ್ತೂರಿ ಒಕ್ಕುಂದ, ಭಾರ್ಗವಿ ಹೆಗಡೆ, ಶಿವಲೀಲಾ ಮರಿಗೌಡ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸತೀಶ ಜಾಧವ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.