ಆ್ಯಪ್ನಗರ

ಧಾರವಾಡ: ಪೊಲೀಸ್‌ ಪೇದೆ ದೂರು, ವಕೀಲರ ಹೋರಾಟದ ಎಚ್ಚರಿಕೆ

ಗ್ರಾಮೀಣ ಠಾಣೆ ಪೊಲೀಸ್‌ ಹಾಗೂ ಜಿಲ್ಲಾ ಸರಕಾರಿ ವಕೀಲ ಸುನಿಲ ಗುಡಿ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಪೇದೆ ಗಣೇಶ ಕಾಂಬಳೆ ಎಂಬವರು ವಕೀಲ ಸುನಿಲ ಗುಡಿ ಮತ್ತು ಅಮ್ಮಿನಭಾವಿ ಗ್ರಾಮದ ಯಲ್ಲಪ್ಪ ಕೊಡಬಳಿ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Vijaya Karnataka Web 11 Mar 2020, 2:52 pm
ಧಾರವಾಡ: ಇಲ್ಲಿನ ಗ್ರಾಮೀಣ ಠಾಣೆ ಪೊಲೀಸ್‌ ಹಾಗೂ ಜಿಲ್ಲಾ ಸರಕಾರಿ ವಕೀಲ ಸುನಿಲ ಗುಡಿ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಪೇದೆ ಗಣೇಶ ಕಾಂಬಳೆ ಎಂಬವರು ವಕೀಲ ಸುನಿಲ ಗುಡಿ ಮತ್ತು ಅಮ್ಮಿನಭಾವಿ ಗ್ರಾಮದ ಯಲ್ಲಪ್ಪ ಕೊಡಬಳಿ ವಿರುದ್ಧ ಉಪನಗರ ಠಾಣೆಯಲ್ಲಿ ಸೋಮವಾರ ರಾತ್ರಿ ದೂರು ದಾಖಲಿಸಿದ್ದಾರೆ.
Vijaya Karnataka Web police case on govt lawyer


ವಕೀಲ ಸುನಿಲ ಗುಡಿಯವರನ್ನು 1ನೇ ಆರೋಪಿಯನ್ನಾಗಿ ಹಾಗೂ ಯಲ್ಲಪ್ಪ ಕೊಡಬಳಿಯನ್ನು 2ನೇ ಆರೋಪಿಯನ್ನಾಗಿ ಮಾಡಲಾಗಿದೆ. ಆರೋಪಿತರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಇದನ್ನು ಖಂಡಿಸಿರುವ ಧಾರವಾಡ ವಕೀಲರ ಸಂಘ, ಪೊಲೀಸ್‌ ಇಲಾಖೆಯೇ ಎಸ್ಸಿ, ಎಸ್ಟಿ ಕಾಯ್ದೆಯನ್ನು ದುರ್ಬಳಿಕೆ ಮಾಡಿಕೊಂಡಿದೆ. ಇದನ್ನು ಖಂಡಿಸಿ ಬುಧವಾರ ಹೋರಾಟ ಮಾಡಲಾಗುವುದು ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ದೂರು ಸ್ವೀಕರಿಸಿಲ್ಲ:
ಪೊಲೀಸರ ಕ್ರಮ ಖಂಡಿಸಿ ವಕೀಲ ಸುನಿಲ ಗುಡಿ, ಗ್ರಾಮೀಣ ಠಾಣೆ ಪೊಲೀಸ್‌ ಅಧಿಕಾರಿಗೆ ಘಟನೆ ನಡೆದ ದಿನವೇ ನೀಡಿದ ದೂರನ್ನು ಇಲ್ಲಿಯವರೆಗೂ ಪರಿಗಣಿಸಿಲ್ಲ. ಈಗ ಏಕಾಏಕಿ ಪೊಲೀಸರು ನೀಡಿದ ದೂರನ್ನು ತಕ್ಷಣ ಪರಿಗಣಿಸಿರುವ ಉಪನಗರ ಠಾಣೆ ಅಧಿಕಾರಿ, ಎಫ್‌ಐಆರ್‌ ಮಾಡಿರುವುದು ಖಂಡನೀಯ ಎಂದು ವಕೀಲರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ