Please enable javascript.Basavaraj Bommai,ರಾಷ್ಟ್ರ ನಾಯಕರ ಪ್ರತಿಮೆ ಭಗ್ನಗೊಳಿಸುವುದು ದೇಶಭಕ್ತರ ಕೆಲಸವಲ್ಲ: ಬೊಮ್ಮಾಯಿ ಕಿಡಿ! - police will take strict action against anti society elements says cm bommai - Vijay Karnataka

ರಾಷ್ಟ್ರ ನಾಯಕರ ಪ್ರತಿಮೆ ಭಗ್ನಗೊಳಿಸುವುದು ದೇಶಭಕ್ತರ ಕೆಲಸವಲ್ಲ: ಬೊಮ್ಮಾಯಿ ಕಿಡಿ!

Vijaya Karnataka Web 18 Dec 2021, 1:22 pm
Embed
ಬೆಳಗಾವಿಯಲ್ಲಿ ಕೆಲವು ಪುಂಡರು ಪುಂಡಾಟಿಕೆ ಮೆರೆದಿದ್ದಾರೆ. ಅದನ್ನು ನಾವು ಬಲವಾಗಿ ಖಂಡಿಸುತ್ತೇನೆ. ಈ ತರಹ ಪುಂಡಾಟಿಕೆ ಮೆರೆದಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಗೃಹ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ರಾಷ್ಟ್ರ ಭಕ್ತರ ಪ್ರತಿಮೆಯನ್ನು ಭಗ್ನ ಮಾಡುವ ಪ್ರವೃತ್ತಿ ಸರಿಯಲ್ಲ. ಈ ಕೆಲಸವನ್ನು ದೇಶ ಭಕ್ತರು ಮಾಡುವುದಿಲ್ಲ. ರಾಷ್ಟ್ರ ಭಕ್ತರು ಎಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಕನ್ನಡ ಧ್ವಜ ಸುಟ್ಟ ಬೆನ್ನಲ್ಲೇ ಮತ್ತೊಂದು ಕೃತ್ಯ; ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ!

ದೇಶದಲ್ಲಿ ರಾಷ್ಟ್ರ ಭಕ್ತರ ಪ್ರತಿಮೆ ಮಾಡಿರುವುದು ಅವರನ್ನು ಗೌರವಿಸುವುದಕ್ಕಾಗಿ, ಅವರ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದವರ ಪ್ರತಿಮೆ ಭಗ್ನ ಮಾಡಿರುವ ನಡೆ ಎಳ್ಳಷ್ಟು ಸರಿಯಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.