ಆ್ಯಪ್ನಗರ

ಪರಾರ‍ಯಯ ಇಂಧನ ಉತ್ಪಾದನೆಗೆ ಆದ್ಯತೆ

ಧಾರವಾಡ: ಹವಾಮಾನ ತಡೆಯಲು ನೈಸರ್ಗಿಕ ಸಂಪತ್ತಿನಿಂದ ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ವಾಹನ ಚಾಲನೆಗೆ ಬರುವ ದಿನಗಳಲ್ಲಿಆದ್ಯತೆ ನೀಡಲಾಗುವುದು ಎಂದು ಸೆಂಟ್ರಲ್‌ ಇಲೆಕ್ಟ್ರೋ ಕೆಮಿಕಲ್‌ ರಿಸರ್ಚ ಇನಸ್ಟಿಟ್ಯೂಟ್‌ ಮದ್ರಾಸ್‌ ವಿಭಾಗದ ರಸಾಯನ ಶಾಸ್ತ್ರ ವಿಜ್ಞಾನಿ ಅನಿಲಕುಮಾರ ಸಾಹು ಹೇಳಿದರು.

Vijaya Karnataka 16 Nov 2019, 5:00 am
ಧಾರವಾಡ: ಹವಾಮಾನ ತಡೆಯಲು ನೈಸರ್ಗಿಕ ಸಂಪತ್ತಿನಿಂದ ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ವಾಹನ ಚಾಲನೆಗೆ ಬರುವ ದಿನಗಳಲ್ಲಿಆದ್ಯತೆ ನೀಡಲಾಗುವುದು ಎಂದು ಸೆಂಟ್ರಲ್‌ ಇಲೆಕ್ಟ್ರೋ ಕೆಮಿಕಲ್‌ ರಿಸರ್ಚ ಇನಸ್ಟಿಟ್ಯೂಟ್‌ ಮದ್ರಾಸ್‌ ವಿಭಾಗದ ರಸಾಯನ ಶಾಸ್ತ್ರ ವಿಜ್ಞಾನಿ ಅನಿಲಕುಮಾರ ಸಾಹು ಹೇಳಿದರು.
Vijaya Karnataka Web priority for parabolic fuel production
ಪರಾರ‍ಯಯ ಇಂಧನ ಉತ್ಪಾದನೆಗೆ ಆದ್ಯತೆ


ಇಲ್ಲಿನ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಸಭಾಭವನದಲ್ಲಿಸೋಮೇಶ್ವರದ ಕೇಂದ್ರೀಯ ವಿದ್ಯಾಲಯದ ಮಕ್ಕಳಿಗಾಗಿ ಜಿಜ್ಞಾಸಾ 2019 ಅಂಗವಾಗಿ ಹಮ್ಮಿಕೊಂಡ ಸಂವಾದಾತ್ಮಕ ವಿಜ್ಞಾನ ಪ್ರಸ್ತುತಿ ( ಇಂಟರಾರ‍ಯಕ್ಷನ್‌ ಸೈಂಟಿಫಿಕ್‌ ಪ್ರೆಸೆಂಟೆಶನ್‌) ಕಾರ್ಯಕ್ರಮ ಗುರುವಾರ ಉದ್ಘಾಟಿಸಿ ಮಾತನಾಡಿದರು.

ಪೆಟ್ರೋಲ್‌ ಹಾಗೂ ಡಿಸೇಲ್‌ ಬಳಸುವ ವಾಹನಗಳಿಂದ ಕಾರ್ಬನ್‌ ಡೈ ಆಕ್ಸೆತ್ರೖಡ್‌, ಕಾರ್ಬನ್‌ ಮೋನಾಕ್ಸೆತ್ರೖಡ್‌ದಿಂದ ಹವಾಮಾನ ಈಗಾಗಲೇ ರಾಜಧಾನಿ ದೆಹಲಿ ಸಂಕಷ್ಟದಲ್ಲಿದೆ. ಮುಂದೆ ಚನ್ನೆತ್ರೖ, ಮುಂಬೈ, ಕಲ್ಕತ್ತಾ, ಬೆಂಗಳೂರು ನಗರಗಳಲ್ಲಿಯೂ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಮನಗಂಡ ಕೇಂದ್ರ ಸರಕಾರ ಬ್ಯಾಟರಿಚಾಲಿತ, ಹೈಡ್ರೋಜನ್‌ ಚಾಲಿತ, ವಾಹನಗಳಿಗೆ ಆದ್ಯತೆ ನೀಡಿ 2025ರಿಂದ 2030ರಲ್ಲಿಅನುಷ್ಠಾನಕ್ಕೆ ತಂದು ಪರಿಸರವನ್ನು ಕಾಪಾಡಲು ಶ್ರಮಿಸುತ್ತಿದೆ ಎಂದರು.

ಸೌರ್ಯಶಕ್ತಿ, ಗಾಳಿಶಕ್ತಿ, ಪರಮಾಣು ಶಕ್ತಿ, ಉಷ್ಣಶಕ್ತಿ, ಸಮುದ್ರದ ಅಲೆಗಳ ಶಕ್ತಿಯನ್ನು ಉಪಯೋಗಿಸಿ ವಿದ್ಯುತ್‌ ಉತ್ಪಾದಿಸಲು ಶ್ರಮಿಸಲಾಗುತ್ತಿದೆ. ಹೈಡ್ರೋಜನ್‌ ಚಾಲಿತ ವಾಹನಗಳಿಂದ ಪರಿಸರದಲ್ಲಿಯಾವುದೇ ಹಾನಿ ಆಗುವದಿಲ್ಲಎಂದು ಹೇಳಿದರು.

ವಿಜ್ಞಾನಿ ಡಾ. ಎಸ್‌.ಮಹೇಶ್ವರನ್‌ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿಜ್ಞಾನದ ಅಭಿರುಚಿ ಬೆಳೆಸಿಕೊಳ್ಳಬೇಕು. ಯಾವುದೇ ತಾಂತ್ರಿಕ ವಿಭಾಗದಲ್ಲಿಅಭ್ಯಸಿಸಲು ನ್ಯಾನೋ ಟೆಕ್ನಾಲಜಿ, ಆಪ್ಟಿಕಲ್‌ ಫೈಬರ್‌, ಮೆಕ್ಯಾನಿಕಲ್‌, ಇಲೆಕ್ಟ್ರೀಕಲ್‌ ಥರ್ಮಲ್‌ ಟೆಕ್ನಾಲಜಿ, ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಪ್ರಸ್ತುತವಾಗಿ ಕಾಂಕ್ರಿಟ್‌ನಲ್ಲಿಬಿರುಕುಗಳನ್ನು ಮುಚ್ಚಲು ಸೂಕ್ಷಾತ್ರ್ಮಣುವಿನ ಸಹಾಯದೊಂದಿಗೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿನಾವು ಸಫಲರಾಗಿದ್ದೇವೆ. ಕ್ಯಾಲ್ಸಿಯಂ ಕಾರ್ಬೋನೆಟ್‌ನೊಂದಿಗೆ ಸೂಕ್ಷಾತ್ರ್ಮಣುಗಳನ್ನು ಮಿಶ್ರಣ ಮಾಡುವ ಮೂಲಕ ಸ್ಲಾತ್ರ್ಯಬ್‌ ಬಿರುಕಿನ ಸ್ಥಳದಲ್ಲಿಹಾಕುವುದರಿಂದ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.

ಇದೇ ವೇಳೆ ನಡೆದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉಪಯೋಗಿಸಿ ಮನೆ ಕಟ್ಟಲು ಸಾಧ್ಯವೆ, ಬಿರುಗಾಳಿ ಬಂದಾಗ ಗಿಡಗಳು ಮಧ್ಯದಲ್ಲಿತುಂಡರಿಸದೆ ಬೇರು ಸಮೇತ ಬುಡ ಮೇಲಾಗಲು ಕಾರಣ, ಫ್ಯಾನ್‌ನಿಂದ ಕೆಳಗಡೆ ಗಾಳಿ ಹೇಗೆ ಉತ್ಪತ್ತಿಯಾಗುತ್ತದೆ ಮಂಜುಗಡ್ಡೆಯ ಮೇಲೆ ಸ್ಕೇಟಿಂಗ್‌ ಮೂಲಕ ಮಾನವ ಹೇಗೆ ಜೋರಾಗಿ ಹೋಗಲು ಸಾಧ್ಯ ಸೇರಿದಂತೆ ಇತರ ಪ್ರಶ್ನೆಗಳಿಗೆ ಉತ್ತಿರಿಸಿದರು.

ವಿಜ್ಞಾನಿ ಎನ್‌.ಸಿ. ಬಾಗವಾನ ಮಾತನಾಡಿ, ದೇಶದಲ್ಲಿ38ರಾಷ್ಟ್ರೀಯ ಪ್ರಯೋಗಾಲಯಗಳಿವೆ. ವಿಜ್ಞಾನದ ಅಭಿರುಚಿಯಿಂದ ಹೊಸ ಆವಿಷ್ಕಾರಗಳನ್ನು ಮಾಡಲು ಸಾಧ್ಯ. ಇದರಿಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಸುಧಾರಿಸಲಿದೆ ಎಂದರು.

ವಿದ್ಯಾರ್ಥಿಗಳು ವಿಜ್ಞಾನಿಗಳಾಗುವ ಮೂಲಕ ದೇಶದ ಪ್ರಗತಿಯಲ್ಲಿಭಾಗಿಯಾಗಬೇಕು ಎಂಬ ಮಹಾತ್ವಾಕಾಂಕ್ಷೆ ಯೋಜನೆ ಇದಾಗಿದೆ. ದೇಶದ ಮಹಿಳಾ ವಿಜ್ಞಾನಿಗಳಿಗೆ ಸ್ಥಳೀಯ ಶಾಲೆಗಳಿಗೆ ಹೋಗಿ ಕಾರ್ಯಕ್ರಮ ನೀಡಲು ಸೂಚಿಸಲಾಗಿದೆ. 8ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ ಎಂದರು.

ಕೇಂದ್ರೀಯ ವಿದ್ಯಾಲಯದೊಂದಿಗೆ ಆಯಾ ರಾಜ್ಯದ ಸರಕಾರಿ ಶಾಲೆಗಳೊಂದಿಗೆ ಸ್ಥಳೀಯ ಭಾಷೆಗಳಲ್ಲಿಕಾರ್ಯಕ್ರಮ ಮಾಡು ಉದ್ದೇಶ ಹೊಂದಿದೆ. ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮನ್ನು ಸಂಪರ್ಕಿಸಿದ್ದಲ್ಲಿಆಯಾ ಶಾಲೆಗಳಲ್ಲಿನಾವು ಕಾರ್ಯಕ್ರಮ ಮಾಡಲು ಸಿದ್ಧ ಎಂದು ಹೇಳಿದರು.

ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ ಕೆ. ಎಸ್‌.ಮುರಳಿಕೃಷ್ಣನ್‌, ವಿ.ವಿ. ರಘುನಾಥ, ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಪ್ರಿನ್ಸಿಪಾಲ ಡಾ. ಎಸ್‌.ಬಿ.ಒಣಕುದುರೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವೀಣಾ ಕಾಮತ ಪರಿಚಯಿಸಿದರು. ಮೋನಾ ಎಸ್‌.ಸ್ವಾಗತಿಸಿದರು. ಐಶ್ವರ್ಯ ಎ.ನಿರೂಪಿಸಿದರು. ನೀತಾ ವಿ.ಕಾರೆಕರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ