ಆ್ಯಪ್ನಗರ

ರಾಮಜನ್ಮಭೂಮಿ ತೀರ್ಪು ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸ್ಫೋಟ ಷಡ್ಯಂತ್ರ: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಸ್ಫೋಟಕ್ಕೂ ಸುಪ್ರೀಂಕೋರ್ಟ್ ನೀಡುವ ರಾಮ ಜನ್ಮಭೂಮಿ ತೀರ್ಪಿಗೂ ಸಂಬಂಧವಿದೆ. ಇದು ಷಡ್ಯಂತ್ರ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 23 Oct 2019, 5:02 pm
ಹುಬ್ಬಳ್ಳಿ: ರಾಮಜನ್ಮಭೂಮಿ ಕುರಿತು ಮುಂದಿನ ತಿಂಗಳು ಸುಪ್ರೀಂ ಕೋರ್ಟ್ ನೀಡುವ ಹಿನ್ನೆಲೆಯಲ್ಲಿ ಸ್ಪೋಟ ಪ್ರಕರಣದಂತಹ ರಾಷ್ಟ್ರೀಯ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಶ್ರೀರಾಮಸೇನೆ ಸಂಚಾಲಕ ಪ್ರಮೋದ ಮುತಾಲಿಕ ಅನುಮಾನ ವ್ಯಕ್ತಪಡಿಸಿದರು.
Vijaya Karnataka Web pramod muthalik


ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪತ್ತೆಯಾದ ಸ್ಪೋಟಕ ವಸ್ತುಗಳು ಮತ್ತು ಕೊಲ್ಲಾಪುರಕ್ಕೆ ಸಾಗಿಸುವ ಪ್ರಕರಣಗಳು ಷಡ್ಯಂತ್ರದ ಭಾಗವಾಗಿದೆ‌ ಎಂದರು. ಈ ಘಟನೆಗಳನ್ನು ಕೇಂದ್ರ, ರಾಜ್ಯ ಸರಕಾರಗಳು ಹಗುರವಾಗಿ ತೆಗೆದುಕೊಳ್ಳದೇ ಸಮಗ್ರ ತನಿಖೆ ನಡೆಸಿ ಷಡ್ಯಂತ್ರ ಬಯಲು ಮಾಡಬೇಕೆಂದು ಆಗ್ರಹಿಸಿದರು.

ಹುಬ್ಬಳ್ಳಿ ಲಘು ಸ್ಫೋಟ -ರೈಲಿನಲ್ಲಿ ಸಿಕ್ಕ ಬಾಕ್ಸ್‌ಗಳು ಯಾರಿಗೆ ಸೇರಿದ್ದು?

ಸುಪ್ರೀಂ ಕೋರ್ಟ್ ಮುಂದಿನ ದಿನಗಳಲ್ಲಿ ರಾಮ ಜನ್ಮಭೂಮಿ ಕುರಿತು ಅಂತಿಮ ತೀರ್ಪು ನೀಡಲಿದ್ದು, ಈ ಹಿನ್ನೆಲೆಯಲ್ಲಿ ಸ್ಫೋಟ ನಡೆದಿದೆ ಎಂದು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು. ಅದರಂತೆ ಉತ್ತರ ಪ್ರದೇಶದಲ್ಲಿ ಕೇವಲ 11 ದಿನಗಳಲ್ಲಿ 24 ಹಿಂದೂ ನಾಯಕರ ಕೊಲೆ ಆಗಿದೆ‌. ಅಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಮುಂತಾದ ಕಡೆ ಪಾಕಿಸ್ತಾನ, ಅಫ್ಘಾನಿಸ್ತಾನ, ಐಎಸ್ಐ ಸಂಘಟನೆಗಳ ಗುಂಪುಗಳು ಸೇರಿಕೊಂಡು ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿದೆ. ಇದು ದೇಶದಲ್ಲಿ ಶಾಂತಿ ಭಂಗ ಮಾಡುವ ಕುತಂತ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಮಲ ತಿವಾರಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವ್ಯಕ್ತಿ ಬಂಧನವಾಗುವುದು ಎಂದರೆ ಅವರ ಜಾಲ ಎಷ್ಟಿದೆ ಎಂಬುದನ್ನು ಅರಿಯಬೇಕು. ದೇಶದಲ್ಲಿ ವ್ಯವಸ್ಥಿತ ಜಾಲವೊಂದು ಸ್ಪೋಟ ಸಂಚು ನಡೆಸುತ್ತಿದೆ ಈ ಬಗ್ಗೆ ತನಿಖೆ ನಡೆಸಬೇಕು.

ಅಯೋಧ್ಯೆಯಲ್ಲಿ ಬಿಗಿ ಭದ್ರತೆ; ಯಾವುದೇ ದಿನ ತೀರ್ಪು ಹೊರ ಬೀಳುವ ನಿರೀಕ್ಷೆ

ಹುಬ್ಬಳ್ಳಿಯಲ್ಲಿ 134 ಮದರಸಾಗಳಿದ್ದು ಬಾಂಗ್ಲಾದೇಶಿಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ. ಪೊಲೀಸರು ಮದರಸಾಗಳಲ್ಲಿ ಶೋಧ ನಡೆಸಿ‌ ಅವರನ್ನು ಹೊರಹಾಕಬೇಕು.‌ ಮದರಸಾಗಳ ಬಗ್ಗೆ ಶ್ರೀರಾಮಸೇನೆ ಬಳಿ ಸಾಕಷ್ಟು ಮಾಹಿತಿ ಇದೆ. ಪೊಲೀಸರು ಬಯಸಿದರೆ ಕೊಡುತ್ತೇವೆ ಎಂದರು.

ಇನ್ನು ಬಿಜೆಪಿಯವರು ಜಗನ್ನಾಥ ಶೆಟ್ಟಿ ಆಯೋಗದ ಬಗ್ಗೆ ಎಲ್ಲೂ ಚಕಾರ ಎತ್ತುವುದಿಲ್ಲ. ಅಲ್ಲದೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಲಸಿಗರ ಬಗ್ಗೆ ಸಿಡಿಯನ್ನು ಬಿಡುಗಡೆ ಮಾಡುತ್ತಾರೆ. ಆದರೆ ಅದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ವಿನಹ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಬಾಂಗ್ಲಾ ಜನರನ್ನು ದೇಶದಿಂದ ಹೊರಹಾಕಬೇಕು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪತ್ತೆಯಾದ ಸ್ಪೋಟಕಗಳು ಮತ್ತು ಅವುಗಳ ಬಾಕ್ಸ್ನಲ್ಲಿ ನಮೂದಿಸಿದ ಕೊಲ್ಲಾಪುರ ಹೆಸರಿಗೂ ಮತ್ತು ಸ್ಪೋಟಕ್ಕೂ ಕೊಲ್ಹಾಪುರದಲ್ಲಿ ಆದ ಲಾರಿ ಸ್ಪೋಟಕ್ಕೂ ತಾಳೆಯಾಗುತ್ತಿದೆ.‌ಹಾಗಾಗಿ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದರು.

ಶತಮಾನದ ಮಹಾ ತೀರ್ಪಿಗೆ ದಿನಗಣನೆ! ಅಯೋಧ್ಯೆಯಲ್ಲಿ 20 ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ನಿಯೋಜನೆ!

ಸಾವರ್ಕರ್‌ಗೆ ಭಾರತ ರತ್ನ ನೀಡುವುದು ಸ್ವಾಗತ ಸಾವರ್ಕರ್ ಒಬ್ಬ ದೇಶಭಕ್ತನಾಗಿದ್ದು, ಅವರನ್ನು ರಾಜಕೀಯ ಲಾಭಕ್ಕೆ ಬಳಸಿದ್ದು ಖಂಡನೀಯ. ಅಲ್ಲದೇ ಮಹಾರಾಷ್ಟ್ರದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭಾರತ ರತ್ನ ವಿಷಯ ಸೇರಿಸಿದ್ದು ಸ್ವಾಗತಾರ್ಹ, ಇದನ್ನು ಕಾಂಗ್ರೆಸ್ ಖಂಡನೆ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ 1970 ರಲ್ಲಿ ಇಂದಿರಾಗಾಂಧಿ ಅವರೇ ಸಾವರ್ಕರ್ ಅಂಚೆ ಚೀಟಿ ಬಿಡುಗಡೆಗೊಳಿಸಿ ಪತ್ರ ಬರೆದಿರುವುದನ್ನು ಸಿದ್ದರಾಮಯ್ಯ ನೆನಪಿನಲ್ಲಿಟ್ಟುಕೊಂಡು ಮಾತನಾಡಲಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ