ಆ್ಯಪ್ನಗರ

ಮೋಡಬಿತ್ತನೆ ಅಗತ್ಯತೆ ಮರುಪರಿಶೀಲನೆ: ಶೆಟ್ಟರ್‌

ಹುಬ್ಬಳ್ಳಿ: ದೇವರ ಕೃಪೆಯಿಂದಾಗಿ ನಾಡಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಇದರ ಮಧ್ಯೆಯೂ ಕೃತಕ ಮಳೆ ಸುರಿಸುವ ಮೋಡ ಬಿತ್ತನೆ ಅವಶ್ಯವಿದೆಯೇ ಎಂಬುದನ್ನು ರಾಜ್ಯ ಸರಕಾರ ಮರುಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜಗದೀಶ ಶೆಟ್ಟರ್‌ ಹೇಳಿದರು.

Vijaya Karnataka 9 Aug 2019, 5:00 am
ಹುಬ್ಬಳ್ಳಿ: ದೇವರ ಕೃಪೆಯಿಂದಾಗಿ ನಾಡಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಇದರ ಮಧ್ಯೆಯೂ ಕೃತಕ ಮಳೆ ಸುರಿಸುವ ಮೋಡ ಬಿತ್ತನೆ ಅವಶ್ಯವಿದೆಯೇ ಎಂಬುದನ್ನು ರಾಜ್ಯ ಸರಕಾರ ಮರುಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜಗದೀಶ ಶೆಟ್ಟರ್‌ ಹೇಳಿದರು.
Vijaya Karnataka Web reconsidering the need for cloud shetter
ಮೋಡಬಿತ್ತನೆ ಅಗತ್ಯತೆ ಮರುಪರಿಶೀಲನೆ: ಶೆಟ್ಟರ್‌


ನಗರದಲ್ಲಿ ಉಣಕಲ್ಲ ಕೆರೆಯಿಂದ ಉಂಟಾದ ನೆರೆ ಪರಿಸ್ಥಿತಿ ಅವಲೋಕಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮೋಡ ಬಿತ್ತನೆ ಕುರಿತು ಹಿಂದಿನ ಸರಕಾರ ಅವೈಜ್ಞಾನಿಕ ನಿರ್ಧಾರ ತೆಗೆದುಕೊಂಡಿದೆ. ಮಳೆ ಕೊರತೆಯಿಂದ ಬರ ಎದುರಿಸುವ ಸ್ಥಿತಿ ಇದ್ದಾಗ ಮೋಡ ಬಿತ್ತನೆ ಮಾಡಬಹುದಾಗಿದೆ. ಆದರೆ, ವರುಣ ಕರುಣೆ ತೋರಿಸಿದ್ದಾನೆ. ಸಾಕಷ್ಟು ಮಳೆ ಸುರಿದಿದೆ. ಹೀಗಾಗಿ ಮೋಡ ಬಿತ್ತನೆ ಬಗ್ಗೆ ಪರಿಶೀಲಿಸುತ್ತೇವೆ'' ಎಂದು ತಿಳಿಸಿದರು.

''ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಯಾದಗಿರಿ, ರಾಯಚೂರ ಸೇರಿ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ತಲೆದೋರಿದೆ. ಸಿಎಂ ಖುದ್ದಾಗಿ ಮೇಲ್ವಿಚಾರಣೆ ವಹಿಸಿದ್ದು, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಸ್ಥಿತಿಗತಿ ಪರಿಶೀಲಿಸುವಂತೆ ನನಗೆ ಸೂಚಿಸಿದ್ದಾರೆ'' ಎಂದರು.

''ಸಂಜೆ ವೇಳೆ ನವಲಗುಂದ ತಾಲೂಕಿನಲ್ಲಿ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳದ ನೆರೆ ಹಾವಳಿಯನ್ನು ಖುದ್ದಾಗಿ ಅವಲೋಕಿಸಿದ್ದೇನೆ. ಮಳೆ ಸ್ಥಗಿತಗೊಂಡ ಬಳಿಕ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಲಾಗುವುದು. ಸದ್ಯ ಜೀವಹಾನಿ ತಡೆಗಟ್ಟುವತ್ತ ಗಮನ ಹರಿಸಲಾಗಿದೆ'' ಎಂದರು.

''ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು. ನೆರೆ ಪರಿಹಾರ ಹಾಗೂ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರದ ಬಗ್ಗೆ ಚರ್ಚಿಸಲಾಗುವುದು'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ