ಆ್ಯಪ್ನಗರ

ಪೊಲೀಸ್‌ ವೇತನ ಪರಿಷ್ಕರಣೆ: ಡಿಸಿಎಂ

ಹುಬ್ಬಳ್ಳಿ :ಕಂದಾಯ ನಿರೀಕ್ಷ ಕರ ಹುದ್ದೆಗೆ ಸಮಾನವಾಗಿ ರಾಜ್ಯ ಪೊಲೀಸ್‌ ಪೇದೆಗಳಿಗೆ ವೇತನ ಸೌಲಭ್ಯ ನೀಡಲು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. ರಾಜ್ಯ ಪೊಲೀಸ್‌ ಇಲಾಖೆಯು ಹಳೇ ಸಿಎಆರ್‌ ಆವರಣದ ಎದುರಿಗೆ ನಿರ್ಮಿಸಿರುವ 144 ಪೊಲೀಸ್‌ ಸಿಬ್ಬಂದಿ ಹಾಗೂ 6 ಅಧಿಕಾರಿಗಳ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಪಡಿತರ ಸ್ಥಗಿತಗೊಳಿಸಿಲ್ಲ,

Vijaya Karnataka 2 Oct 2018, 5:00 am
ಹುಬ್ಬಳ್ಳಿ :ಕಂದಾಯ ನಿರೀಕ್ಷ ಕರ ಹುದ್ದೆಗೆ ಸಮಾನವಾಗಿ ರಾಜ್ಯ ಪೊಲೀಸ್‌ ಪೇದೆಗಳಿಗೆ ವೇತನ ಸೌಲಭ್ಯ ನೀಡಲು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. ರಾಜ್ಯ ಪೊಲೀಸ್‌ ಇಲಾಖೆಯು ಹಳೇ ಸಿಎಆರ್‌ ಆವರಣದ ಎದುರಿಗೆ ನಿರ್ಮಿಸಿರುವ 144 ಪೊಲೀಸ್‌ ಸಿಬ್ಬಂದಿ ಹಾಗೂ 6 ಅಧಿಕಾರಿಗಳ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಪಡಿತರ ಸ್ಥಗಿತಗೊಳಿಸಿಲ್ಲ, ಸಿಬ್ಬಂದಿ ಕೋರಿಕೆಯಂತೆ ಮಾಸಿಕ ಭತ್ಯೆ ರೂಪದಲ್ಲಿ 400 ರೂ. ನೀಡಲಾಗುತ್ತಿದೆ. ಅವಳಿನಗರದಲ್ಲಿ ಈಗಾಗಲೇ 4 ಆಸ್ಪತ್ರೆಗಳು ಪೊಲೀಸ್‌ ಆರೋಗ್ಯ ಭಾಗ್ಯ ಯೋಜನೆ ವ್ಯಾಪ್ತಿಯಲ್ಲಿ ಇವೆ. ಇನ್ನೂ ಉತ್ತಮ ಆಸ್ಪತ್ರೆಗಳು ಇದ್ದರೆ ಅವುಗಳನ್ನು ಸೇರಿಸಲಾಗುವುದು ಎಂದು ತಿಳಿಸಿದರು.
Vijaya Karnataka Web police wage revision dcm
ಪೊಲೀಸ್‌ ವೇತನ ಪರಿಷ್ಕರಣೆ: ಡಿಸಿಎಂ


ಮಾದಕ ವಸ್ತುಗಳ ಪೂರೈಕೆದಾರರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆಟೊಗಳಿಗೆ ಮೀಟರ್‌ ಅಳವಡಿಸುವ ಕಾರ್ಯ ಕಡ್ಡಾಯಗೊಳಿಸಬೇಕು. ಹೆಲ್ಮೆಟ್‌ ಕಡ್ಡಾಯ ಕಠಿಣಗೊಳಿಸಬೇಕು. ಆನಂದ ನಗರ, ತಾರಿಹಾಳ, ಧಾರವಾಡದಲ್ಲಿ ಒಟ್ಟು 5 ಸಂಚಾರಿ ಠಾಣೆ ಸ್ಥಾಪಿಸಲು ಕೇಳಿದ್ದೀರಿ, ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಹು-ಧಾ ಮಧ್ಯೆ ಅನುಷ್ಠಾನಗೊಳ್ಳುತ್ತಿರುವ ಬಿಆರ್‌ಟಿಎಸ್‌ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಸಿಬ್ಬಂದಿಗೆ ಸೌಲಭ್ಯ ಅಗತ್ಯ

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮಾತನಾಡಿ, ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳಿಗೆ ಇನ್ನಷ್ಟು ಸೌಲಭ್ಯಗಳು ಸಿಗಬೇಕಾಗಿದೆ. ಪಶ್ಚಿಮ ಸಂಚಾರ ಪೊಲೀಸ್‌ ಠಾಣೆ , ಆನಂದ ನಗರ ವ್ಯಾಪ್ತಿಯಲ್ಲಿ ಹೊಸ ಪೊಲೀಸ್‌ ಠಾಣೆ ಅಸ್ತಿತ್ವಕ್ಕೆ ತರಬೇಕು. ಟ್ರಾಫಿಕ್‌ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪೊಲೀಸ್‌ ಸಿಬ್ಬಂದಿಗೆ ಪಡಿತರ ಪೂರೈಕೆ ಮುಂದುವರೆಸಬೇಕು. ಪೊಲೀಸ್‌ ಸಮುದಾಯ ಭವನ ನಿರ್ಮಿಸಬೇಕು. ಸಂಚಾರ ವ್ಯವಸ್ಥೆ ಸುಧಾರಿಸಬೇಕು. ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಪೊಲೀಸ್‌ ಸಿಬ್ಬಂದಿ ಹಿತರಕ್ಷ ಣೆಗಾಗಿ ಔರಾದಕರ್‌ ಸಮಿತಿ ವರದಿ ಜಾರಿಗೊಳಿಸಬೇಕು. ಆರ್ಡಲೀ ವ್ಯವಸ್ಥೆ ನಿವಾರಿಸಬೇಕು. ಬೈಪಾಸ್‌ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಬೇಕು ಎಂದರು.

ವಸತಿ ಗೃಹಗಳನ್ನು ನಿರ್ಮಿಸಿದ ಆರ್‌ಪಿಪಿ ಕನಸ್ಟ್ರಕ್ಷನ್ಸ್‌ನ ಮಣಿ ಅವರನ್ನು ಉಪಮುಖ್ಯಮಂತ್ರಿ ಸನ್ಮಾನಿಸಿದರು. ಸುಶ್ರಾವ್ಯವಾಗಿ ನಾಡಗೀತೆ ಪ್ರಸ್ತುತಪಡಿಸಿದ ಶ್ರೀ ಸಿದ್ಧಾರೂಢ ಅಂಧ ಮಕ್ಕಳ ಸಂಗೀತ ಶಾಲೆ ವಿದ್ಯಾರ್ಥಿಗಳಿಗೆ ಡಿಸಿಎಂ 10 ಸಾವಿರ ರೂ. ನಗದು ಬಹುಮಾನ ನೀಡಿದರು.

ಶಾಸಕರಾದ ಸಿ.ಎಸ್‌.ಶಿವಳ್ಳಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್‌, ಮೇಯರ್‌ ಸುಧೀರ ಸರಾಫ್‌, ವೀರಣ್ಣ ಮತ್ತಿಕಟ್ಟಿ, ಎ.ಎಂ.ಹಿಂಡಸಗೇರಿ, ಪ್ರೊ.ಐ.ಜಿ.ಸನದಿ, ಜಿಲ್ಲಾಧಿಕಾರಿ ಎಂ.ದೀಪಾ ಚೋಳನ್‌, ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ, ಜಿಲ್ಲಾ ಎಸ್ಪಿ ಜಿ.ಸಂಗೀತ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ