ಹುಬ್ಬಳ್ಳಿ: ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಗಳನ್ವಯ ತಕ್ಷಣ ಸುರಕ್ಷಾ ಸಾಧನಗಳನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಬುಧವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಗುತ್ತಿಗೆ ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ನೀಡುವಂತೆ ಕಳೆದ 20 ವರ್ಷಗಳಿಂದ ಒತ್ತಾಯಿಸುತ್ತಾ ಬರಲಾಗಿದೆ. ಆದರೆ ಗುತ್ತಿಗೆದಾರರು ಮತ್ತು ಪಾಲಿಕೆ ಆಯುಕ್ತರ ನಿರ್ಲಕ್ಷ್ಯದಿಂದಾಗಿ ಕಾರ್ಮಿಕರಿಗೆ ಸುರಕ್ಷಾ ಸಾಧನಗಳು ಮರಿಚಿಕೆಯಾಗಿವೆ. ಯಾವುದೇ ಸುರಕ್ಷತಾ ಸಲಕರಣಿಗಳು ನೀಡದೇ ಗುತ್ತಿಗೆ ಕಾರ್ಮಿಕರನ್ನು ಜೀತದಾಳುಗಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸಮವಸ್ತ್ರ, ಲೆದರ್ ಹ್ಯಾಂಡ್ಗ್ಲೌಸ್, ಶೂ, ಶುಚಿತ್ವ ಸಾಧನಗಳು, ಮಾಸ್ಕ್, ಫಿನಾಯಿಲ್, ಬ್ಲೀಚಿಂಗ್ ಪೌಡರ್ ಸೇರಿದಂತೆ 23 ವಿವಿಧ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕೆಂಬ ನಿಯಮವಿದೆ. ಈಗಾಗಲೇ ಸುರಕ್ಷತಾ ಸಾಧನೆಗಳು ನೀಡದ ಕಾರಣಕ್ಕೆ ಅನೇಕ ಕಾರ್ಮಿಕರು ಗ್ಯಾಂಗ್ರೀನ್, ಅಸ್ತಮಾ, ಟಿಬಿ, ಕ್ಯಾನ್ಸರ್, ಪಾಶ್ರ್ವವಾಯು, ಹೃದಯಾಘಾತ, ಮಧುಮೇಹ, ಬಿಪಿ ಸೇರಿದಂತೆ ಅನೇಕ ಕಾಯಿಲೆಗೆ ತುತ್ತಾಗಿದ್ದಾರೆ. ಅನೇಕರು ಕಾಯಿಲೆಯಿಂದ ಮೃತಪಟ್ಟ ಉದಾಹರಣೆಗಳಿದ್ದು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಲ್ಲಿಹಾಗೂ ಮೃತನ ಕುಟುಂಬ ಸದಸ್ಯರಿಗೆ ನೌಕರಿ ನೀಡಿಲ್ಲ.
ಅದೇ ರೀತಿ ಜಿಲ್ಲೆಯಲ್ಲಿಕೊರೊನಾ ವೈರಸ್ ಭೀತಿಯೂ ಅಧಿಕವಾಗಿದ್ದು, ಈಗಲಾದರೂ ಪಾಲಿಕೆ ಅಧಿಕಾರಿಗಳು ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕೂಡಲೇ ಕಾರ್ಮಿಕರಿಗೆ ಎಲ್ಲಸೌಲಭ್ಯವನ್ನು ಕಲ್ಪಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕಸ್ತೂರೆವ್ವ ಬೆಳಗುಂದಿ, ದತ್ತಪ್ಪಾ ಆಪುಸಪೇಟ, ಬಸವರಾಜ ದೊಡ್ಡಮನಿ, ಮಂಜುನಾಥ ನಾಗನೂರ, ಆನಂದ ಬಾವೂರ, ಕನಕಪ್ಪ ಕೊಟಬಾಗಿ, ನಾಗಮ್ಮ ಗೊಲ್ಲರ, ಲಕ್ಷ್ಮವ್ವ ಬಿಂದಗಿ, ಯಲ್ಲವ್ವ ನಾರಾಯಣಪುರ, ಶಿವಮ್ಮ ಬೇವಿನಮರದ ಅನೇಕರು ಇದ್ದರು.
ಗುತ್ತಿಗೆ ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ನೀಡುವಂತೆ ಕಳೆದ 20 ವರ್ಷಗಳಿಂದ ಒತ್ತಾಯಿಸುತ್ತಾ ಬರಲಾಗಿದೆ. ಆದರೆ ಗುತ್ತಿಗೆದಾರರು ಮತ್ತು ಪಾಲಿಕೆ ಆಯುಕ್ತರ ನಿರ್ಲಕ್ಷ್ಯದಿಂದಾಗಿ ಕಾರ್ಮಿಕರಿಗೆ ಸುರಕ್ಷಾ ಸಾಧನಗಳು ಮರಿಚಿಕೆಯಾಗಿವೆ. ಯಾವುದೇ ಸುರಕ್ಷತಾ ಸಲಕರಣಿಗಳು ನೀಡದೇ ಗುತ್ತಿಗೆ ಕಾರ್ಮಿಕರನ್ನು ಜೀತದಾಳುಗಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸಮವಸ್ತ್ರ, ಲೆದರ್ ಹ್ಯಾಂಡ್ಗ್ಲೌಸ್, ಶೂ, ಶುಚಿತ್ವ ಸಾಧನಗಳು, ಮಾಸ್ಕ್, ಫಿನಾಯಿಲ್, ಬ್ಲೀಚಿಂಗ್ ಪೌಡರ್ ಸೇರಿದಂತೆ 23 ವಿವಿಧ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕೆಂಬ ನಿಯಮವಿದೆ. ಈಗಾಗಲೇ ಸುರಕ್ಷತಾ ಸಾಧನೆಗಳು ನೀಡದ ಕಾರಣಕ್ಕೆ ಅನೇಕ ಕಾರ್ಮಿಕರು ಗ್ಯಾಂಗ್ರೀನ್, ಅಸ್ತಮಾ, ಟಿಬಿ, ಕ್ಯಾನ್ಸರ್, ಪಾಶ್ರ್ವವಾಯು, ಹೃದಯಾಘಾತ, ಮಧುಮೇಹ, ಬಿಪಿ ಸೇರಿದಂತೆ ಅನೇಕ ಕಾಯಿಲೆಗೆ ತುತ್ತಾಗಿದ್ದಾರೆ. ಅನೇಕರು ಕಾಯಿಲೆಯಿಂದ ಮೃತಪಟ್ಟ ಉದಾಹರಣೆಗಳಿದ್ದು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಲ್ಲಿಹಾಗೂ ಮೃತನ ಕುಟುಂಬ ಸದಸ್ಯರಿಗೆ ನೌಕರಿ ನೀಡಿಲ್ಲ.
ಅದೇ ರೀತಿ ಜಿಲ್ಲೆಯಲ್ಲಿಕೊರೊನಾ ವೈರಸ್ ಭೀತಿಯೂ ಅಧಿಕವಾಗಿದ್ದು, ಈಗಲಾದರೂ ಪಾಲಿಕೆ ಅಧಿಕಾರಿಗಳು ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕೂಡಲೇ ಕಾರ್ಮಿಕರಿಗೆ ಎಲ್ಲಸೌಲಭ್ಯವನ್ನು ಕಲ್ಪಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕಸ್ತೂರೆವ್ವ ಬೆಳಗುಂದಿ, ದತ್ತಪ್ಪಾ ಆಪುಸಪೇಟ, ಬಸವರಾಜ ದೊಡ್ಡಮನಿ, ಮಂಜುನಾಥ ನಾಗನೂರ, ಆನಂದ ಬಾವೂರ, ಕನಕಪ್ಪ ಕೊಟಬಾಗಿ, ನಾಗಮ್ಮ ಗೊಲ್ಲರ, ಲಕ್ಷ್ಮವ್ವ ಬಿಂದಗಿ, ಯಲ್ಲವ್ವ ನಾರಾಯಣಪುರ, ಶಿವಮ್ಮ ಬೇವಿನಮರದ ಅನೇಕರು ಇದ್ದರು.