ಆ್ಯಪ್ನಗರ

ಪೊಲೀಸರ ಕಣ್ಗಾವಲಲ್ಲೇ ಕೈದಿ ಪರಾರಿ

ಧಾರವಾಡ : ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಕೈದಿ ಕೋರ್ಟ್‌ನಿಂದ ವಾಪಸ್‌ ಜೈಲ್‌ಗೆ ಹೋಗುವ ಮಾರ್ಗದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.

Vijaya Karnataka 21 Jul 2019, 5:00 am
ಧಾರವಾಡ : ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಕೈದಿ ಕೋರ್ಟ್‌ನಿಂದ ವಾಪಸ್‌ ಜೈಲ್‌ಗೆ ಹೋಗುವ ಮಾರ್ಗದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.
Vijaya Karnataka Web prisoner escapes under police surveillance
ಪೊಲೀಸರ ಕಣ್ಗಾವಲಲ್ಲೇ ಕೈದಿ ಪರಾರಿ


ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಬೆಳಧಿಗಾಧಿವಿ ಮೂಲದ ನಿತೀಶ್‌ ಜಗಧಿನ್ನಾಥ ಡಾಪಲೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾದ ವಿಚಾಧಿರಧಿಣಾಧೀಧಿನ ಕೈದಿ. ಈತನನ್ನು ಉಪನಗರ ಠಾಣೆ ಪೊಲೀಸರು ಶನಿವಾರ ನಗರದ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಾಪಸ್‌ ಜೈಲಿಗೆ ಕರೆದುಕೊಂಡು ಹೋಗುತ್ತಿರುವಾಗ ಎಲ್‌ಇಎ ಕ್ಯಾಂಟೀನ್‌ ಬಳಿ ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ತಪೋವನ ಬಳಿ ಹಾಗೂ ಅಳ್ನಾವರ ದರೋಡೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ಆಂಧ್ರ ಪ್ರದೇಶ, ಮುಂಬಯಿ ಸೇರಿದಂತೆ ಈತನ ಮೇಲೆ 20ಕ್ಕೂ ಹೆಚ್ಚು ದರೋಡೆ ಪ್ರಕರಣಗಳಿದ್ದವು. ಅದರಂತೆ ಮೂರು ವರ್ಷಗಳ ಹಿಂದೆ ಆಂಧ್ರ ಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಈತನನ್ನು ಉಪನಗರ ಠಾಣೆ ಪೊಲೀಸರು ಆಗಲೇ ವಶಕ್ಕೆ ಪಡೆದು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದರು. ಆದರೆ, ಶನಿವಾರ ಎಸ್ಕಾರ್ಟ್‌ ನೀಡಿದ್ದ ಇಬ್ಬರು ಪೊಲೀಸರನ್ನು ತಳ್ಳಿ ಈತ ಪರಾರಿ ಆಗಿದ್ದಾನೆ.

ಈ ಕುರಿತಂತೆ 'ವಿಕ' ಜೊತೆ ಮಾತನಾಡಿದ ಇನ್ಸಪೆಕ್ಟರ್‌ ಮಹಾಂತೇಶ ಬಸಾಪುರ, ''ಆರೋಪಿ ನಿತೀಶ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿ ವಾಪಸ್‌ ಜೈಲಿಗೆ ಕರೆದೊಯ್ಯಲಾಗುತ್ತಿತ್ತು. ಆಗ ಇಬ್ಬರು ಪೇದೆಗಳನ್ನು ತಳ್ಳಿ ಓಡಿ ಹೋಗಿದ್ದಾನೆ. ಆತನ ಬಂಧನಕ್ಕೆ ಜಾಲ ಬೀಸಲಾಗಿದೆ'' ಎಂದು ತಿಳಿಸಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ