ವಿಜಯ್ ಹೂಗಾರ
ಹುಬ್ಬಳ್ಳಿ: 'ಉತ್ತರ ಭಾಗದಲ್ಲಿ ಮನೆ ಮಾಡಿದರೆ ಮುಖ್ಯಮಂತ್ರಿಯಾಗುವ ಯೋಗವಿದೆ' ಎಂಬ ಜ್ಯೋತಿಷಿಯೊಬ್ಬರ ಸಲಹೆಯಂತೆ ಎಚ್.ಡಿ.ಕುಮಾರಸ್ವಾಮಿ ಅವರು ಒಂದೂವರೆ ವರ್ಷದ ಹಿಂದೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದರು. ಯೋಗಾಯೋಗ ಎಂಬಂತೆ ಇದೀಗ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿಯ ಈ ಮನೆ ಇದೀಗ ಮುಖ್ಯಮಂತ್ರಿ ಮನೆಯಾಗಿ ಪರಿವರ್ತನೆಗೊಂಡಿದೆ.
'ನಾನು ಕಿಂಗ್ ಮೇಕರ್ ಆಗುವುದಿಲ್ಲ. ಕಿಂಗ್ ಆಗುತ್ತೇನೆ' ಎನ್ನುವ ಮಾತನ್ನು ಕುಮಾರಸ್ವಾಮಿ ಹುಬ್ಬಳ್ಳಿಯ ಮನೆಯ ಪೂಜಾ ಕಾರ್ಯಕ್ರಮಕ್ಕೆ ಬಂದಾಗಲೇ ಹೇಳಿದ್ದರು. ಅದರಂತೆ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯುವ ಯೋಗ ತಂದು ಕೊಟ್ಟಿದೆ ಎಂದು ಹೇಳಲಾಗುವ ಹುಬ್ಬಳ್ಳಿಯ ಮನೆ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ? ಎನ್ನುವ ಸಹಜ ಪ್ರಶ್ನೆ ಹಾಗೂ ಕುತೂಹಲ ಉತ್ತರ ಕರ್ನಾಟಕದ ಜನಸಾಮಾನ್ಯರು ಹಾಗೂ ರಾಜಕೀಯ ಮುಖಂಡರಲ್ಲಿಯೂ ಮೂಡಿದೆ.
ಉತ್ತರ ಕರ್ನಾಟಕ ನಿರ್ಲಕ್ಷ್ಯದ ಬಗ್ಗೆ ಜಗದೀಶ ಶೆಟ್ಟರ್ ನೀಡಿರುವ ಹೇಳಿಕೆಯನ್ನು ಶುಕ್ರವಾರ ವಿಶ್ವಾಸ ಮತಯಾಚನೆ ವೇಳೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, 'ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸದೇ ಅಖಂಡ ಕರ್ನಾಟಕ ಕಲ್ಪನೆಯಲ್ಲಿಯೇ ಕೆಲಸ ಮಾಡಲಿದ್ದೇನೆ' ಎಂದು ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಯೋಗ ತಂದುಕೊಟ್ಟ ಹುಬ್ಬಳ್ಳಿಯಲ್ಲಿರುವ ಮನೆಯನ್ನು ಮುಂದುವರಿಸುತ್ತಾರೆಯೇ ಅಥವಾ ತೆಗೆಯುತ್ತಾರೆಯೇ? ಮುಂದುವರಿಸಿದರೆ ಎಷ್ಟು ದಿನಕ್ಕೊಮ್ಮೆ ಈ ಮನೆಗೆ ಆಗಮಿಸಲಿದ್ದಾರೆ? ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದಂತೆ ಹುಬ್ಬಳ್ಳಿಯ ಮನೆ 'ಏಕದಂತ' ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಗಳ ಗೃಹ ಕಚೇರಿ ಆಗಲಿದೆಯೇ? ಇಲ್ಲವೇ ಹೆಸರಿಗೆ ಎಂಬಂತೆ ಮನೆಯನ್ನು ಇಟ್ಟುಕೊಂಡು ಬೆಂಗಳೂರು ಕೇಂದ್ರಿಕೃತ ಆಡಳಿತ ನಡೆಸಲಿದ್ದಾರೆಯೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಚುನಾವಣೆಗೂ ಮುನ್ನ ಕುಮಾರಸ್ವಾಮಿ ಉತ್ತರ ಕರ್ನಾಟಕದ ಪಕ್ಷ ಸಂಘಟನೆ ಜತೆಗೆ ಈ ಭಾಗದಲ್ಲಿ ಕೆಲವೊಂದಿಷ್ಟು ಶಾಸಕರನ್ನಾದರೂ ಆಯ್ಕೆ ಮಾಡಬೇಕೆಂಬ ಆಶಯವನ್ನು ಹೊಂದಿದ್ದರು. ಆದರೆ, ಅವರಿಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರ ಆಶಯದಂತೆ ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲಾಗಲಿಲ್ಲ. ಹೆಚ್ಚಿನ ಶಾಸಕರ ಗೆಲುವು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಏನೋ ಮುಖ್ಯಮಂತ್ರಿಯಾಗಿ ಮೂರು ದಿನ ಕಳೆದರೂ ಹುಬ್ಬಳ್ಳಿ ಮನೆ ಬಗ್ಗೆ ಕುಮಾರಸ್ವಾಮಿಯವರು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದರಿಂದ ಹುಬ್ಬಳ್ಳಿಯಲ್ಲಿನ ಮನೆಯ ಬಗೆಗಿನ ಅನಿಶ್ಚಿತತೆ ಹಾಗೆ ಮುಂದುವರಿದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜನರ ಜತೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಜನತಾ ದರ್ಶನ, ಗ್ರಾಮವಾಸ್ತವ್ಯದಂತಹ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಜನಜನಿತರಾಗಿದ್ದಾರೆ. ಅದೇ ರೀತಿಯಲ್ಲಿ ಕೇವಲ ರಾಜಧಾನಿಯಲ್ಲಿ ಅಷ್ಟೇ ಅಲ್ಲದೇ ಹುಬ್ಬಳ್ಳಿಯಲ್ಲಿ ತಿಂಗಳಿಗೆ ಒಂದೆರಡು ಬಾರಿ ಜನತಾದರ್ಶನ ಮಾಡುವ ಮೂಲಕ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವ ಆಶಯ ಜನರಲ್ಲಿದೆ. ಅದಕ್ಕೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆಯೋ ಕಾದು ನೋಡಬೇಕಿದೆ.
ಪತ್ನಿಯೊಂದಿಗೆ ಗೃಹ ಪ್ರವೇಶ ಪೂಜೆ
ಹುಬ್ಬಳ್ಳಿಯ ಧಾರವಾಡ ರಸ್ತೆಯಲ್ಲಿರುವ ಭೈರಿದೇವರಕೊಪ್ಪದ ಮಾಯ್ಕಾರ್ ಕಾಲೊನಿಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮನೆ ಬಾಡಿಗೆಗೆ ತೆಗೆದುಕೊಂಡಿದ್ದರು. ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ಆಗಮಿಸಿ 2016 ನವೆಂಬರ್ 18 ರಂದು ಹೋಮ, ಹವನ ಹಾಗೂ ವಿಶೇಷ ಪೂಜೆ ನೆರವೇರಿಸಿ ಗೃಹಪ್ರವೇಶ ಮಾಡಿದ್ದರು. ತಿಂಗಳಲ್ಲಿ 15 ದಿನ ಹುಬ್ಬಳ್ಳಿಯಲ್ಲಿಯೇ ಇರುವುದಾಗಿ ಘೋಷಿಸಿದ್ದರು. ಆದರೆ, ಆರೋಗ್ಯದ ಕಾರಣಕ್ಕಾಗಿ ಕೆಲವು ತಿಂಗಳು ಮನೆ ಕಡೆಗೆ ಬರಲೇ ಇಲ್ಲ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಾತ್ರ ಈ ಮನೆಯಿಂದಲೇ ನಿತ್ಯ ಬೆಳಗಾವಿಗೆ ಓಡಾಡುತ್ತಿದ್ದರು. ಈ ನಡುವೆ ಅಕ್ಟೋಬರ್ 4, 2017 ರಂದು ಆ ಮನೆಯಲ್ಲಿ ಶಾರ್ಟ್ ಸರ್ಕಿಟ್ನಿಂದ ಆಕಸ್ಮಿಕ ಬೆಂಕಿ ಅನಾಹುತ ಘಟನೆ ನಡೆಯಿತು. ಅದಾದ ಮೇಲೆ ಒಂದೆರಡು ಬಾರಿ ಬಂದಿದ್ದು ಬಿಟ್ಟರೆ ಮತ್ತೆ ಈ ಮನೆಗೆ ಬಂದ ಉದಾಹರಣೆ ಇಲ್ಲ.
ಹುಬ್ಬಳ್ಳಿ ಮನೆಯ ಬಗ್ಗೆ ಕುಮಾರಸ್ವಾಮಿ ಅವರು ವಿಶೇಷ ಪ್ರೀತಿಯನ್ನು ಹೊಂದಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಗಳಾಗಿದ್ದರಿಂದ ಹುಬ್ಬಳ್ಳಿ ಮನೆಯನ್ನು ಇಟ್ಟುಕೊಳ್ಳಬೇಕೋ, ತೆಗೆಯಬೇಕೋ ಎನ್ನುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿರ್ಧಾರ ಪ್ರಕಟಿಸಲಿದ್ದಾರೆ. -ರಾಜಣ್ಣ ಕೊರವಿ, ಹುಬ್ಬಳ್ಳಿ-ಧಾರವಾಡ ಜನತಾದಳ ಜಿಲ್ಲಾ ಘಟಕ ಅಧ್ಯಕ್ಷ
ಹುಬ್ಬಳ್ಳಿ: 'ಉತ್ತರ ಭಾಗದಲ್ಲಿ ಮನೆ ಮಾಡಿದರೆ ಮುಖ್ಯಮಂತ್ರಿಯಾಗುವ ಯೋಗವಿದೆ' ಎಂಬ ಜ್ಯೋತಿಷಿಯೊಬ್ಬರ ಸಲಹೆಯಂತೆ ಎಚ್.ಡಿ.ಕುಮಾರಸ್ವಾಮಿ ಅವರು ಒಂದೂವರೆ ವರ್ಷದ ಹಿಂದೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದರು. ಯೋಗಾಯೋಗ ಎಂಬಂತೆ ಇದೀಗ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿಯ ಈ ಮನೆ ಇದೀಗ ಮುಖ್ಯಮಂತ್ರಿ ಮನೆಯಾಗಿ ಪರಿವರ್ತನೆಗೊಂಡಿದೆ.
'ನಾನು ಕಿಂಗ್ ಮೇಕರ್ ಆಗುವುದಿಲ್ಲ. ಕಿಂಗ್ ಆಗುತ್ತೇನೆ' ಎನ್ನುವ ಮಾತನ್ನು ಕುಮಾರಸ್ವಾಮಿ ಹುಬ್ಬಳ್ಳಿಯ ಮನೆಯ ಪೂಜಾ ಕಾರ್ಯಕ್ರಮಕ್ಕೆ ಬಂದಾಗಲೇ ಹೇಳಿದ್ದರು. ಅದರಂತೆ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯುವ ಯೋಗ ತಂದು ಕೊಟ್ಟಿದೆ ಎಂದು ಹೇಳಲಾಗುವ ಹುಬ್ಬಳ್ಳಿಯ ಮನೆ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ? ಎನ್ನುವ ಸಹಜ ಪ್ರಶ್ನೆ ಹಾಗೂ ಕುತೂಹಲ ಉತ್ತರ ಕರ್ನಾಟಕದ ಜನಸಾಮಾನ್ಯರು ಹಾಗೂ ರಾಜಕೀಯ ಮುಖಂಡರಲ್ಲಿಯೂ ಮೂಡಿದೆ.
ಉತ್ತರ ಕರ್ನಾಟಕ ನಿರ್ಲಕ್ಷ್ಯದ ಬಗ್ಗೆ ಜಗದೀಶ ಶೆಟ್ಟರ್ ನೀಡಿರುವ ಹೇಳಿಕೆಯನ್ನು ಶುಕ್ರವಾರ ವಿಶ್ವಾಸ ಮತಯಾಚನೆ ವೇಳೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, 'ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸದೇ ಅಖಂಡ ಕರ್ನಾಟಕ ಕಲ್ಪನೆಯಲ್ಲಿಯೇ ಕೆಲಸ ಮಾಡಲಿದ್ದೇನೆ' ಎಂದು ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಯೋಗ ತಂದುಕೊಟ್ಟ ಹುಬ್ಬಳ್ಳಿಯಲ್ಲಿರುವ ಮನೆಯನ್ನು ಮುಂದುವರಿಸುತ್ತಾರೆಯೇ ಅಥವಾ ತೆಗೆಯುತ್ತಾರೆಯೇ? ಮುಂದುವರಿಸಿದರೆ ಎಷ್ಟು ದಿನಕ್ಕೊಮ್ಮೆ ಈ ಮನೆಗೆ ಆಗಮಿಸಲಿದ್ದಾರೆ? ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದಂತೆ ಹುಬ್ಬಳ್ಳಿಯ ಮನೆ 'ಏಕದಂತ' ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಗಳ ಗೃಹ ಕಚೇರಿ ಆಗಲಿದೆಯೇ? ಇಲ್ಲವೇ ಹೆಸರಿಗೆ ಎಂಬಂತೆ ಮನೆಯನ್ನು ಇಟ್ಟುಕೊಂಡು ಬೆಂಗಳೂರು ಕೇಂದ್ರಿಕೃತ ಆಡಳಿತ ನಡೆಸಲಿದ್ದಾರೆಯೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಚುನಾವಣೆಗೂ ಮುನ್ನ ಕುಮಾರಸ್ವಾಮಿ ಉತ್ತರ ಕರ್ನಾಟಕದ ಪಕ್ಷ ಸಂಘಟನೆ ಜತೆಗೆ ಈ ಭಾಗದಲ್ಲಿ ಕೆಲವೊಂದಿಷ್ಟು ಶಾಸಕರನ್ನಾದರೂ ಆಯ್ಕೆ ಮಾಡಬೇಕೆಂಬ ಆಶಯವನ್ನು ಹೊಂದಿದ್ದರು. ಆದರೆ, ಅವರಿಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರ ಆಶಯದಂತೆ ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲಾಗಲಿಲ್ಲ. ಹೆಚ್ಚಿನ ಶಾಸಕರ ಗೆಲುವು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಏನೋ ಮುಖ್ಯಮಂತ್ರಿಯಾಗಿ ಮೂರು ದಿನ ಕಳೆದರೂ ಹುಬ್ಬಳ್ಳಿ ಮನೆ ಬಗ್ಗೆ ಕುಮಾರಸ್ವಾಮಿಯವರು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದರಿಂದ ಹುಬ್ಬಳ್ಳಿಯಲ್ಲಿನ ಮನೆಯ ಬಗೆಗಿನ ಅನಿಶ್ಚಿತತೆ ಹಾಗೆ ಮುಂದುವರಿದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜನರ ಜತೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಜನತಾ ದರ್ಶನ, ಗ್ರಾಮವಾಸ್ತವ್ಯದಂತಹ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಜನಜನಿತರಾಗಿದ್ದಾರೆ. ಅದೇ ರೀತಿಯಲ್ಲಿ ಕೇವಲ ರಾಜಧಾನಿಯಲ್ಲಿ ಅಷ್ಟೇ ಅಲ್ಲದೇ ಹುಬ್ಬಳ್ಳಿಯಲ್ಲಿ ತಿಂಗಳಿಗೆ ಒಂದೆರಡು ಬಾರಿ ಜನತಾದರ್ಶನ ಮಾಡುವ ಮೂಲಕ ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವ ಆಶಯ ಜನರಲ್ಲಿದೆ. ಅದಕ್ಕೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆಯೋ ಕಾದು ನೋಡಬೇಕಿದೆ.
ಪತ್ನಿಯೊಂದಿಗೆ ಗೃಹ ಪ್ರವೇಶ ಪೂಜೆ
ಹುಬ್ಬಳ್ಳಿಯ ಧಾರವಾಡ ರಸ್ತೆಯಲ್ಲಿರುವ ಭೈರಿದೇವರಕೊಪ್ಪದ ಮಾಯ್ಕಾರ್ ಕಾಲೊನಿಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಮನೆ ಬಾಡಿಗೆಗೆ ತೆಗೆದುಕೊಂಡಿದ್ದರು. ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ಆಗಮಿಸಿ 2016 ನವೆಂಬರ್ 18 ರಂದು ಹೋಮ, ಹವನ ಹಾಗೂ ವಿಶೇಷ ಪೂಜೆ ನೆರವೇರಿಸಿ ಗೃಹಪ್ರವೇಶ ಮಾಡಿದ್ದರು. ತಿಂಗಳಲ್ಲಿ 15 ದಿನ ಹುಬ್ಬಳ್ಳಿಯಲ್ಲಿಯೇ ಇರುವುದಾಗಿ ಘೋಷಿಸಿದ್ದರು. ಆದರೆ, ಆರೋಗ್ಯದ ಕಾರಣಕ್ಕಾಗಿ ಕೆಲವು ತಿಂಗಳು ಮನೆ ಕಡೆಗೆ ಬರಲೇ ಇಲ್ಲ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಾತ್ರ ಈ ಮನೆಯಿಂದಲೇ ನಿತ್ಯ ಬೆಳಗಾವಿಗೆ ಓಡಾಡುತ್ತಿದ್ದರು. ಈ ನಡುವೆ ಅಕ್ಟೋಬರ್ 4, 2017 ರಂದು ಆ ಮನೆಯಲ್ಲಿ ಶಾರ್ಟ್ ಸರ್ಕಿಟ್ನಿಂದ ಆಕಸ್ಮಿಕ ಬೆಂಕಿ ಅನಾಹುತ ಘಟನೆ ನಡೆಯಿತು. ಅದಾದ ಮೇಲೆ ಒಂದೆರಡು ಬಾರಿ ಬಂದಿದ್ದು ಬಿಟ್ಟರೆ ಮತ್ತೆ ಈ ಮನೆಗೆ ಬಂದ ಉದಾಹರಣೆ ಇಲ್ಲ.
ಹುಬ್ಬಳ್ಳಿ ಮನೆಯ ಬಗ್ಗೆ ಕುಮಾರಸ್ವಾಮಿ ಅವರು ವಿಶೇಷ ಪ್ರೀತಿಯನ್ನು ಹೊಂದಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಗಳಾಗಿದ್ದರಿಂದ ಹುಬ್ಬಳ್ಳಿ ಮನೆಯನ್ನು ಇಟ್ಟುಕೊಳ್ಳಬೇಕೋ, ತೆಗೆಯಬೇಕೋ ಎನ್ನುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿರ್ಧಾರ ಪ್ರಕಟಿಸಲಿದ್ದಾರೆ. -ರಾಜಣ್ಣ ಕೊರವಿ, ಹುಬ್ಬಳ್ಳಿ-ಧಾರವಾಡ ಜನತಾದಳ ಜಿಲ್ಲಾ ಘಟಕ ಅಧ್ಯಕ್ಷ