ಆ್ಯಪ್ನಗರ

ಅಂಚೆ ಇಲಾಖೆ ಸೇವೆ ಅಬಾಧಿತ

ಧಾರವಾಡ: ಲಾಕ್‌ ಡೌನ್‌ ನಡುವೆಯೂ, ಭಾರತೀಯ ಅಂಚೆ ಇಲಾಖೆಯು ಅವಶ್ಯಕ ಸೇವೆಗಳನ್ನು ಮುಂದುವರೆಸಿದೆ. ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳ ಅಡಿಯಲ್ಲಿಮನುಷ್ಯನ ಆರೋಗ್ಯಕ್ಕೆ ಅವಶ್ಯಕವಾಗಿರುವ ಔಷಧಿಗಳನ್ನು ರಿಜಿಸ್ಟರ್‌, ಸ್ಪೀಡ್‌ ಮತ್ತು ಪಾರ್ಸಲ್‌ ಪೋಸ್ವ್‌ ಮೂಲಕ ಕಳಿಸಲು ವಿಶೇಷ ಸೌಲಭ್ಯ ಒದಗಿಸಿದೆ.

Vijaya Karnataka 5 Apr 2020, 5:00 am
ಧಾರವಾಡ: ಲಾಕ್‌ ಡೌನ್‌ ನಡುವೆಯೂ, ಭಾರತೀಯ ಅಂಚೆ ಇಲಾಖೆಯು ಅವಶ್ಯಕ ಸೇವೆಗಳನ್ನು ಮುಂದುವರೆಸಿದೆ. ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳ ಅಡಿಯಲ್ಲಿಮನುಷ್ಯನ ಆರೋಗ್ಯಕ್ಕೆ ಅವಶ್ಯಕವಾಗಿರುವ ಔಷಧಿಗಳನ್ನು ರಿಜಿಸ್ಟರ್‌, ಸ್ಪೀಡ್‌ ಮತ್ತು ಪಾರ್ಸಲ್‌ ಪೋಸ್ವ್‌ ಮೂಲಕ ಕಳಿಸಲು ವಿಶೇಷ ಸೌಲಭ್ಯ ಒದಗಿಸಿದೆ.
Vijaya Karnataka Web postal department service
ಅಂಚೆ ಇಲಾಖೆ ಸೇವೆ ಅಬಾಧಿತ


ಅವಶ್ಯಕ ಸೇವೆಗಳ ಅಡಿಯಲ್ಲಿಲಭ್ಯವಿರುವ ಸೌಲಭ್ಯಗಳಾದ ಸಾಮಾಜಿಕ ಭದ್ರತಾ ಪಿಂಚಣಿ ಪಾವತಿ, ಅವಶ್ಯಕ ವಸ್ತುಗಳ ಬುಕಿಂಗ್‌ ಮತ್ತು ಸಾಗಣೆ, ಅಂಚೆ ಕಚೇರಿಯಲ್ಲಿಯೇ ಬಟವಾಡೆ ಮಾಡುವ ವ್ಯವಸ್ಥೆ, ಹಣಕಾಸಿನ ಸೇವೆಗಳಾದ ಜಮೆ ಮತ್ತು ಖರ್ಚಿನ ವ್ಯವಹಾರ, ಎಟಿಎಂ ಮೂಲಕ ವ್ಯವಹಾರ ಪೋಸ್ಟ್‌ ಆಫೀಸ್‌ ಎಟಿಎಂ ಕಾರ್ಡುಗಳನ್ನು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿಸಹ ಉಪಯೋಗಿಸಿ ಹಣ ಪಡೆಯಬಹುದು.

ಗ್ರಾಮೀಣ ಭಾಗದಲ್ಲಿಎಟಿಎಂ ಇರದ ಪಕ್ಷದಲ್ಲಿಮೈಕ್ರೋ ಎಟಿಎಂ ಮುಖಾಂತರ ಹಣಕಾಸಿನ ವ್ಯವಹಾರ ಮಾಡುವ ಸೌಲಭ್ಯವಿದೆ. ಈ ಸೇವೆಗಳನ್ನು ಹತ್ತಿರದ ಬಟವಾಡೆ ಅಂಚೆ ಕಚೇರಿಗಳಲ್ಲಿಬೆಳಗ್ಗೆ 10ರಿಂದ ಮಧ್ಯಾಹ್ನ 2ರ ಒಳಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಧಾರವಾಡ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜೆ.ಎಫ್‌.ಶೇಖರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ