ಆ್ಯಪ್ನಗರ

ಸರಕಾರಿ ವಕೀಲರಿಗೆ ಆರ್ಥಿಕ ನೆರವು ನೀಡಿ

ಧಾರವಾಡ : ಲಾಕ್‌ಡೌನ್‌ನಿಂದ ನ್ಯಾಯಾಲಯಗಳು ಕಲಾಪ ನಿಲ್ಲಿಸಿದ್ದು, ಕೆಲ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಸರಕಾರ ವಕೀಲರಿಗೂ ಆರ್ಥಿಕ ನೆರವು ನೀಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.

Vijaya Karnataka 20 May 2020, 5:00 am
ಧಾರವಾಡ : ಲಾಕ್‌ಡೌನ್‌ನಿಂದ ನ್ಯಾಯಾಲಯಗಳು ಕಲಾಪ ನಿಲ್ಲಿಸಿದ್ದು, ಕೆಲ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಸರಕಾರ ವಕೀಲರಿಗೂ ಆರ್ಥಿಕ ನೆರವು ನೀಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.
Vijaya Karnataka Web provide financial assistance to government attorneys
ಸರಕಾರಿ ವಕೀಲರಿಗೆ ಆರ್ಥಿಕ ನೆರವು ನೀಡಿ


ಕೊರೂನಾದಿಂದಾಗಿ ತುರ್ತು ವಿಚಾರಣೆಗಳನ್ನು ಹೊರತುಪಡಿಸಿ, ಮಾರ್ಚ್ 2ನೇ ವಾರದಿಂದ ನ್ಯಾಯಾಲಯದ ಕಾರ್ಯಕಲಾಪಗಳು ಸ್ಥಗಿತಗೊಂಡಿವೆ. ಈಗಾಗಲೇ ಮೂರು ಬಾರಿಯ ಲಾಕ್‌ಡೌನ್‌ದಿಂದ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಕಾಲ ಕಾಲಕ್ಕೆ ಆದೇಶ ಹೊರಡಿಸಿ ಕೋರ್ಟ್‌ ಕಲಾಪಗಳನ್ನು ಬಂದ್‌ ಮಾಡಿ ಆದೇಶ ಹೊರಡಿಸಿವೆ. ಇದರಿಂದ ದಿನದ ದುಡಿಮೆಯನ್ನು ಅವಲಂಬಿಸಿದ್ದ ಕೆಲ ವಕೀಲರ ಹಾಗೂ ಯುವ ವಕೀಲರ ಆದಾಯ ನಿಂತು ಹೋಗಿ, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕೆಲವರು ವೃತ್ತಿಯನ್ನೇ ನಂಬಿಕೊಂಡು ಬಾಡಿಗೆ ಮನೆ ಮಾಡಿಕೊಂಡು ಕುಟುಂಬ ಸಮೇತ ನಗರದ ಪ್ರದೇಶಗಳಲ್ಲಿವಾಸವಾಗಿದ್ದಾರೆ. ಇವರೆಲ್ಲಬಾಡಿಗೆ ಹಾಗೂ ಇತರೆ ಖರ್ಚಿಗಾಗಿ ಪರದಾಡುವಂತಾಗಿದೆ.

ರಾಜಕಾರಣಿಗಳು ಚುನಾವಣೆ ಸಮಯದಲ್ಲಿವಕೀಲರ ಸಂಘಕ್ಕೆ ಬಂದು ಮತ ಕೇಳುತ್ತಾರೆ. ಈಗ ವಕೀಲರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೂ ಅವರ ನೆರವಿಗೆ ಬರುತ್ತಿಲ್ಲ. ಅಲ್ಲದೇ ವಕೀಲರ ಹಿತಾಸಕ್ತಿ ಕಾಪಾಡಲು ಇರುವ ಭಾರತ ವಕೀಲರ ಪರಿಷತ್‌ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗಳು ಕೂಡಾ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹಾಕಿ ಹಣಕಾಸಿನ ನೆರವು ಪಡೆಯುವಲ್ಲಿವಿಳಂಬ ಧೋರಣೆ ಅನುಸರಿಸುತ್ತಿರುವುದು ವಿಷಾದನೀಯ.

ಆದ್ದರಿಂದ ಸರಕಾರ ಸಂಕಷ್ಟ ಎದುರಿಸುತ್ತಿರುವ ವಕೀಲರಿಗೆ ಸರಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಚ್‌. ಪಾಟೀಲ, ರಾಜ್ಯ ಸಮಿತಿ ಸದಸ್ಯ ಬಸವರಾಜ ಕೋರಿಮಠ ಪ್ರಕಟಣೆಯಲ್ಲಿಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ