ಧಾರವಾಡ: ದತ್ತಪೀಠವನ್ನು ಸರಕಾರ ಹಿಂದೂಗಳಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅ.25ರಂದು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಹಿಂದೂಗಳ ಮೇಲೆ ಸರಕಾರ ಸತತವಾಗಿ ದಬ್ಬಾಳಿಕೆ ಮಾಡುತ್ತಿದೆ. ಪುಣ್ಯಕ್ಷೇತ್ರಗಳನ್ನು ಸರಕಾರ ವಶಪಡಿಸಿಕೊಂಡು ದತ್ತಾತ್ರೇಯನ ಪಾದುಕೆ ದರ್ಶನಕ್ಕೆ ಅಡ್ಡಿ ವ್ಯಕ್ತಪಡಿಸಲಾಗುತ್ತಿದೆ. ಇದು ಭಕ್ತಿ ಭಾವನೆಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಹೀಗಾಗಿ ಬೇಗನೆ ಹಿಂದೂಗಳ ಪವಿತ್ರ ಕ್ಷೇತ್ರವಾದ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಧರಣಿ ನಡೆಸಲಾಗುತ್ತಿದೆ ಎಂದು ಶ್ರೀರಾಮಸೇನಾ ನಗರ ಅಧ್ಯಕ್ಷ ಮಂಜುನಾಥ ಕವಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದತ್ತಪೀಠ ಒಪ್ಪಿಸಲು ಆಗ್ರಹಿಸಿ ಇಂದು ಪ್ರತಿಭಟನೆ
ಧಾರವಾಡ: ದತ್ತಪೀಠವನ್ನು ಸರಕಾರ ಹಿಂದೂಗಳಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅ.25ರಂದು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಹಿಂದೂಗಳ ಮೇಲೆ ಸರಕಾರ ಸತತವಾಗಿ ದಬ್ಬಾಳಿಕೆ ಮಾಡುತ್ತಿದೆ.
Vijaya Karnataka 25 Oct 2018, 5:00 am