ಕ್ಷುಲ್ಲಕ ಕಾರಣಕ್ಕೆ ಜಗಳ: ಗಾಯಗೊಂಡ ಸಂಬಂಧಿಗಳು
ಧಾರವಾಡ : ಮನೆ ಹಿತ್ತಲಲ್ಲಿ ನಿಂತ ನೀರು ತೆರುವುಗೊಳಿಸುವ ವಿಷಯವಾಗಿ ನಡೆದ ವಾಗ್ವಾದ ಜಗಳಕ್ಕೆ ಕಾರಣವಾಗಿ ಸಂಬಂಧಿಗಳೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
Vijaya Karnataka 12 Jul 2019, 5:00 am
ಧಾರವಾಡ : ಮನೆ ಹಿತ್ತಲಲ್ಲಿ ನಿಂತ ನೀರು ತೆರುವುಗೊಳಿಸುವ ವಿಷಯವಾಗಿ ನಡೆದ ವಾಗ್ವಾದ ಜಗಳಕ್ಕೆ ಕಾರಣವಾಗಿ ಸಂಬಂಧಿಗಳೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಶಿಂಗನಹಳ್ಳಿಯ ಮೌಲಾಸಾಬ್ ಗಡಾದ ಹಾಗೂ ಹಸನಸಾಬ್ ಗಡಾದ ಕುಟುಂಬದವರೇ ಹೊಡೆದಾಡಿಕೊಂಡವರು. ಮೌಲಾಸಾಬ್ ಎಂಬುವರ ಸಂಬಂಧಿಗಳಾದ ಆಶೀಪ್ ಹಾಗೂ ಹುಸೇನ್ ಎಂಬುವರ ಮನೆ ಹಿತ್ತಲಿನ ನೀರು ಪಕ್ಕದ ಮನೆಯವರ ಹಿತ್ತಲಿಗೆ ಹರಿದು ಹೋಗುತ್ತಿತ್ತು. ಈ ವಿಚಾರವಾಗಿ ಗುರುವಾರ ಬೆಳಗ್ಗೆ ಜಗಳ ನಡೆದಿತ್ತು. ಇಲ್ಲಿ ಹಸನಸಾಬ್ ಗಡಾದ ಹೆಸರು ಉಲ್ಲೇಖ ಆಗುತ್ತಿದ್ದಂತೆಯೇ ಹಳೇದ್ವೇಷದ ಹಿನ್ನೆಲೆಯಲ್ಲಿ ಹಸನಸಾಬ್ ಹಾಗೂ ಮೌಲಾಸಾಬ್ ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಹಸನಸಾಬ್, ಯಾಕೂಬ್, ಅಲ್ಲಾಭಕ್ಷ, ಸದ್ದಾಂಹುಸೇನ್, ಮೌಲಾಸಾಬ್ ಗಡಾದ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್, ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಂಗನಹಳ್ಳಿಯ ಮೌಲಾಸಾಬ್ ಗಡಾದ ಹಾಗೂ ಹಸನಸಾಬ್ ಗಡಾದ ಕುಟುಂಬದವರೇ ಹೊಡೆದಾಡಿಕೊಂಡವರು. ಮೌಲಾಸಾಬ್ ಎಂಬುವರ ಸಂಬಂಧಿಗಳಾದ ಆಶೀಪ್ ಹಾಗೂ ಹುಸೇನ್ ಎಂಬುವರ ಮನೆ ಹಿತ್ತಲಿನ ನೀರು ಪಕ್ಕದ ಮನೆಯವರ ಹಿತ್ತಲಿಗೆ ಹರಿದು ಹೋಗುತ್ತಿತ್ತು. ಈ ವಿಚಾರವಾಗಿ ಗುರುವಾರ ಬೆಳಗ್ಗೆ ಜಗಳ ನಡೆದಿತ್ತು. ಇಲ್ಲಿ ಹಸನಸಾಬ್ ಗಡಾದ ಹೆಸರು ಉಲ್ಲೇಖ ಆಗುತ್ತಿದ್ದಂತೆಯೇ ಹಳೇದ್ವೇಷದ ಹಿನ್ನೆಲೆಯಲ್ಲಿ ಹಸನಸಾಬ್ ಹಾಗೂ ಮೌಲಾಸಾಬ್ ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಹಸನಸಾಬ್, ಯಾಕೂಬ್, ಅಲ್ಲಾಭಕ್ಷ, ಸದ್ದಾಂಹುಸೇನ್, ಮೌಲಾಸಾಬ್ ಗಡಾದ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್, ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.