ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಬಿಎಡ್ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ಅಕ್ಷರ ತಪ್ಪಾಗಿ ಮುದ್ರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ವತಿಯಿಂದ ಶುಕ್ರವಾರ ನಗರದ ಕವಿವಿ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕವಿವಿ ಕುಲಪತಿಗಳಿಗೆ ಮನವಿ ಮಾಡಿಕೊಂಡ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಬಿಎಡ್ ಮೂರನೇ ಸೆಮಿಸ್ಟರ್ನ,ಸಮನ್ವಯ ಶಿಕ್ಷ ಣ ವಿಷಯ ಹಾಗೂ ನಾಲ್ಕನೇ ಸೆಮಿಸ್ಟರ್ನ ಶೈಕ್ಷ ಣಿಕ ತಂತ್ರ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ಅಕ್ಷ ರಗಳನ್ನು ತಪ್ಪಾಗಿ ಮುದ್ರಣ ಮಾಡುವ ಮೂಲಕ ಇಡೀ ದೇಶದಲ್ಲಿಯೇ ಹೆಸರುವಾಸಿಯಾದ ಕರ್ನಾಟಕ ವಿಶ್ವವಿದ್ಯಾಲಯದ ಮಾನ ಹರಾಜು ಹಾಕಿದವರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂದು ಪರೀಕ್ಷೆಗೆ ಹಾಜರಿರುವ ವಿದ್ಯಾರ್ಥಿಗಳು ಕನ್ನಡ ಅಕ್ಷರಗಳು ತಪ್ಪಾಗಿರುವುದನ್ನು ಗಮನಿಸಿ ಪ್ರಶ್ನಿಸಿದರೆ ಪರೀಕ್ಷಾ ಮೇಲ್ವಿಚಾರಕರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇರುವುದು ಖಂಡನೀಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕನ್ನಡ ಅಕ್ಷರ ದೋಷದ ಕುರಿತು ಪತ್ರಿಕೆಗಳು ಕನ್ನಡ ಪರ ಸಂಘಟನೆಗಳು ಮತ್ತು ಶಿಕ್ಷ ಣ ಹಾಗೂ ಭಾಷಾ ಪ್ರೇಮಿಗಳು ತಮ್ಮ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಸೋಮವಾರ ನಡೆದ ಬಿಎಡ್ ನಾಲ್ಕನೇ ಸೆಮಿಸ್ಟರ್ನ,ಶೈಕ್ಷ ಣಿಕ ತಂತ್ರ ಶಾಸ್ತ್ರ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪುನಃ ತಪ್ಪಾಗಿದೆ. ಆ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಘನತೆಯನ್ನು ಅಧಿಕಾರಿಗಳು ಹಾಳು ಮಾಡಿದ್ದಾರೆ. ಕವಿವಿ ಆಡಳಿತ ಮಂಡಳಿ ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ನಡೆಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಪರೀಕ್ಷೆ ವಿಭಾಗವಿದ್ದು, ಅಲ್ಲಿ ಸಾಕಷ್ಟು ವಿಷಯ ತಜ್ಞರು, ನುರಿತ ಪ್ರಾಧ್ಯಾಪಕರು ಇದ್ದಾರೆ ಹೀಗಿದ್ದರೂ ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಅಕ್ಷ ರಗಳು ದೋಷಪೂರಿತವಾಗಿರುವುದು ವಿಪರ್ಯಾಸ. ಹೀಗಾಗಿ ಕವಿವಿ ಕುಲಪತಿಗಳು ತಪ್ಪು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಬೆಳಗಾವಿ ವಿಭಾಗದ ಅಧ್ಯಕ್ಷ ಪಾಪು ಧಾರೆ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.
ಕವಿವಿ ಕುಲಪತಿಗಳಿಗೆ ಮನವಿ ಮಾಡಿಕೊಂಡ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಬಿಎಡ್ ಮೂರನೇ ಸೆಮಿಸ್ಟರ್ನ,ಸಮನ್ವಯ ಶಿಕ್ಷ ಣ ವಿಷಯ ಹಾಗೂ ನಾಲ್ಕನೇ ಸೆಮಿಸ್ಟರ್ನ ಶೈಕ್ಷ ಣಿಕ ತಂತ್ರ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ ಕನ್ನಡ ಅಕ್ಷ ರಗಳನ್ನು ತಪ್ಪಾಗಿ ಮುದ್ರಣ ಮಾಡುವ ಮೂಲಕ ಇಡೀ ದೇಶದಲ್ಲಿಯೇ ಹೆಸರುವಾಸಿಯಾದ ಕರ್ನಾಟಕ ವಿಶ್ವವಿದ್ಯಾಲಯದ ಮಾನ ಹರಾಜು ಹಾಕಿದವರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂದು ಪರೀಕ್ಷೆಗೆ ಹಾಜರಿರುವ ವಿದ್ಯಾರ್ಥಿಗಳು ಕನ್ನಡ ಅಕ್ಷರಗಳು ತಪ್ಪಾಗಿರುವುದನ್ನು ಗಮನಿಸಿ ಪ್ರಶ್ನಿಸಿದರೆ ಪರೀಕ್ಷಾ ಮೇಲ್ವಿಚಾರಕರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇರುವುದು ಖಂಡನೀಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕನ್ನಡ ಅಕ್ಷರ ದೋಷದ ಕುರಿತು ಪತ್ರಿಕೆಗಳು ಕನ್ನಡ ಪರ ಸಂಘಟನೆಗಳು ಮತ್ತು ಶಿಕ್ಷ ಣ ಹಾಗೂ ಭಾಷಾ ಪ್ರೇಮಿಗಳು ತಮ್ಮ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಸೋಮವಾರ ನಡೆದ ಬಿಎಡ್ ನಾಲ್ಕನೇ ಸೆಮಿಸ್ಟರ್ನ,ಶೈಕ್ಷ ಣಿಕ ತಂತ್ರ ಶಾಸ್ತ್ರ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪುನಃ ತಪ್ಪಾಗಿದೆ. ಆ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಘನತೆಯನ್ನು ಅಧಿಕಾರಿಗಳು ಹಾಳು ಮಾಡಿದ್ದಾರೆ. ಕವಿವಿ ಆಡಳಿತ ಮಂಡಳಿ ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ನಡೆಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಪರೀಕ್ಷೆ ವಿಭಾಗವಿದ್ದು, ಅಲ್ಲಿ ಸಾಕಷ್ಟು ವಿಷಯ ತಜ್ಞರು, ನುರಿತ ಪ್ರಾಧ್ಯಾಪಕರು ಇದ್ದಾರೆ ಹೀಗಿದ್ದರೂ ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಅಕ್ಷ ರಗಳು ದೋಷಪೂರಿತವಾಗಿರುವುದು ವಿಪರ್ಯಾಸ. ಹೀಗಾಗಿ ಕವಿವಿ ಕುಲಪತಿಗಳು ತಪ್ಪು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಬೆಳಗಾವಿ ವಿಭಾಗದ ಅಧ್ಯಕ್ಷ ಪಾಪು ಧಾರೆ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.