ಆ್ಯಪ್ನಗರ

ಬಿತ್ತನೆ ಬೀಜ, ಗೊಬ್ಬರ ಪೂರೈಸಲು ಆಗ್ರಹಿಸಿ ಪ್ರತಿಭಟನೆ

ನವಲಗುಂದ : ಸಹಕಾರಿ ಬ್ಯಾಂಕ್‌ಗಳಲ್ಲಿ ರಾಜ್ಯ ಸರಕಾರದ ಆದೇಶದಂತೆ ಸಾಲ ಮನ್ನಾ ಯೋಜನೆಯಡಿ ಸಾಲ ಮನ್ನಾ ಆಗಿರುವ ರೈತರಿಗೆ ಮರು ಸಾಲ ನೀಡಲು ನಿರಾಕರಿಸುತ್ತಿರುವುದು ಹಾಗೂ ಮುಂಗಾರು ಹಂಗಾಮಿಗೆ ರೈತರಿಗೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ವಿತರಿಸದಿರುವುದನ್ನು ಖಂಡಿಸಿ ತಾಲೂಕಿನ ಅಳಗವಾಡಿ ರೈತರು ಗ್ರಾಮದಲ್ಲಿನ ಪ್ರಾಥಮಿಕ ಸರಕಾರಿ ಪತ್ತಿನ ಸಂಘದ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 15 Jul 2019, 5:00 am
ನವಲಗುಂದ : ಸಹಕಾರಿ ಬ್ಯಾಂಕ್‌ಗಳಲ್ಲಿ ರಾಜ್ಯ ಸರಕಾರದ ಆದೇಶದಂತೆ ಸಾಲ ಮನ್ನಾ ಯೋಜನೆಯಡಿ ಸಾಲ ಮನ್ನಾ ಆಗಿರುವ ರೈತರಿಗೆ ಮರು ಸಾಲ ನೀಡಲು ನಿರಾಕರಿಸುತ್ತಿರುವುದು ಹಾಗೂ ಮುಂಗಾರು ಹಂಗಾಮಿಗೆ ರೈತರಿಗೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ವಿತರಿಸದಿರುವುದನ್ನು ಖಂಡಿಸಿ ತಾಲೂಕಿನ ಅಳಗವಾಡಿ ರೈತರು ಗ್ರಾಮದಲ್ಲಿನ ಪ್ರಾಥಮಿಕ ಸರಕಾರಿ ಪತ್ತಿನ ಸಂಘದ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web protests against sowing seed and fertilizer
ಬಿತ್ತನೆ ಬೀಜ, ಗೊಬ್ಬರ ಪೂರೈಸಲು ಆಗ್ರಹಿಸಿ ಪ್ರತಿಭಟನೆ


ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಕಳೆದ 4-5 ವರ್ಷದಿಂದ ಸ್ಥಳೀಯ ಸಹಕಾರಿ ಪತ್ತಿನ ಸಂಘ ಹಾಗೂ ಕೆಸಿಸಿ ಬ್ಯಾಂಕ್‌ನಲ್ಲಿ ರೈತರಿಗೆ ಸಾಲವನ್ನೇ ನೀಡುತ್ತಿಲ್ಲ. ಇದರಿಂದಾಗಿ ಸರಕಾರದ ಹಲವು ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಈ ಹಿಂದೆ ಗ್ರಾಮದ ಸಹಕಾರಿ ಪತ್ತಿನ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕಾರ್ಯದರ್ಶಿಯೊಬ್ಬರು ಕೋಟ್ಯಂತರ ರೂ. ಅವ್ಯವಹಾರ ಮಾಡುವ ಮೂಲಕ ಸಂಘವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿ ನಿವೃತ್ತಿ ಹೋಂದಿದ್ದಾರೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿಯೂ ಸಂಘದ ವಾರ್ಷಿಕ ವರದಿಯಲ್ಲಿ 25 ಲಕ್ಷ ರೂ. ವ್ಯತ್ಯಾಸ ತೋರಿಸುತ್ತಿದ್ದಾರೆ. ಇಂಥ ಆಂತರಿಕ ಅವ್ಯವಹಾರದಿಂದಾಗಿ ರೈತರು ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು.

ರಂಗನಾಥ ನಡುವಿನಮನಿ ಮಾತನಾಡಿ, ಸದ್ಯ ಅಲ್ಪ, ಸ್ವಲ್ಪ ಮಳೆಯಾಗಿರುವುದರಿಂದ ರೈತರಲ್ಲಿ ಆಶಾಭಾವನೆ ಹುಟ್ಟಿದ್ದು, ಏನಾದರೂ ಬಿತ್ತಿ ಬೆಳೆಯಬೇಕೆಂಬ ಹಂಬಲ ಇದ್ದರೂ ಸಹಕಾರಿ ಸಂಘಗಳ ನೌಕರರ ಕಚ್ಚಾಟದಿಂದಾಗಿ ಬಿತ್ತನೆ ಬೀಜ, ಗೊಬ್ಬರ ರೈತರಿಗೆ ತಲುಪದಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಬಿತ್ತನೆಗೆ ಅವಶ್ಯ ಇರುವ ಬೀಜ, ಗೊಬ್ಬರ ಪೂರೈಸಬೇಕು. ಇಲ್ಲವಾದಲ್ಲಿ ಸಹಕಾರಿ ಸಂಘದ ಕಚೇರಿಗೆ ಬೀಗ ಜಡಿದು ನಿರಂತರ ಧರಣಿ ಮಾಡುವುದಾಗಿ ಎಚ್ಚರಿಸಿದರು.

ಭರಮಪ್ಪ ನಾಯ್ಕರ, ಶಿವಪ್ಪ ಅವರಾದಿ, ಶಿವಪುತ್ರಪ್ಪ ತಟ್ಟೆ, ಗುರುಪ್ಪ ಕನಕರಡ್ಡಿ, ಮಾನಪ್ಪ ಕಂಬಾರ, ಆನಂದ ಪತ್ತಾರ, ಬಾಬು ಜೈನರ, ಮಹಾಂತೇಶ ಸಾಲಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ