ಆ್ಯಪ್ನಗರ

ದಾಖಲಾತಿ ನಿರ್ವಹಣೆ ಕಾರ್ಯಾಗಾರ ಉದ್ಘಾಟನೆ

ಕಲಘಟಗಿ:ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘ ತಾಲೂಕು ಘಟಕಗಳ ಸಹಯೋಗದಲ್ಲಿ ಒಂದು ದಿನದ ಶೈಕ್ಷ ಣಿಕ ಕಾರ್ಯಾಗಾರ,2018-19 ನೇ ಸಾಲಿನ ಫೆ 13 ರಿಂದ 16ರವರೆಗೆ ಜರಗುವ ಗುರುಸ್ಪಂದನಾ ಉದ್ಘಾಟನೆ ಹಾಗೂ ಗಣಕಯಂತ್ರದಲ್ಲಿ ಶಾಲಾ

Vijaya Karnataka 11 Feb 2019, 5:00 am
ಕಲಘಟಗಿ:ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘ ತಾಲೂಕು ಘಟಕಗಳ ಸಹಯೋಗದಲ್ಲಿ ಒಂದು ದಿನದ ಶೈಕ್ಷ ಣಿಕ ಕಾರ್ಯಾಗಾರ,2018-19 ನೇ ಸಾಲಿನ ಫೆ 13 ರಿಂದ 16ರವರೆಗೆ ಜರಗುವ ಗುರುಸ್ಪಂದನಾ ಉದ್ಘಾಟನೆ ಹಾಗೂ ಗಣಕಯಂತ್ರದಲ್ಲಿ ಶಾಲಾ ದಾಖಲಾತಿ ನಿರ್ವಹಣೆ ಕುರಿತು ಕಾರ್ಯಾಗಾರದ ಉದ್ಘಾಟನೆ ಫೆ.12 ರಂದು ಪಟ್ಟಣದ ಬಾಲಕಿಯ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 10 ಕ್ಕೆ ಜರುಗಲಿದೆ.
Vijaya Karnataka Web registration management workshop inauguration
ದಾಖಲಾತಿ ನಿರ್ವಹಣೆ ಕಾರ್ಯಾಗಾರ ಉದ್ಘಾಟನೆ


ಅಪರ ಆಯುಕ್ತ ಮೇಜರ ಸಿದ್ದಲಿಂಗಯ್ಯ ಹಿರೇಮಠ ಕಾರ್ಯಗಾರ ಉದ್ಘಾಟಿಸುವರು.ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷ ಕರ ಫಡರೇಶನ್‌ ಉಪಾಧ್ಯಕ್ಷ ಬಸವರಾಜ ಗುರಿಕಾರ ,ಜಿಲ್ಲಾಧ್ಯಕ್ಷ ವೈ.ಎಚ್‌. ಬಣವಿ ,ರಾಜಶೇಖರ ಹೊನ್ನಪ್ಪನವರ ಭಾಗವಹಿಸಲಿದ್ದಾರೆ. ತಾಲೂಕಿನ ಎಲ್ಲ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಒಬ್ಬ ಶಿಕ್ಷ ಕರು ಕಾರ್ಯಗಾರಕ್ಕೆ ಹಾಜರಿರುವಂತೆ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಲ್‌.ಸಿ. ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಕಲಘಟಗಿ: ಕರ್ನಾಟಕ ರಾಜ್ಯದ ಕೇಂದ್ರೀಯ ವಿದ್ಯಾಲಯ ಮಾದರಿಯ 74 ಆದರ್ಶ ವಿದ್ಯಾಲಗಳಲ್ಲಿ ಒಂದಾದ ಆದರ್ಶ ವಿದ್ಯಾಲ ದಾಸ್ತಿಕೊಪ್ಪ ಶಾಲೆಯ 2019-20 ನೇ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ ಪ್ರಸ್ತುತ 5ನೇತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ .ಪಾಲಕರು,ವಿದ್ಯಾರ್ಥಿ ಗಳು, ಶಿಕ್ಷ ಕರು ಆನ್‌ ಲೈನ್‌ ಅರ್ಜಿಗಳನ್ನು ಫೆ.15ರೊಳಗೆ ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಇದರ ಸದುಪಯೋಗಪಡಿಸಿಕೊಳ್ಳವಂತೆ ಕ್ಷೇತ್ರ ಶಿಕ್ಷ ಣಾಧಿಕಾರಿ ಮಹಾವೀರ ಹಂಚಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ