ಆ್ಯಪ್ನಗರ

ಸಂತ್ರಸ್ತರಿಗೆ ನೆರವಿನ ಭರವಸೆ

ಅಳ್ನಾವರ : ಸತತ ಮಳೆಯಿಂದ ಅಪಾಯದ ಸುಳಿವಿಗೆ ಸಿಲುಕಿರುವ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಸಚಿವ ಜಗದೀಶ ಶೆಟ್ಟರ ಅವರು ಬುಧವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Vijaya Karnataka 22 Aug 2019, 5:00 am
ಅಳ್ನಾವರ : ಸತತ ಮಳೆಯಿಂದ ಅಪಾಯದ ಸುಳಿವಿಗೆ ಸಿಲುಕಿರುವ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಸಚಿವ ಜಗದೀಶ ಶೆಟ್ಟರ ಅವರು ಬುಧವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
Vijaya Karnataka Web DRW-21 ALN PHOTO 1 B
ಸಚಿವ ಜಗದೀಶ ಶೆಟ್ಟರ ಬುಧವಾರ ಅಳ್ನಾವರದ ಹುಲಿಕೆರೆಯ ಇಂದ್ರಮ್ಮ ಕೆರೆ ,ಡೌಗಿ ನಾಲಾ ವೀಕ್ಷಣೆ ಜತೆಗೆ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.


ಜನರ ಜೀವ ಹಾಗೂ ಆಸ್ತಿ ರಕ್ಷ ಣೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಳೆಯಿಂದ ಬಾಧಿತರಾದವರಿಗೆ ಸರಕಾರದಿಂದ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದರು. ಪಟ್ಟಣದ ತಿಲಕನಗರ ದೇಸಾಯಿಚಾಳಗೆ ತೆರಳಿ ಸಂತ್ರಸ್ತರ ಆಸ್ತಿಪಾಸ್ತಿ ಹಾನಿಗಳ ಬಗ್ಗೆ ಮಾತನಾಡಿಸಿ ತಕ್ಷಣ ಪರಿಹಾರ ನೀಡಲಾಗುವುದೆಂದು ಭರವಸೆ ನೀಡಿದರು.

ಡೌಗಿ ನಾಲಾಕ್ಕೆ ಭೇಟಿ
ಪಟ್ಟಣದ ಕುಡಿಯುವ ಮೂಲ ಡೌಗಿ ನಾಲಾಕ್ಕೆ ಅಡ್ಡಲಾಗಿ ಕಟ್ಟಿದ ಬಾಂದಾರ ಎರಡು ಬದಿ ಪ್ರವಾಹದಿಂದ ಕೊಚ್ಚಿಹೋಗಿದೆ. ಹುಲಿಕೇರಿ ಕೆರೆಗೆ ಖಾನಾಪೂರ ತಾಲೂಕಿನ ಗೋಧೂಳಿ ಕೆರೆ ,ಬಾಳಗೆರೆ ಕೆರೆ ,ಗಟ್ನೊಳ್ಳಿ ಕೆರೆ ಹೆಚ್ಚು ನೀರು ಡೌಗಿ ನಾಲಾ ಹಳ್ಳಕ್ಕೆ ಹರಿದು ಬಂದಿದೆ. ಇದರಿಂದ ಬಾಂದಾರ ಪಕ್ಕದಲ್ಲಿರುವ ಭೂಮಿ ಕುಸಿತವಾಗಿದೆ. ಬಾಂದಾರದಿಂದ ಹರಿಯುವ ನೀರು ಅನಾಹುತಕ್ಕೆ ಕಾರಣವಾಗದಂತೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಮ್ಮನ ಕೆರೆ ಭೇಟಿ
ಹುಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ಒಡೆಯುವ ಭೀತಿ ಜನರಲ್ಲಿ ಇದೆ. ಮತ್ತೆ ಮಳೆಯಾಗಿ ನೆರೆ ಬಂದರೆ ಕೆರೆ ಒಡೆಯುವ ಸಾಧ್ಯತೆ ಇದೆ ಎಂದು ಪಟ್ಟಣದ ಜನರು ಸಚಿವರೆದುರು ಅಹವಾಲು ಕೇಳಿದರು. ಅಧಿಕಾರಿಗಳೊಡನೆ ಸಮಗ್ರವಾಗಿ ಚರ್ಚೆ ನಡೆಸಿ ತಜ್ಞರ ಸಲಹೆ ಪಡೆದು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದೆಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಎಂ.ದೀಪಾ , ಜಿಲ್ಲಾ ಯೋಜನಾ ನೀರ್ದೇಶಕ ವಿನಾಯಕ ಪಾಲನಕರ, ತಹಸೀಲ್ದಾರ ಅಮರೇಶ ಪಮ್ಮಾರ, ಪಟ್ಟಣದ ಪಂಚಾಯಿತಿ ಮುಖ್ಯಾಧಿಕಾರಿ ವಾಯ್‌.ಜಿ .ಗದ್ದಿಗೌಡರ,ಲಿಂಗರಾಜ ಮೂಲಿಮನಿ, ಈರಣ್ಣಾ ಜಡಿ, ಅಮೃತ ದೇಸಾಯಿ, ಮಹೇಶ ತೆಂಗಿನಕಾಯಿ, ಮಲ್ಲಿಕಾರ್ಜುನ ಸಾವುಕಾರ, ಬಸವರಾಜ ಕುಂದಗೋಳಮಠ, ನಾರಾಯಣ ಮೋರೆæ, ಪ್ರತಾಪ ಕಲಾಲ, ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ