ಆ್ಯಪ್ನಗರ

ಕಲಘಟಗಿ ತಾಲೂಕಿನಲ್ಲಿ ಪ್ರಹ್ಲಾದ ಜೋಶಿ ಬಿರುಸಿನ ಪ್ರಚಾರ

ಹುಬ್ಬಳ್ಳಿ : 'ನಾನು ಸದಾ ನಿಮ್ಮೊಂದಿಗೆ ಭಯ, ಭಕ್ತಿಯಿಂದ ನಡೆದುಕೊಂಡವನು, ನಿಮ್ಮ ಪ್ರಶ್ನೆಗಳಿಗೆ ವಿನಮ್ರವಾಗಿಯೇ ಉತ್ತರಿಸಿದವನು. ತೋಳು ಏರಿಸುವ ಸಂಸ್ಕೃತಿ ಎಂದೂ ತೋರಿಸಿಲ್ಲ, ಮತದಾರರೇ ನನ್ನ ಮಾಲಿಕರು, ನಾನು ನಿಮ್ಮ ಕೂಲಿಕಾರ 'ಎಂದು ಸಂಸದ ಪ್ರಹ್ಲಾದ್‌ ಜೋಶಿ ಹೇಳಿದರು.

Vijaya Karnataka 18 Apr 2019, 5:00 am
ಹುಬ್ಬಳ್ಳಿ : 'ನಾನು ಸದಾ ನಿಮ್ಮೊಂದಿಗೆ ಭಯ, ಭಕ್ತಿಯಿಂದ ನಡೆದುಕೊಂಡವನು, ನಿಮ್ಮ ಪ್ರಶ್ನೆಗಳಿಗೆ ವಿನಮ್ರವಾಗಿಯೇ ಉತ್ತರಿಸಿದವನು. ತೋಳು ಏರಿಸುವ ಸಂಸ್ಕೃತಿ ಎಂದೂ ತೋರಿಸಿಲ್ಲ, ಮತದಾರರೇ ನನ್ನ ಮಾಲಿಕರು, ನಾನು ನಿಮ್ಮ ಕೂಲಿಕಾರ 'ಎಂದು ಸಂಸದ ಪ್ರಹ್ಲಾದ್‌ ಜೋಶಿ ಹೇಳಿದರು.
Vijaya Karnataka Web DRW-17 NADAF 5
ಕಲಘಟಗಿ ವಿಧಾನಸಭಾ ಕ್ಷೇತ್ರದ ಹಳ್ಳಿಗೇರಿ, ದೇವರಹುಬ್ಬಳ್ಳಿ, ನಿಗದಿ, ಮನ್ಸೂರು, ಮನಗುಂಡಿ, ಬೆಳ್ಳಿಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಸದ ಪ್ರಹ್ಲಾದ್‌ ಜೋಶಿ ಮತಯಾಚನೆ ಮಾಡಿದರು.


ನಗರದ ಕಲಘಟಿಗಿ ವಿಧಾನಸಭಾ ಕ್ಷೇತ್ರವ್ಯಾಪ್ತಿಗೊಳಪಡುವ ಹಳ್ಳಿಗೇರಿ, ದೇವರಹುಬ್ಬಳ್ಳಿ, ನಿಗದಿ, ಮನ್ಸೂರು, ಮನಗುಂಡಿ, ಬೆಳ್ಳಿಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಚುನಾವಣಾ ಪ್ರಚಾರಾರ್ಥವಾಗಿ ಬೃಹತ್‌ ರೋಡ ಶೋ, ಪಾದಯಾತ್ರೆ, ಬಹಿರಂಗ ಸಭೆ ನಡೆಸಿ ನೆರೆದಿದ್ದÜ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಈ ಮೊದಲು ದೇಶ, ದಿಕ್ಕು ದೆಸೆ ಇಲ್ಲದೇ ನಡೆದಿದ್ದು, ನಿರ್ದಿಷ್ಟ ಗುರಿ ಇರಲಿಲ್ಲ. ಆರ್ಥಿಕತೆ ಕುಸಿದಿತ್ತು. ಸೈನಿಕರಿಗೆ ನೈತಿಕ ಬೆಂಬಲ ಸಿಗದ ಕಾರಣ ಭಯೋತ್ಪಾದನೆ ಎಗ್ಗಿಲ್ಲದೇ ನಡೆದಿತ್ತು. ಯಾವಾಗ ಮೋದಿ ದೇಶದ ಚುಕ್ಕಾಣಿ ಹಿಡಿದರೋ ಅಂದಿನಿಂದ ದೇಶದ ದಿಕ್ಕೆ ಬದಲಾಗಿದೆ. ಮೋದಿಜಿ ದೇಶವನ್ನು ವಿಶ್ವ ಗುರು ಮಾಡುವುದನ್ನೇ ಗುರಿಯನ್ನಾಗಿಸಿದ್ದಾರೆ. ಆರ್ಥಿಕತೆಯನ್ನು ಉತ್ತಮಗೊಳಿಸುತ್ತಿದ್ದಾರೆ. ಸೈನ್ಯದ ಬೆನ್ನೆಲುಬಾಗಿ ನಿಂತು ಬಲಿಷ್ಠ ಪಡೆ ಕಟ್ಟುತ್ತಿದ್ದಾರೆ. ಭಯೋತ್ಪಾದನೆ ನಿಯಂತ್ರಿಸುತ್ತಿದ್ದಾರೆ, ದೇಶದ ಪ್ರಜೆ ಹೆಮ್ಮೆ ಪಡುವಂತಹ ಕೆಲಸ ಸದಾ ಮಾಡುತ್ತಿದ್ದಾರೆ ಅಂಥವರನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಿ ಎಂದು ಅವರು ಹೇಳಿದರು.

ಇದೇ ವೇಳೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ದ ಕಾರ್ಯಕರ್ತರಾದ ದೇವರಾಜ ಸತ್ತೂರ, ಖಂಡುಬಾ ರೇವಡಿಹಾಳ, ಮಹಾದೇವಪ್ಪಾ ಸತ್ತೂರ, ದೇವೆಂದ್ರಪ್ಪಾ ಕೊಟ್ಟಳ್ಳಿ, ಗುರುಶಾಂತಯ್ಯ ಯರಗಂಬಳಿಮಠ ಮತ್ತಿತರರು ಭಾರತೀಯ ಜನತಾ ಪಕ್ಷ ಕ್ಕೆ ಸೇರ್ಪಡೆಯಾದರು.

ಚನ್ನು ಹೊಸಮನಿ, ಶಿವಯ್ಯಾ ಹಿರೇಮಠ, ಆನಂದ ಹಡಪದ, ಯಲ್ಲಪ್ಪ ಬಾಡದ, ಯರಗಂಬಳಿಮಠ, ಮಾರುತಿ ಹೊಸಮನಿ, ಶಿವಪ್ಪ ಹೊಸಮನಿ, ಯಲ್ಲಪ್ಪ ಹರಿಜನ, ರುದ್ರಪ್ಪ ಪಾಟೀಲ, ಭರಮಗೌಡ ಪಾಟೀಲ, ಕೃಷ್ಣಾ ಕೋಣನೆಟ್ಟಿ, ಗದ್ದೇವ್ವ ಹರಿಜನ, ರೇಣುಕಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ