ಆ್ಯಪ್ನಗರ

ಭೂಮಾಪನ ಇಲಾಖೆ ನೌಕರರ ಪ್ರತಿಭಟನೆ

ಹುಬ್ಬಳ್ಳಿ : ಭೂಮಾಪನ ಇಲಾಖೆಯ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸಂಘವು ನೀಡಿದ ಬೆಂಗಳೂರು ಚಲೋ ಹೋರಾಟ ಬೆಂಬಲಿಸಿ ನಗರದ ನೌಕರರು ಕಪ್ಪು ಬಟ್ಟೆ ಧರಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಆ.31ರ ವರೆಗೆ ಯಾವುದೇ ಕರ್ತವ್ಯಕ್ಕೆ ಹಾಜರಾಗದೆ, ಮುಷ್ಕರ ನಡೆಸಲು ನೌಕರರು ತೀರ್ಮಾನಿಸಿದ್ದಾರೆ.

Vijaya Karnataka 20 Aug 2019, 5:00 am
ಹುಬ್ಬಳ್ಳಿ : ಭೂಮಾಪನ ಇಲಾಖೆಯ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸಂಘವು ನೀಡಿದ ಬೆಂಗಳೂರು ಚಲೋ ಹೋರಾಟ ಬೆಂಬಲಿಸಿ ನಗರದ ನೌಕರರು ಕಪ್ಪು ಬಟ್ಟೆ ಧರಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಆ.31ರ ವರೆಗೆ ಯಾವುದೇ ಕರ್ತವ್ಯಕ್ಕೆ ಹಾಜರಾಗದೆ, ಮುಷ್ಕರ ನಡೆಸಲು ನೌಕರರು ತೀರ್ಮಾನಿಸಿದ್ದಾರೆ.
Vijaya Karnataka Web HBL-1908-2-3-19VIJAY-7


ನೌಕರರ ಬೇಡಿಕೆಗಳು: ಸರಕಾರ ಭೂಮಾಪಕರಿಗೆ ತಿಂಗಳಿಗೆ 30 ಕಡತಗಳ ಗುರಿ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದ್ದು, ಈ ಅವೈಜ್ಞಾನಿಕ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಹಿಂದೆ ಜಾರಿಯಲ್ಲಿದ್ದಂತೆ 23 ಕಡತಗಳ ವಿಲೇವಾರಿಯನ್ನು ಮಾಸಿಕ ಗುರಿಯನ್ನಾಗಿ ನಿಗದಿ ಮಾಡಬೇಕು. ನೌಕರರಿಗೆ ವಿಧಿಸಿರುವ ಶಿಸ್ತುಕ್ರಮ ಹಾಗು ದಂಡನೆಯ ಆದೇಶ ಹಿಂಪಡೆಯಬೇಕು ಎಂದು ನೌಕರರು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ