ಆ್ಯಪ್ನಗರ

ಸಚಿವ ಸುರೇಶ್ ಕುಮಾರ್ ಹೇಳಿಕೆ ಖಂಡಿಸಿ ಡಿ. 2ಕ್ಕೆ ಧಾರವಾಡದಲ್ಲಿ ಪ್ರತಿಭಟನೆ

ಕೊರೊನಾ ಸಂಕಷ್ಟದ ಸುಳಿಗೆ ಸಿಲುಕಿದ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ವಿವಿಧ ಟ್ಯಾಕ್ಸ್‌ ಹಾಗೂ ನವೀಕರಣ ಶುಲ್ಕದಿಂದ ವಿನಾಯಿತಿ ಜತೆಗೆ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಾಯಿಸಿ ಧರಣಿ ಆಯೋಜಿಸಿದ್ದು, ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಕೋರಿದರು.

Vijaya Karnataka Web 28 Nov 2020, 11:16 am
ಧಾರವಾಡ: ಸರಕಾರಿ ಮತ್ತು ಖಾಸಗಿ ಶಾಲೆಗಳತ್ತ ರಾಜ್ಯ ಸರಕಾರ ಅನುಸರಿಸುವ ತಾರತಮ್ಯ ಧೋರಣೆ ಹಾಗೂ ಶಿಕ್ಷಣ ಸಚಿವರ ಹೇಳಿಕೆ ಖಂಡಿಸಿ ಡಿ. 2ರಂದು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ಎದುರು ಸಾಂಕೇತಕ ಧರಣಿ ನಡೆಸಲಾಗುವುದು ಎಂದು ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು.
Vijaya Karnataka Web suresh kumar


ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ರೌಡಿಶೀಟರ್‌ನ ಕೊಂದಿದ್ದ ಆರೋಪಿ ಆರೋಪಿ ಬಂಧನ

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬೆಂಗಳೂರು ಕೇಂದ್ರೀಕರಿಸಿ ಖಾಸಗಿ ಶಾಲೆಗಳ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವುದು ಸಲ್ಲ. ಉತ್ತರ ಕರ್ನಾಟಕದ ಖಾಸಗಿ ಶಾಲೆಗಳು ಪಡೆಯುವ ಶುಲ್ಕದ ಬಗ್ಗೆ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು. ವಾಸ್ತವದ ನೆಲೆಗಟ್ಟಿನಲ್ಲಿ ಸರಕಾರ ಮತ್ತು ಸಚಿವರು ನಿರ್ಣಯ ತೆಗೆದುಕೊಳ್ಳಲಿ. ಈ ಮೊದಲು ಸಚಿವರು ಶಿಕ್ಷಕರಿಗೆ ಮೂಲವೇತನ ನೀಡದಿದ್ದರೆ ಶಾಲೆಯ ಮಾನ್ಯತೆ ರದ್ದುಗೊಳಿಸುವ ಹೇಳಿಕೆ ನೀಡಿದ್ದರು. ಇದೀಗ ಈ ವರ್ಷದ ಶುಲ್ಕ ಭರಿಸುವಂತೆ ಒತ್ತಾಯಿಸಿದರೆ ಮಾನ್ಯತೆ ರದ್ದತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಕನ್ನಡಪರ ಕಾರ್ಯಕರ್ತರು ರೋಲ್‌ಕಾಲ್‌ ಹೋರಾಟಗಾರರು ಎಂಬ ಹೇಳಿಕೆಗೆ ನಾನು ಬದ್ಧ; ಶಾಸಕ ಬೆಲ್ಲದ್

ಶಿಕ್ಷಣ ಸಂಸ್ಥೆಗಳು ಶುಲ್ಕ ಪಡೆಯದೇ ಶಿಕ್ಷಕರಿಗೆ ಮೂಲವೇತನ ನೀಡುವುದು ಹೇಗೆ? ಶಾಲಾ ಕಟ್ಟಡದ ಟ್ಯಾಕ್ಸ್‌/ ಬಾಡಿಗೆ, ನೀರಿನ ಮತ್ತು ವಿದ್ಯುತ್‌ ಶುಲ್ಕ, ಪಿಎಫ್‌-ಇಎಸ್‌ಐ, ಪ್ರೊಫೆಶನಲ್‌ ಟ್ಯಾಕ್ಸ್‌, ಶಾಲೆಯ ನಿರ್ವಹಣಾ ವೆಚ್ಚ, ಶಾಲಾ ನವೀಕರಣ ಶುಲ್ಕ, ಶಾಲಾ ವಾಹನ ರಸ್ತೆ ತೆರಿಗೆ, ಇನ್ಸ್ಸೂರೆನ್ಸ್‌, ಪಠ್ಯಪುಸ್ತಕ ವೆಚ್ಚ ಭರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

6 ಜನ ಬೆಂಗಳೂರು ಪೊಲೀಸ್ ಸಿಬ್ಬಂದಿ ಮೇಲೆ ಇರಾನಿ ಗ್ಯಾಂಗ್‌ ಹಲ್ಲೆ; ಧಾರವಾಡದಲ್ಲಿ ನಡೀತು ಭಯಾನಕ ಕೃತ್ಯ..!

ಕೊರೊನಾ ಸಂಕಷ್ಟದ ಸುಳಿಗೆ ಸಿಲುಕಿದ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ವಿವಿಧ ಟ್ಯಾಕ್ಸ್‌ ಹಾಗೂ ನವೀಕರಣ ಶುಲ್ಕದಿಂದ ವಿನಾಯಿತಿ ಜತೆಗೆ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಾಯಿಸಿ ಧರಣಿ ಆಯೋಜಿಸಿದ್ದು, ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಮಹಾವೀರ ಉಪಾಧ್ಯೆ, ಲಕ್ಷತ್ರ್ಮಣ ಉಪ್ಪಾರ, ಸಾಲಿಮಠ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ