ಆ್ಯಪ್ನಗರ

ಹಿಂದೂ ಪರಂಪರೆ ಜಾಗೃತಿ ಮೂಡಿಸಿ

ಧಾರವಾಡ: ಹಿಂದೂ ವಿಚಾರಗಳ ಮೇಲೆ ಅಧಿಕವಾದ ಶೋಷಣೆಯನ್ನು ಮಾಡುತ್ತಿರುವವರಿಗೆ ಪರಮಾತ್ಮನ ಸನ್ನಿಧಿಯಲ್ಲಿಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ವಿದುಳಾ ಹಳದಿಪುರ ಹೇಳಿದರು.

Vijaya Karnataka 21 Jan 2020, 5:00 am
ಧಾರವಾಡ: ಹಿಂದೂ ವಿಚಾರಗಳ ಮೇಲೆ ಅಧಿಕವಾದ ಶೋಷಣೆಯನ್ನು ಮಾಡುತ್ತಿರುವವರಿಗೆ ಪರಮಾತ್ಮನ ಸನ್ನಿಧಿಯಲ್ಲಿಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ವಿದುಳಾ ಹಳದಿಪುರ ಹೇಳಿದರು.
Vijaya Karnataka Web raise awareness of hindu heritage
ಹಿಂದೂ ಪರಂಪರೆ ಜಾಗೃತಿ ಮೂಡಿಸಿ


ನಗರದ ದೈವಜ್ಞ ಸಭಾಭವನದಲ್ಲಿಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಭಾನುವಾರ ನಡೆದ ಹಿಂದೂ ರಾಷ್ಟ್ರ ಜಾಗೃತಿಯ ಸಭೆಯಲ್ಲಿಅವರು ಮಾತನಾಡಿದರು.

ಹಿಂದೂ ಧರ್ಮ ಪರಂಪರೆ ಹಾಗೂ ಹಿಂದೂ ಸಂಘಟನೆಗಳ ಅವಶ್ಯಕತೆ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿವಿವಿಧ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದೂ ವಿರೋಧಿಗಳು ಹಿಂದೂ ರಾಷ್ಟ್ರ ವಿರೋಧಿಸುತ್ತಿದ್ದಾರೆ. ಆದರೆ, ಹಿಂದೂ ರಾಷ್ಟ್ರ ನಮ್ಮ ಮುಂದಿನ ಪೀಳಿಗೆಗೆ ಅವಶ್ಯವಾಗಿದೆ. ಪ್ರಸ್ತುತವಾಗಿ ಹಿಂದೂತ್ವದ ವಿಚಾರಗಳಿಗಾಗಿ ಹೋರಾಡಲು ಸಮಿತಿ ಸದಾ ಸಿದ್ಧವಾಗಿದ್ದು, ಭಾರತ ಏಕೆ ಹಿಂದೂ ರಾಷ್ಟ್ರ ಆಗಬಾರದು ಎಂದು ಪ್ರಶ್ನಿಸಿದರು.

ಸತತವಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂಗಳ ಮೇಲೆ ಆಗುವ ಅನ್ಯಾಯ ತಡೆಯಲು ಪ್ರತಿಭಟನೆ ಮಾಡುವ ಮೂಲಕ ವಿರೋಧಿಸಿದೆ. ಸನಾತನ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ, ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಸೌಲಭ್ಯ ಕಲ್ಪಿಸಲು, ಹಿಂದೂ ವಿಚಾರ ವಿರೋಧಿಸುವುವರ ವಿರುದ್ಧ ಹೋರಾಟ ಮಾಡಲಾಗುತ್ತದೆ. ಭಾರತ ಹಿಂದೂ ರಾಷ್ಟ್ರ ಹೀಗಾಗಿ ಸರಕಾರ ಕೂಡ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು ಎಂದರು.

ಕಾರ್ಯಕ್ರಮದಲ್ಲಿಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಮಂಜುನಾಥ ಕನಕಣವಾಡಿ, ರಾಜು ಧರಿಯಣ್ಣವರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ