ಆ್ಯಪ್ನಗರ

ಅಪ್ಪಟ ಕನ್ನಡ ಪ್ರೇಮಿ ಶೀಲವಂತರ

ಅಳ್ನಾವರ : ನೂತನ ಅಳ್ನಾವರ ತಾಲೂಕಿನ ಸಾಹಿತ್ಯ ಸಮ್ಮೇಳನ ಫೆ.6ರಂದು ನಡೆಯಲಿದ್ದು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಸರ್ವೋದಯ ಶಿಕ್ಷ ಣ ಸಂಸ್ಥೆಯ ನಿವೃತ್ತ ಕನ್ನಡ ಶಿಕ್ಷ ಕ ಈರಯ್ಯ, ಬಸಯ್ಯ ಶೀಲವಂತರ ಸೇವೆ ಅವಿಸ್ಮರಣೀಯ. ಕನ್ನಡ ಅಕ್ಷ ರಮಾಲೆಯನ್ನು ಸಾಹಿತ್ಯ ಮಾಲೆಯಲ್ಲಿ ಪೋಣಿಸಿ ಮಕ್ಕಳಿಗೆ ಉಣ ಬಿಡಿಸಿದ ಇಲ್ಲಿನ ಇವರ ಮೇರು ವ್ಯಕ್ತಿತ್ವ ಗುರುತಿಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಮಾಡಿದ ಅವರ ಶಿಷ್ಯ ಬಳಗದ ಖುಷಿ ಇಮ್ಮಡಿಯಾಗಿದೆ.

Vijaya Karnataka 6 Feb 2019, 5:00 am
ಅಳ್ನಾವರ : ನೂತನ ಅಳ್ನಾವರ ತಾಲೂಕಿನ ಸಾಹಿತ್ಯ ಸಮ್ಮೇಳನ ಫೆ.6ರಂದು ನಡೆಯಲಿದ್ದು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಸರ್ವೋದಯ ಶಿಕ್ಷ ಣ ಸಂಸ್ಥೆಯ ನಿವೃತ್ತ ಕನ್ನಡ ಶಿಕ್ಷ ಕ ಈರಯ್ಯ, ಬಸಯ್ಯ ಶೀಲವಂತರ ಸೇವೆ ಅವಿಸ್ಮರಣೀಯ. ಕನ್ನಡ ಅಕ್ಷ ರಮಾಲೆಯನ್ನು ಸಾಹಿತ್ಯ ಮಾಲೆಯಲ್ಲಿ ಪೋಣಿಸಿ ಮಕ್ಕಳಿಗೆ ಉಣ ಬಿಡಿಸಿದ ಇಲ್ಲಿನ ಇವರ ಮೇರು ವ್ಯಕ್ತಿತ್ವ ಗುರುತಿಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಮಾಡಿದ ಅವರ ಶಿಷ್ಯ ಬಳಗದ ಖುಷಿ ಇಮ್ಮಡಿಯಾಗಿದೆ.
Vijaya Karnataka Web pure kannada lover
ಅಪ್ಪಟ ಕನ್ನಡ ಪ್ರೇಮಿ ಶೀಲವಂತರ


ಹಳೆ ಗನ್ನಡ, ವ್ಯಾಕರಣ ಸೇರಿದಂತೆ ಕನ್ನಡ ಭಾಷೆಯನ್ನು ಸುಲಭವಾಗಿ ಮಕ್ಕಳಿಗೆ ಅಥೈರ್‍ಸಲು ಇವರ ಬಳಸುವ ಕಲೆ ಇತರರಿಗೆ ಮಾದರಿಯಾಗಿತ್ತು. ಕನ್ನಡದ ಶಬ್ದ ಕೋಶ ಸವಿಯ ಭಂಡಾರವನ್ನು ಮಕ್ಕಳಿಗೆ ಸುಮಾರು 34 ವರ್ಷ ಧಾರೆ ಎರೆದು ಸದ್ಯ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಕನ್ನಡದ ಪ್ರೇಮ ತೋರಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಸಧ್ಯ ಸಮ್ಮೇಳನದ ಮೂಲಕ ಕನ್ನಡ ಸವಿ ಉಣಬಿಡಿಸಿ ವನ ಸಿರಿಯ ಸೊಬಗನ್ನು ಹೆಚ್ಚಿಸುವ ತವಕದಲ್ಲಿದ್ದಾರೆ.

ಕನ್ನಡ ಭಾಷೆಯನ್ನು ಹೇಳಿ ಕೊಡುವ ಇವರ ದಾಟಿ ಮಕ್ಕಳಿಗೆ ತುಂಭಾ ಪ್ರೀತಿ, ಶಾಂತ ಸ್ವಭಾವದದ ಗುರುಗಳು ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಕೊಣ್ಣೂರಿನ ಕೆ.ಇ.ಎಸ್‌. ಹೈಸ್ಕೂಲಿನಲ್ಲಿ ಸನ್‌ 1971-72 ರಂದು ಒಂದು ವರ್ಷ ಕನ್ನಡ ಶಿಕ್ಷ ಕರಾಗಿ ತಮ್ಮ ಬದುಕು ಆರಂಭಿಸಿದ ಇವರು ನಿರಂತರವಾಗಿ ಕನ್ನಡವನ್ನು ಶ್ರೀಮಂತಗೊಳಿಸಲು ಪ್ರಯತ್ನ ಪಟ್ಟರು.

ಸನ್‌ 1972 ರಿಂದ ಸರ್ವೋದಯ ಶಿಕ್ಷ ಣ ಸಂಸ್ಥೆಯ ಬಾಲಿಕಾ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷ ಕರಾಗಿ ಕಾರ್ಯಾರಂಭ ಮಾಡಿದ ಇವರ ಜೀವನ ಹೊಸ ತಿರವು ಪಡೆದು ಅಳ್ನಾಔರವನ್ನೆ ಕರ್ಮಭೂಮಿಯಾಗಿಸಿಕೊಂಡರು. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷ ಕರಾದ ಇವರು ಸರಳ ಜೀವಿಗಳಾಗಿ ಬದುಕು ಕಟ್ಟಿಕೊಂಡರು. ಹಣೆಗೆ ವಿಭೂತಿ ದರಿಸಿ ಇವರು ಬಂಧರೆ ಎಲ್ಲ ಕೈಗಳು ನಮಿಸುವ ಭಾವನೆ ಹೊಂದುತ್ತವೆ .

ಅವರ ಸಾಧನೆಗೆ ತಾಯಿ ಕಲ್ಲಮ್ಮ ಹಾಗೂ ಧರ್ಮಪತ್ನಿ ಮಾಲಾ ಸಾಥ ನೀಡಿದರು. ತಾಯಿಯ ಮಮಕಾರದಲ್ಲಿ ಬೆಳೆದ ಇವರು ತಮ್ಮ ಕನ್ನಡ ತಾಯಿಯ ಮಮತೆಯನ್ನು ಮಕ್ಕಳ ಹೃದಯದಲ್ಲಿ ಬಿತ್ತುತ್ತಾ ಸಾಗಿದರು. ಇವರ ಸೇವೆಯನ್ನು ಗುರುತಿಸಿ ಸನ್‌ 1999 ರಲ್ಲಿ ಧಾರವಾಡ ತಾಲ್ಲೂಕ ಆದರ್ಶ ಶಿಕ್ಷ ಕ ಪ್ರಶಸ್ತಿ ಒಲಿದು ಬಂತು .

ಸನ್‌ 2005 ರಿಂದ 2007 ರ ವೆರೆಗೆ ಮುಗದ ಗ್ರಾಮದ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷ ಕರಾಗಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಸನ್‌ 2007 ಮೇ ರಂದು ಸೇವಾ ನಿವೃತ್ತಿ ಹೊಂದಿದರು. ಇವರ ಕನ್ನಡ ಪ್ರಭುತ್ವ ಗುರುತಿಸಿ ಅಳ್ನಾವರ ಹೊಸ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಮಾಡಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ