ಆ್ಯಪ್ನಗರ

ಬೆಣ್ಣೆ ಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ

ಹುಬ್ಬಳ್ಳಿ: ಮಳೆ ಹೆಚ್ಚಾದಾಗೆಲ್ಲಬೆಣ್ಣೆ ಹಳ್ಳಕ್ಕೆ ಪ್ರವಾಹ ಬಂದು ಬೆಳೆ ಹಾನಿ, ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮಹಾನಗರ ಜಿಲ್ಲಾಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರಾದೇವಿ ವಾಲಿ ಒತ್ತಾಯಿಸಿದ್ದಾರೆ.

Vijaya Karnataka 18 Sep 2019, 5:00 am
ಹುಬ್ಬಳ್ಳಿ: ಮಳೆ ಹೆಚ್ಚಾದಾಗೆಲ್ಲಬೆಣ್ಣೆ ಹಳ್ಳಕ್ಕೆ ಪ್ರವಾಹ ಬಂದು ಬೆಳೆ ಹಾನಿ, ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮಹಾನಗರ ಜಿಲ್ಲಾಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರಾದೇವಿ ವಾಲಿ ಒತ್ತಾಯಿಸಿದ್ದಾರೆ.
Vijaya Karnataka Web provide a permanent solution to the bennihalla lake problem
ಬೆಣ್ಣೆ ಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕುಂದಗೋಳ ತಾಲೂಕು ರಾಮನಕೊಪ್ಪ ಗ್ರಾಮದಿಂದ ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಗ್ರಾಮದವರೆಗೆ ಅಂದಾಜು 40 ಕಿ.ಮೀ. ವರೆಗಿನ ನೀರನ್ನು ಶಿರಗುಪ್ಪಿ ಗ್ರಾಮದ ಬಳಿ ಚೆಕ್‌ಡ್ಯಾಂ ನಿರ್ಮಿಸಿ ತಡೆದು ನಿಲ್ಲಿಸಬೇಕಿದೆ. ಇದರಿಂದ ಸುಮಾರು 1 ಸಾವಿರ ಎಕರೆ ಜಮೀನು ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ ಬೆಣ್ಣೆ ಹಳ್ಳದ ಹೂಳು ತೆಗೆಸಿ ಮಲಪ್ರಭಾ ನಾಲಾದಂತೆ ಹಳ್ಳದ ಎರಡು ಬದಿ ಕಲ್ಲಿನಿಂದ ಗೋಡೆ ನಿರ್ಮಿಸಿ ನೀರು ಪೋಲಾಗದಂತೆ ಹಾಗೂ ರೈತರ ಜಮಿನಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ಕುರಿತು ಯೋಜನಾ ವರದಿ ಸಿದ್ಧಪಡಿಸಿ ಶೀಘ್ರವೇ ಸಿಎಂ ಬಳಿ ನಿಯೋಗವೊಂದನ್ನು ಕರೆದುಕೊಂಡು ಹೋಗುವುದಾಗಿ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ