ಆ್ಯಪ್ನಗರ

ದೇಶಭಕ್ತರ ಭಾವಚಿತ್ರ ಬೃಹತ್‌ ಬಾವುಟ ಮೆರವಣಿಗೆ ಇಂದು

ಧಾರವಾಡ : ನಗರದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಆ.20 ರಂದು ಬೆಳಗ್ಗೆ 9ಕ್ಕೆ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ದೇಶಭಕ್ತರ ಭಾವಚಿತ್ರಗಳಿರುವ ಬೃಹತ್‌ 1 ಕಿ.ಮೀ ಉದ್ದದ ಬಾವುಟ ಮೆರವಣಿಗೆ ನಡೆಯಲಿದೆ.

Vijaya Karnataka 20 Aug 2019, 5:00 am
ಧಾರವಾಡ : ನಗರದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಆ.20 ರಂದು ಬೆಳಗ್ಗೆ 9ಕ್ಕೆ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ದೇಶಭಕ್ತರ ಭಾವಚಿತ್ರಗಳಿರುವ ಬೃಹತ್‌ 1 ಕಿ.ಮೀ ಉದ್ದದ ಬಾವುಟ ಮೆರವಣಿಗೆ ನಡೆಯಲಿದೆ.
Vijaya Karnataka Web portrait of patriots
ದೇಶಭಕ್ತರ ಭಾವಚಿತ್ರ ಬೃಹತ್‌ ಬಾವುಟ ಮೆರವಣಿಗೆ ಇಂದು


ಅಂದಿನ ಮೆರವಣಿಗೆಯಲ್ಲಿ 4000ಕ್ಕೂ ಅಧಿಕ ಸರ್ವಧರ್ಮಿಯ ಯುವಕರು, ವಿದ್ಯಾರ್ಥಿಗಳು, ದೇಶಭಕ್ತರು ಬಾವುಟವನ್ನು ಹೆಗಲ ಮೇಲೆ ಹೊತ್ತು ಪ್ರಮುಖ ಬೀದಿಗಳಲ್ಲಿ ಸಂಚರಿಸುವರು.

ನಂತರ ಮಧ್ಯಾಹ್ನ 12.30ಕ್ಕೆ ಕಲಾಭವನದ ಆವರಣದಲ್ಲಿ ನಿರ್ಮಿಸಿರುವ ಬೃಹತ್‌ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಆಸಕ್ತ ದೇಶಾಭಿಮಾನಿಗಳು ಐತಿಹಾಸಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಬಸವರಾಜ ಮಲಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ