ಆ್ಯಪ್ನಗರ

ಓದುವ ಹವ್ಯಾಸ ಕ್ಷೀಣಿಸದಿರಲಿ

ಹುಬ್ಬಳ್ಳಿ : ಸ್ಪರ್ಧಾತ್ಮಕ ಯುಗದಲ್ಲಿ ಜನರಲ್ಲಿ ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ. ದಿನದ ಅಲ್ಪಕಾಲವನ್ನು ಓದುವ ಹವ್ಯಾಸಕ್ಕೆ ಮೀಸಲಿಡಬೇಕು ಎಂದು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಜಿ ಹೇಳಿದರು. ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಶೀಲವಂತರ ಓಣಿಯಲ್ಲಿ ನಡೆದ ಸಮಾರಂಭದಲ್ಲಿ ವಿ-ವೃಕ್ಷ ಎಂಬ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Vijaya Karnataka 10 Sep 2018, 5:00 am
ಹುಬ್ಬಳ್ಳಿ : ಸ್ಪರ್ಧಾತ್ಮಕ ಯುಗದಲ್ಲಿ ಜನರಲ್ಲಿ ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ. ದಿನದ ಅಲ್ಪಕಾಲವನ್ನು ಓದುವ ಹವ್ಯಾಸಕ್ಕೆ ಮೀಸಲಿಡಬೇಕು ಎಂದು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಜಿ ಹೇಳಿದರು. ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಶೀಲವಂತರ ಓಣಿಯಲ್ಲಿ ನಡೆದ ಸಮಾರಂಭದಲ್ಲಿ ವಿ-ವೃಕ್ಷ ಎಂಬ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
Vijaya Karnataka Web reading habits do not slow down
ಓದುವ ಹವ್ಯಾಸ ಕ್ಷೀಣಿಸದಿರಲಿ


ನಾಡಿನ ಸಂಸ್ಕೃತಿ, ಧಾರ್ಮಿಕ, ಜಾನಪದ, ಸಾಹಿತ್ಯದತ್ತ ಒಲವು ತೋರಿಸುವುದರಿಂದ ಮಾನವನ ಒತ್ತಡಗಳನ್ನು ನಿಯಂತ್ರಿಸಲು ಸಾಧ್ಯ. ಪಾಶ್ಚ್ಯಾತ ಸಂಸ್ಕೃತಿಗೆ ಮಾರು ಹೋಗದೇ ದೇಶಿ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌.ಸಿ. ಬೇವೂರು ಮಾತನಾಡಿ, ಹುಬ್ಬಳ್ಳಿಯ ಶ್ರೀ ಗಣೇಶೋತ್ಸವ ಆಚರಣೆಯೂ ನಾಡಿಗೆ ಮಾದರಿ ಯಾಗುವಂತೆ ಎಲ್ಲರೂ ಶ್ರಮಿಸಬೇಕು. ಮಣ್ಣಿನ ಗಣೇಶ ವಿಗ್ರಹ ಸ್ಥಾಪನೆ ಮಾಡುವುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ನಗರದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತಾರಾದೇವಿ ವಾಲಿ, ಸಾಯಿನಾಥ ಹಿತ್ತಾಳಿ, ರಾಜು ಕೆಂಚನಗೌಡ್ರು, ರೂಪಾ ಅಂಗಡಿ, ತಾರಾಮತಿ ಪೋಳ, ಸರಸ್ವತಿ ಮೆಹರವಾಡೆ, ನಿರ್ಮಲಾ ಹಿರೇಮಠ, ವಡ್ಡಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿ-ವೃಕ್ಷ ಪುಸ್ತಕದ ಸಂಪಾದಕಿ ಆಶಾ ಪತ್ತಾರ ಮಾತನಾಡಿ, ವಿ-ವೃಕ್ಷ ಪುಸ್ತಕವು ಯುವ ಜನಾಂಗಕ್ಕೆ ಮಾರ್ಗದರ್ಶನವಾಗಿದೆ. ಜನರಿಗೆ ಅವಶ್ಯವಿರುವ ಮಾಹಿತಿಯ ಜತೆಗೆ ಸಾಹಿತಿಗಳು ಬರೆದ ಲೇಖನಗಳು ಪ್ರಮುಖವಾಗಿವೆ ಎಂದರು.

ಮಹಾ ಮಂಡಳದ ಕಾರ‍್ಯದರ್ಶಿ ಅಮರೇಶ ಹಿಪ್ಪರಗಿ, ಹೊಸೂರಿನಲ್ಲಿರುವ ಗಣೇಶ ವಿಸರ್ಜನೆ ಬಾವಿಯನ್ನು ನಾಡಿನಲ್ಲಿ ಮಾದರಿ ಬಾವಿಯನ್ನಾಗಿಸುವ ಜತೆಗೆ ಪ್ರೇಕ್ಷ ಣೆಯ ಸ್ಥಳವನ್ನಾಗಿಸಬೇಕು ಎಂದು ಮನವಿ ಮಾಡಿಕೊಂಡರು.

ಅಲ್ತಾಫ ಕಿತ್ತೂರ,ಎಸ್‌.ಎಸ್‌. ಕಮಡೊಳ್ಳಿಶೆಟ್ರು, ಚನ್ನಬಸಪ್ಪ ಧಾರವಾಡಶೆಟ್ರು, ವೀರಣ್ಣ ಪಾಳೇದ, ಡಾ. ಚಿದಾನಂದ ತೆಗ್ಗಿಹಳ್ಳಿ, ಕೆ.ಜಿ. ಪೂಜಾರ, ಮಾಲತೇಶ ಬಿ.ಎಂ. ಮಾತನಾಡಿದರು. ಮಹಾಮಂಡಳದ ಗೌರವ ಅಧ್ಯಕ್ಷ ಮೊಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಕಲಾವಿದ ಚಂದ್ರಶೇಖರ ಗಾಣಿಗೇರ ಸಂಗೀತ ಕಾರ‍್ಯಕ್ರಮ ನಡೆಸಿಕೊಟ್ಟರು. ಶ್ರೀಶೈಲಪ್ಪ ಶೆಟ್ಟರ ಸ್ವಾಗತಿಸಿದ್ದರು. ಶಾಂತರಾಜ ಪೋಳ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ