ಆ್ಯಪ್ನಗರ

ಒಂದೂವರೆ ತಿಂಗಳಲ್ಲಿ ಮಹದಾಯಿ ನೋಟಿಫಿಕೇಶನ್‌ ಸಾಧ್ಯತೆ

ಹುಬ್ಬಳ್ಳಿ: ಮಹದಾಯಿ ಗೆಜೆಟ್‌ ನೋಟಿಫಿಕೇಶನ್‌ ವಿಚಾರ ಇನ್ನು ಒಂದೂವರೆ ತಿಂಗಳಲ್ಲಿಇತ್ಯರ್ಥಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿಶಾಸಕರು ಮತ್ತು ಸಂಸದರಿಂದ ನಿರಂತರ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Vijaya Karnataka 20 Oct 2019, 5:00 am
ಹುಬ್ಬಳ್ಳಿ: ಮಹದಾಯಿ ಗೆಜೆಟ್‌ ನೋಟಿಫಿಕೇಶನ್‌ ವಿಚಾರ ಇನ್ನು ಒಂದೂವರೆ ತಿಂಗಳಲ್ಲಿಇತ್ಯರ್ಥಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿಶಾಸಕರು ಮತ್ತು ಸಂಸದರಿಂದ ನಿರಂತರ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
Vijaya Karnataka Web possibility of notification in one and a half months
ಒಂದೂವರೆ ತಿಂಗಳಲ್ಲಿ ಮಹದಾಯಿ ನೋಟಿಫಿಕೇಶನ್‌ ಸಾಧ್ಯತೆ


ನಗರದಲ್ಲಿಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿನಾವು ಏನೂ ಮಾಡಿಲ್ಲಎನ್ನುವುದು ಸತ್ಯಕ್ಕೆ ದೂರ. ಗೋವಾ ಮತ್ತು ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ಗೆ ಹೋಗಿವೆ. ಅಲ್ಲದೆ, ನ್ಯಾಯಾಧಿಕರಣದಲ್ಲಿಸ್ಪಷ್ಟನೆ ಕೇಳಿವೆ. ಹಾಗಾಗಿ ನೋಟಿಫಿಕೇಶನ್‌ಗೆ ವಿಳಂಬವಾಗಿದೆ ಎಂದರು.

ಗೋವಾ ಮುಖ್ಯಮಂತ್ರಿಗಳನ್ನು ಎರಡು ಬಾರಿ ಭೇಟಿಯಾದಾಗ ಅವರಿಗೆ ಮಹದಾಯಿ ಗೆಜೆಟ್‌ ನೋಟಿಫಿಕೇಶನ್‌ಗೆ ಸಹಕಾರ ನೀಡುವಂತೆ ವಿನಂತಿ ಮಾಡಲಾಗಿತ್ತು. ಈ ವೇಳೆ ಪರಿಶೀಲಿಸುವ ಹೇಳಿಕೆ ನೀಡಿ ಬಳಿಕ ಸಾಧ್ಯವಿಲ್ಲಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಬೇರೆ ಬೇರೆ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ರಾಜ್ಯ ಸರಕಾರವೂ ಈ ಕುರಿತು ಸಾಕಷ್ಟು ಪೂರಕವಾಗಿ ಕೆಲಸ ಮಾಡುತ್ತಿದೆ. ನ್ಯಾಯಾಧಿಕರಣಕ್ಕೆ ಸ್ಪಷ್ಟನೆ ಕೋರಿರುವ ಅರ್ಜಿ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಹಿಂಪಡೆಯದೆ ನೋಟಿಫಿಕೇಶನ್‌ ಹೊರಡಿಸಲು ಸಾಧ್ಯವೆ ಎಂಬುದರ ಕುರಿತು ರಾಜ್ಯ ಸರಕಾರ ವಕೀಲರ ಜತೆ ಕೂಲಂಕಷವಾಗಿ ಚರ್ಚಿಸಿ ನಿಲುವು ವ್ಯಕ್ತಪಡಿಸಲಿ ಎಂದರು.

ಮಹದಾಯಿ ವಿಷಯದಲ್ಲಿನಾವು ಅಲ್ಲಿನ ಸಿಎಂ ಜೊತೆಗೂ ಸಾಕಷ್ಟು ಬಾರಿ ಮಾತನಾಡಿದ್ದೇವೆ. ಆದರೂ ಅವರು ಒಪ್ಪಿಗೆ ವ್ಯಕ್ತಪಡಿಸಿಲ್ಲ. ಹೀಗಾಗಿ ಪರ್ಯಾಯ ಪ್ರಯತ್ನ ಮಾಡಿದ್ದು, ಯಶಸ್ಸಿನತ್ತ ಸಾಗಿದೆ ಎಂದರು.

ಮಹದಾಯಿ ಹೋರಾಟಗಾರರು ರಾಜ್ಯಪಾಲರ ಬಳಿ ತೆರಳಿರುವ ಸಂಗತಿ ನನಗೆ ತಿಳಿದಿರಲಿಲ್ಲ. ಪತ್ರಿಕೆ ಮೂಲಕ ಇವತ್ತು ವಿಷಯ ಗೊತ್ತಾಗಿದೆ. ಅಲ್ಲಿಹೊರಗಿರುವ ಮತ್ತು ಬಂಧನಕ್ಕೆ ಒಳಗಾಗಿರುವ ಕುರಿತು ಮಾಹಿತಿ ಪಡೆಯುವುದಾಗಿ ಹೇಳಿದರು. ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಷಯಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈಗಾಗಲೆ ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ನಾನೇನು ಹೆಚ್ಚಿಗೆ ಹೇಳಲ್ಲಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ