ಆ್ಯಪ್ನಗರ

ಹುಬ್ಬಳ್ಳಿ: ವಿಷ ಕುಡಿಸಿ ಭ್ರೂಣ ಹತ್ಯೆ ಆರೋಪ, ಭ್ರೂಣ ಪರೀಕ್ಷೆಗೆ ಕಳುಹಿದ ವೈದ್ಯರು

ಹೊಟ್ಟೆನೋವಿನಿಂದ ಕಿಮ್ಸ್‌ಗೆ ದಾಖಲಾಗಿದ್ದ ಇಲ್ಲಿನ ಅಲ್ತಾಫ್‌ ಪ್ಲಾಟ್‌ ನಿವಾಸಿ, ಗರ್ಭಿಣಿ ಶಾಹಿನಾ ಎಂಬವರ ಭ್ರೂಣ ಹೊಟ್ಟೆಯಲ್ಲಿಯೇ ಮೃತಪಟ್ಟಿದ್ದು, ಗರ್ಭಿಣಿಗೆ ಅವಳ ಅತ್ತೆ ಹಾಗೂ ...

Vijaya Karnataka Web 1 Feb 2020, 6:57 am
ಹುಬ್ಬಳ್ಳಿ : ಹೊಟ್ಟೆ ನೋವಿನಿಂದ ಕಿಮ್ಸ್‌ಗೆ ದಾಖಲಾಗಿದ್ದ ಇಲ್ಲಿನ ಅಲ್ತಾಫ್‌ ಪ್ಲಾಟ್‌ ನಿವಾಸಿ, ಗರ್ಭಿಣಿ ಶಾಹಿನಾ ಎಂಬವರ ಭ್ರೂಣ ಹೊಟ್ಟೆಯಲ್ಲಿಯೇ ಮೃತಪಟ್ಟಿದ್ದು, ಗರ್ಭಿಣಿಗೆ ಅವಳ ಅತ್ತೆ ಹಾಗೂ ಪತಿ ವಿಷ ಕುಡಿಸಿ ಭ್ರೂಣ ಹತ್ಯೆ ಮಾಡಿದ್ದಾರೆಂದು ಗರ್ಭಿಣಿಯ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ.
Vijaya Karnataka Web hubballi


ಈ ಕುರಿತು ಮಾತನಾಡಿದ ತಾಯಿ ಫಾತಿಮಾ ''ಮಗಳು ಐದು ತಿಂಗಳ ಗರ್ಭಿಣಿ. ಆರೋಗ್ಯವಾಗಿಯೇ ಇದ್ದಳು. ಗುರುವಾರ ಸಂಜೆ ಹೊಟ್ಟೆನೋವು ಎಂದು ಫೋನ್‌ ಮಾಡಿದಳು. ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲದ ಕಾರಣ, ನನಗೆ ಫೋನ್‌ ಮಾಡಿದಳು. ಸಂಜೆ ಕಿಮ್ಸ್‌ಗೆ ದಾಖಲಿಸಿದಾಗ, ಮಗು ಹೊಟ್ಟೆಯಲ್ಲಿಯೇ ಸತ್ತಿದೆ ಎಂದು ವೈದ್ಯರು ಹೇಳಿದರು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿ ಸಂಜೆವರೆಗೂ ಪ್ರಕರಣ ದಾಖಲಾಗಿರಲಿಲ್ಲ. ಈ ಬಗ್ಗೆ ಕಸಬಾಪೇಟೆ ಠಾಣೆ ಪಿಐ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಸಂಪರ್ಕಕ್ಕೆ ಸಿಗಲಿಲ್ಲ.

ವಿಷ ನೀಡಿದರೆ ಗರ್ಭಿಣಿಗೆ ಸಮಸ್ಯೆಯಾಗುತ್ತಿತ್ತು. ಭ್ರೂಣದ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಭ್ರೂಣವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ನಂತರ ನಿಖರ ಸತ್ಯಾಸತ್ಯತೆ ಗೊತ್ತಾಗಲಿದೆ.
ಡಾ. ಸಿ. ಅರುಣಕುಮಾರ್‌, ಕಿಮ್ಸ್‌ ಅಧೀಕ್ಷಕ


ಕಿಮ್ಸ್‌ ಮೇಲಿಂದ ಬಿದ್ದು ವ್ಯಕ್ತಿ ಸಾವು
ಹುಬ್ಬಳ್ಳಿ: ಚಿಕಿತ್ಸೆ ಪಡೆಯಲು ಕಿಮ್ಸ್‌ಗೆ ದಾಖಲಾಗಿದ್ದ ರೋಗಿಯೊಬ್ಬ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಕಿಮ್ಸ್‌ನಲ್ಲಿಶುಕ್ರವಾರ ನಡೆದಿದೆ.

ಇಲ್ಲಿಯ ಪಡದಯ್ಯನ ಹಕ್ಕಲ್‌ ನಿವಾಸಿ ಮೆಹಬೂಬಸಾಬ ಮೊಹ್ಮದ ಇಸ್ಮಾಯಿಲ್‌ ಬಾಗವಾಲೆ(34) ಮೃತಪಟ್ಟ ರೋಗಿ. ಕಿಮ್ಸ್‌ನ 303ನೇ ವಾರ್ಡ್‌ನಲ್ಲಿಅನಾರೋಗ್ಯದ ಹಿನ್ನೆಲೆಯಲ್ಲಿಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಶುಕ್ರವಾರ ಕಿಮ್ಸ್‌ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ