ಆ್ಯಪ್ನಗರ

ಆಸ್ತಿ ವಿವಾದ ಹಿನ್ನೆಲೆ ಹಲ್ಲೆ

ಧಾರವಾಡ : ಆಸ್ತಿ ವಿವಾದ ಹಿನ್ನೆಲೆ ಅತ್ತಿಗೆ ಹಾಗೂ ಅಣ್ಣನಿಗೆ ತಮ್ಮಂದಿರು ಹಾಗೂ ನಾದಿನಿಯರು ಥಳಿಸಿದ ಘಟನೆ ಇತ್ತೀಚೆಗೆ ನಿಗದಿ ಗ್ರಾಮದಲ್ಲಿ ನಡೆದಿದೆ

Vijaya Karnataka 22 May 2019, 5:00 am
ಧಾರವಾಡ : ಆಸ್ತಿ ವಿವಾದ ಹಿನ್ನೆಲೆ ಅತ್ತಿಗೆ ಹಾಗೂ ಅಣ್ಣನಿಗೆ ತಮ್ಮಂದಿರು ಹಾಗೂ ನಾದಿನಿಯರು ಥಳಿಸಿದ ಘಟನೆ ಇತ್ತೀಚೆಗೆ ನಿಗದಿ ಗ್ರಾಮದಲ್ಲಿ ನಡೆದಿದೆ
Vijaya Karnataka Web property dispute background attack
ಆಸ್ತಿ ವಿವಾದ ಹಿನ್ನೆಲೆ ಹಲ್ಲೆ


ನಿಗದಿ ಗ್ರಾಮದ ಬೀಮಪ್ಪಾ ಹಳ್ಯಾಳ ಹಾಗೂ ಆತನ ಪತ್ನಿ ಸುಶೀಲಾ ಹಳ್ಯಾಳ ಅವರ ಮೇಲೆ ಹಲ್ಲೆ ನಡೆದಿದೆ.ತಾಲೂಕಿನ ನಿಗದಿ ಗ್ರಾಮದಲ್ಲಿ ಏ. 16 ರಂದು ಮೊಮ್ಮಕ್ಕಳನ್ನು ಕರೆದುಕೊಂಡು ಹೊಲಕ್ಕೆ ಹೋದಾಗ 2.35 ಗುಂಟೆ ಜಮೀನಿನ ವಿಚಾರವಾಗಿ ಮೈದುನರಾದ ಮಂಜುನಾಥ, ಪರಮೇಶ್ವರ, ಮಡಿವಾಳಿ, ಈಶ್ವರ ಹಾಗೂ ಅವರ ಹೆಂಡತಿಯರು ಹಲ್ಲೆ ನಡೆಸಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸುಶೀಲ ಹಳ್ಯಾಳ ಅಳ್ಳಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ