ಆ್ಯಪ್ನಗರ

ಹುಬ್ಬಳ್ಳಿ: ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನ ರಕ್ಷಿಸಿದ ಪೇದೆ

ನೀರಿನ ರಭಸ ಇದ್ದರೂ ವೃದ್ಧನಿಗೆ ಹಗ್ಗ ಎಸೆದು ಎದೆ ಮಟ್ಟದವರೆಗೆ ಇದ್ದ ನೀರಿನಲ್ಲಿಯೇ ಪೊಲೀಸ್ ಪ್ರದೀಪ ತೆರಳಿ ನೀರಿನ ಸೆಳವಿಗೆ ಸಿಕ್ಕು ಬಸವಳಿದಿದ್ದ ವೃದ್ಧನಿಗೆ ಧೈರ್ಯ ಹೇಳಿ ಹೊರ ಕರೆತಂದು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

Vijaya Karnataka Web 17 Aug 2020, 9:00 pm
ಹುಬ್ಬಳ್ಳಿ: ರಭಸವಾಗಿ ಹರಿಯುತ್ತಿದ್ದ ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನನ್ನು ನಗರ ಮೀಸಲು ಪಡೆಯ ಪೇದೆಯೊಬ್ಬರು ರಕ್ಷಿಸಿದ್ದು, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್


ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದ ಇಮಾಂಸಾಬ್ ಕರೀಮಸಬ್ ಬೆಳಗಲಿ (72) ಎಂಬವರು ಊರ ಹೊರ ವಲಯದ ನಾರಾಯಣಪುರ ಗ್ರಾಮ ಬಳಿಯ ಬೆಣ್ಣೆ ಹಳ್ಳದ ದಂಡೆಯಲ್ಲಿ ಉರುವಲು ಕಟ್ಟಿಗೆ ತರಲು ಸೋಮವಾರ ಹೋಗಿದ್ದರು. ಕಟ್ಟಿಗೆ ಕಡಿಯುತ್ತಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದಾರೆ.

ಇದನ್ನು ಗಮನಿಸಿದ್ದ ಯುವಕರಿಬ್ಬರು ವೃದ್ಧನನ್ನು ರಕ್ಷಿಸಲು ಮುಂದಾದರೂ ಸಾಧ್ಯವಾಗದೇ ಅಸಹಾಯಕರಾಗಿ ಅಲ್ಲಿಯೇ ನಿಂತಿದ್ದಾರೆ. ಇದೇ ವೇಳೆ ಡ್ಯೂಟಿಗೆ ಎಂದು ಹುಬ್ಬಳ್ಳಿಗೆ ಬೈಕ್ ಮೇಲೆ ಬರುತಿದ್ದ ಯರಗುಪ್ಪಿ ಗ್ರಾಮದ ಪ್ರದೀಪ ಮಹಾದೇವಪ್ಪ ಅಣ್ಣಿಗೇರಿ ಪೊಲೀಸ್ ಪೇದೆಯನ್ನು ತಡೆದ ಯುವಕರು ವಿಷಯ ತಿಳಿಸಿದ್ದಾರೆ.

ಸಮಯ ಪ್ರಜ್ಞೆ ಮೆರೆದು ಕೆಲವರಿಗೆ ಫೋನ್ ಮಾಡಿ ಹಗ್ಗ ತರಿಸಿಕೊಂಡಿದ್ದಾರೆ. ಈ ಹಂತದಲ್ಲಿ ವೃದ್ಧನು ಚಿಕ್ಕ ಜಾಲಿಕಂಟಿ ಹಿಡಿದಿರುವುದು ಪ್ರಾಣ ರಕ್ಷಣೆಗೆ ಹೆಚ್ಚು ಸಹಾಯಕವಾಗಿದೆ.

ನೀರಿನ ರಭಸ ಇದ್ದರೂ ವೃದ್ಧನಿಗೆ ಹಗ್ಗ ಎಸೆದು ಎದೆ ಮಟ್ಟದವರೆಗೆ ಇದ್ದ ನೀರಿನಲ್ಲಿಯೇ ಪೊಲೀಸ್ ಪ್ರದೀಪ ತೆರಳಿ ನೀರಿನ ಸೆಳವಿಗೆ ಸಿಕ್ಕು ಬಸವಳಿದಿದ್ದ ವೃದ್ಧನಿಗೆ ಧೈರ್ಯ ಹೇಳಿ ಹೊರ ಕರೆತಂದು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯ ಕರ್ನಾಟಕ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ