ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜು. 11 ರಂದು ಬೆಳಗ್ಗೆ 11ಕ್ಕೆ ಕರಡಿಗುಡ್ಡದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಚರ್ಚಾ ಕೂಟ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಜನಸಂಖ್ಯೆಯ ಪ್ರಸ್ತುತತೆ ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.
Vijaya Karnataka 11 Jul 2019, 5:00 am
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜು. 11 ರಂದು ಬೆಳಗ್ಗೆ 11ಕ್ಕೆ ಕರಡಿಗುಡ್ಡದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಚರ್ಚಾ ಕೂಟ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಜನಸಂಖ್ಯೆಯ ಪ್ರಸ್ತುತತೆ ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.
ಸಿಬಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಿಂ. ಕೆಂಪಸಣ್ಣವರ ಉದ್ಘಾಟಿಸುವರು. ಪ್ರಾಚಾರ್ಯ ಹನುಮಂತಪ್ಪ ನಿಟ್ಟೂರ ಅಧ್ಯಕ್ಷ ತೆ ವಹಿಸುವರು. ಉಪನ್ಯಾಸಕರಾಗಿ ಶ್ರೀಕಾಂತ ಯಲಿಗಾರ ಆಗಮಿಸುವರು. ಕವಿಸಂ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಬಹುಮಾನ ವಿತರಿಸುವರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಹಾಗೂ ಮಕ್ಕಳ ಮಂಟಪದ ಸಂಚಾಲಕ ಶಿವಾನಂದ ಭಾವಿಕಟ್ಟಿ ಪಾಲ್ಗೊಳ್ಳುವರು.
ಸಿಬಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಿಂ. ಕೆಂಪಸಣ್ಣವರ ಉದ್ಘಾಟಿಸುವರು. ಪ್ರಾಚಾರ್ಯ ಹನುಮಂತಪ್ಪ ನಿಟ್ಟೂರ ಅಧ್ಯಕ್ಷ ತೆ ವಹಿಸುವರು. ಉಪನ್ಯಾಸಕರಾಗಿ ಶ್ರೀಕಾಂತ ಯಲಿಗಾರ ಆಗಮಿಸುವರು. ಕವಿಸಂ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಬಹುಮಾನ ವಿತರಿಸುವರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಹಾಗೂ ಮಕ್ಕಳ ಮಂಟಪದ ಸಂಚಾಲಕ ಶಿವಾನಂದ ಭಾವಿಕಟ್ಟಿ ಪಾಲ್ಗೊಳ್ಳುವರು.