ಆ್ಯಪ್ನಗರ

ಕ್ಯಾಮೆರಾ ಕಣ್ಗಾವಲಿನಲ್ಲಿ ಪೊಲೀಸ್‌ ಠಾಣೆಗಳು

ಹುಬ್ಬಳ್ಳಿ : ಜನಸ್ನೇಹಿ ವ್ಯವಸ್ಥೆ ಮತ್ತು ಠಾಣೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಆದೇಶದಂತೆ ಹು-ಧಾ ಕಮಿಷ್ನರೇಟ್‌ ಘಟಕ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಿದೆ.

Vijaya Karnataka 19 Jul 2019, 5:00 am
ಹುಬ್ಬಳ್ಳಿ : ಜನಸ್ನೇಹಿ ವ್ಯವಸ್ಥೆ ಮತ್ತು ಠಾಣೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಆದೇಶದಂತೆ ಹು-ಧಾ ಕಮಿಷ್ನರೇಟ್‌ ಘಟಕ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಿದೆ.
Vijaya Karnataka Web police stations under camera surveillance
ಕ್ಯಾಮೆರಾ ಕಣ್ಗಾವಲಿನಲ್ಲಿ ಪೊಲೀಸ್‌ ಠಾಣೆಗಳು


ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸುವ ಜತೆಗೆ ಠಾಣೆಗೆ ಬರುವ ದೂರುದಾರರಿಗೆ ಮತ್ತು ಸಾರ್ವಜನಿಕರಿಗೆ ಸೂಕ್ತ ಆಡಳಿತ ನೀಡಲು ಒಂದು ಹೆಜ್ಜೆ ಮುಂದಿಟ್ಟಿರುವ ಇಲಾಖೆ, ಈಗಾಗಲೇ ಹು-ಧಾ ಕಮಿಷ್ನರೇಟ್‌ನಲ್ಲಿನ 20ಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಆಯಾ ಠಾಣೆಗೆ ಅಗತ್ಯಗೆ ತಕ್ಕಂತೆ 3 ರಿಂದ 4 ಸಿಸಿ ಕ್ಯಾಮೆರಾ ಹಾಕಲಾಗಿದೆ.

ಪೊಲೀಸ್‌ ಠಾಣೆಯ ಪ್ರವೇಶ ದ್ವಾರ, ಸ್ವಾಗತ ಸ್ಥಳ ಹಾಗೂ ಪೊಲೀಸ್‌ ಇನಸ್ಪೆಕ್ಟರ್‌(ಪಿಐ)ಗಳ ಕಚೇರಿಯಲ್ಲಿ ಒಂದೊಂದು ಸಿಸಿ ಕ್ಯಾಮೆರಾ ಸ್ಥಾಪಿಸಲಾಗಿದೆ. ಪ್ರಮುಖವಾಗಿ ಪಾರದರ್ಶಕತೆ, ಪೊಲೀಸ್‌ ಠಾಣೆಯಲ್ಲಿನ ಆಸ್ತಿಯನ್ನು ಭದ್ರಪಡಿಸುವುದು, ಭ್ರಷ್ಟಾಚಾರ ನಿಗ್ರಹ, ದೂರುದಾರರ ಕಿರುಕುಳವನ್ನು ತಡೆಗಟ್ಟುವುದು ಮತ್ತು ಪೊಲೀಸ್‌ ಕಸ್ಟಡಿ ಪಡೆದ ಆರೋಪಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎನ್ನುವ ಆರೋಪವನ್ನು ತಳ್ಳಿ ಹಾಕುವ ಉದ್ದೇಶದೊಂದಿಗೆ ಹು-ಧಾ ಪೊಲೀಸ್‌ ಕಮೀಷ್ನರೇಟ್‌ ಈ ಕ್ರಮಕೈಗೊಂಡಿದೆ.

ಉನ್ನತ ಅಧಿಕಾರಿಗಳ ಪರಿಶೀಲನೆ : ಠಾಣೆಗಳಲ್ಲಿ ಕಿರುಕುಳ ಮತ್ತು ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂಬ ಆರೋಪಗಳು ಬಂದ ಸಂದರ್ಭದಲ್ಲಿ ಮತ್ತು ಅಗತ್ಯ ವೇಳೆಯಲ್ಲಿ ಪೊಲೀಸ್‌ ಉನ್ನತ ಅಧಿಕಾರಿಗಳು ಠಾಣೆಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪು ಮಾಡಿದ್ದು ಸಾಬೀತಾದರೆ ತಕ್ಷಣದಲ್ಲಿಯೇ ಉನ್ನತ ಪೊಲೀಸ್‌ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ಅಲ್ಲದೆ, ಅನ್ಯಾಯಕ್ಕೊಳಗಾದ ದೂರುದಾರರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮಕೈಗೊಳ್ಳಲು ಸೂಚಿಸಲಿದ್ದಾರೆ ಎನ್ನುತ್ತವೇ ಪೊಲೀಸ್‌ ಮೂಲಗಳು.

ಉಗ್ರ ಕ್ರಮಕ್ಕೆ ಅಡ್ಡಿ? : ಒಂದೆಡೆ ಇಲಾಖೆಯು ಪಾರದರ್ಶಕ ವ್ಯವಸ್ಥೆ ಜಾರಿಗೆ ತರುವುದಕ್ಕಾಗಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪೊಲೀಸರು ಕಾರ್ಯನಿರ್ವಹಿಸಲು ಉದ್ದೇಶ ಇಟ್ಟುಕೊಂಡಿದ್ದರೂ, ನಿತ್ಯದ ಕೆಲಸ ನಿರ್ವಹಿಸುವುದು ಕಷ್ಟಕರ ಮತ್ತು ತೀವ್ರ ಕಿರಿಕಿರಿಯಾಗುತ್ತದೆ. ಏಕೆಂದರೆ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮನೆಯಲ್ಲಿಯೇ ಅಳವಡಿಸಿದಂತಾಗಿದೆ. ಇದರಿಂದಾಗಿ ಸಮಾಜ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸದಂತಹ ವಾತಾವರಣ ನಿರ್ಮಾಣಗೊಂಡಿದೆ. ಸಮಾಜ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ಒರಟಾಗಿ ನಡೆದುಕೊಳ್ಳದಿದ್ದರೆ, ಅವರಲ್ಲಿ ಭಯ ಮೂಡಿಸಲು ಸಾಧ್ಯವಿಲ್ಲ. ಈ ರೀತಿಯ ಹಲವು ನಿಯಮ ಮತ್ತು ನಿಬಂಧನೆಗಳು ಪೊಲೀಸರ ಕೆಲಸವನ್ನು ಮತ್ತಷ್ಟು ಕಠಿಣಗೊಳಿಸಿದೆ ಎನ್ನುತ್ತಾರೆ ಕೆಲ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ