ಆ್ಯಪ್ನಗರ

ವೇತನ ಬಿಡುಗಡೆಗೊಳಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಧಾರವಾಡ : ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರ ಡಿಸೆಂಬರ ತಿಂಗಳಿನಿಂದ ವೇತನ ಸಿಗದಾಗಿದ್ದು, ಶಿಕ್ಷಕ ವೃಂದ ಸಂಕಷ್ಟಕ್ಕೆ ಸಿಲುಕಿದೆ.

Vijaya Karnataka 1 Feb 2019, 5:00 am
ಧಾರವಾಡ : ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರ ಡಿಸೆಂಬರ ತಿಂಗಳಿನಿಂದ ವೇತನ ಸಿಗದಾಗಿದ್ದು, ಶಿಕ್ಷಕ ವೃಂದ ಸಂಕಷ್ಟಕ್ಕೆ ಸಿಲುಕಿದೆ.
Vijaya Karnataka Web protest warning if release of wages
ವೇತನ ಬಿಡುಗಡೆಗೊಳಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ


ಈ ಕುರಿತು ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಅನೇಕ ಬಾರಿ ತಾಲೂಕಾ ಪಂಚಾಯತದಿಂದ ಹಿಡಿದು ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ, ಉಪನಿರ್ದೇಶಕರ ಕಾರ್ಯಾಲಯಕ್ಕೆ ಭೆæೕಟಿಯಾದರು ಇದುವರೆಗೆ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ. ಅವರಿಂದ ಸಮರ್ಪಕವಾದ ಉತ್ತರವಿಲ್ಲದೆ ಒಬ್ಬರ ಮೇಲೆ ಒಬ್ಬರು ಕುಂಟು ನೆಪಗಳನ್ನು ಹೇಳುತ್ತಾ ಸಾಗುತ್ತಿದ್ದಾರೆ.

ಆದ್ದರಿಂದ ಶಿಕ್ಷ ಕರು ವೇತನವಿಲ್ಲದೆ ತಿಂಗಳುಗಳು ಕಳೆಯುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವೇತನ ಬಿಡುಗಡೆಗೆ ಕ್ರಮ ಜರುಗಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅವರ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ದಿವಾಕರ ಪುನೀತ, ಜಿಲ್ಲಾಧ್ಯಕ್ಷ ರಾದ ವಿಲ್ಸನ್‌ ಜೆ ಮೈಲಿ, ಪದಾಧಿಕಾರಿಗಳಾದ ಪಿ.ಎಸ್‌. ಸುಧಾಮಣಿ, ಆರ್‌.ಕೆ.ಬಳಗಾನೂರ, ಎಸ್‌.ಎಂ.ಹೂಗಾರ, ಎಸ್‌.ಎಸ್‌.ಕತ್ತೆಬೆನ್ನೂರ, ಡಿ.ಬಿ.ಹೊಂಬಳ, ಎಂ.ಬಿ.ಬೆನ್ನಪ್ಪನವರ, ಎಫ್‌.ಟಿ.ಕೆಮ್ಮಣಕೇರಿ, ಆರ್‌.ಆಯ್‌.ಪಡನೂರ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ