ಆ್ಯಪ್ನಗರ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಂಜಾಳಗೆ ಸನ್ಮಾನ

ಧಾರವಾಡ: ಶ್ರೀ ಟಿ.ಎಸ್‌.ಪಾಟೀಲ ಫೌಂಡೇಶನ್‌ ಟ್ರಸ್ಟ್‌, ಕಲ್ಯಾಣನಗರ ಶರಣ ಬಳಗ ಹಾಗೂ ಬಸವ ಸಮಿತಿ ವತಿಯಿಂದ ಇತ್ತೀಚೆಗೆ ಅನುಭವ ಮಂಟಪದಲ್ಲಿನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್‌.ಆರ್‌.ಗುಂಜಾಳ ಅವರನ್ನು ಸನ್ಮಾನಿಸಲಾಯಿತು.

Vijaya Karnataka 27 Nov 2019, 5:00 am
ಧಾರವಾಡ: ಶ್ರೀ ಟಿ.ಎಸ್‌.ಪಾಟೀಲ ಫೌಂಡೇಶನ್‌ ಟ್ರಸ್ಟ್‌, ಕಲ್ಯಾಣನಗರ ಶರಣ ಬಳಗ ಹಾಗೂ ಬಸವ ಸಮಿತಿ ವತಿಯಿಂದ ಇತ್ತೀಚೆಗೆ ಅನುಭವ ಮಂಟಪದಲ್ಲಿನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್‌.ಆರ್‌.ಗುಂಜಾಳ ಅವರನ್ನು ಸನ್ಮಾನಿಸಲಾಯಿತು.
Vijaya Karnataka Web rajyotsava award honored gunjala
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಂಜಾಳಗೆ ಸನ್ಮಾನ


ಬಳಿಕ ಸನ್ಮಾನ ಸ್ವೀಕರಿಸಿದ ಡಾ.ಎಸ್‌.ಆರ್‌.ಗುಂಜಾಳ ಮಾತನಾಡಿ, ಕಲ್ಯಾಣ ಕ್ರಾಂತಿಯಲ್ಲಿ ವಚನಗಳ ಸಂರಕ್ಷಣೆ ಹಾಗೂ 12ನೇ ಶತಮಾನದಿಂದ ವಚನಗಳು ಗ್ರಾಂಥಿಕವಾಗಿ ಉಳಿದ ಬಂದ ಪರಿಯನ್ನು ತಿಳಿಸಿದರು.

ನಂತರ ಡಾ.ಎಸ್‌.ವಿ. ಅಯ್ಯನಗೌಡರ ಶರಣ ಅರಿವಿನ ಮಾರಿತಂದೆಯ ಬಗ್ಗೆ ಉಪನ್ಯಾಸ ನೀಡಿದರು. ಡಾ.ಸುರೇಶ ಹಿರೇಗೌಡರ, ವಕೀಲ ಪ್ರಭು ಗರಗದ, ಡಾ.ಬಿ.ಸಿ.ಜವಳಿ, ಡಾ.ಗುಂಜೆಟ್ಟಿ, ಡಾ.ಕುಂದಗೋಳ, ಡಾ.ರಾಜಶೇಖರ ಬಶೆಟ್ಟಿ, ಎಂ.ಪಿ.ಹಳ್ಳಿಕೇರಿ ಇದ್ದರು. ವಿಮಲಾ ಜವಳಿ, ಚಿನ್ಮಯಿ ಪ್ರಾರ್ಥಿಸಿದರು. ಎಂ.ಜಿ.ಮುಳಕೂರ ಪರಿಚಯಿಸಿದರು. ಚಿನ್ಮಯಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ