ಆ್ಯಪ್ನಗರ

‘ಉದ್ಯೋಗವಿಲ್ಲದ ಬಡಿಗ’ ಶಬ್ದ ಬಳಕೆಗೆ ಹೊರಟ್ಟಿ ವಿಷಾದ

ಹುಬ್ಬಳ್ಳಿ : ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ ಅವರ ಬಗ್ಗೆ ಮಾತನಾಡುವ ಭರದಲ್ಲಿ ಲೋಕಾರೂಢಿಯಾಗಿ 'ಉದ್ಯೋಗವಿಲ್ಲದ ಬಡಿಗ' ಎಂಬ ಶಬ್ದ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದಿದ್ದಾರೆ.

Vijaya Karnataka 15 May 2019, 5:00 am
ಹುಬ್ಬಳ್ಳಿ : ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ ಅವರ ಬಗ್ಗೆ ಮಾತನಾಡುವ ಭರದಲ್ಲಿ ಲೋಕಾರೂಢಿಯಾಗಿ 'ಉದ್ಯೋಗವಿಲ್ಲದ ಬಡಿಗ' ಎಂಬ ಶಬ್ದ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದಿದ್ದಾರೆ.
Vijaya Karnataka Web regret that the word jobless job goes out of use
‘ಉದ್ಯೋಗವಿಲ್ಲದ ಬಡಿಗ’ ಶಬ್ದ ಬಳಕೆಗೆ ಹೊರಟ್ಟಿ ವಿಷಾದ


ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ''ಯಾವುದೇ ಸಮಾಜದ ಹಾಗೂ ವೃತ್ತಿಗೆ ನೋವಾಗುವಂತೆ ಹೇಳಿಕೆ ನೀಡುವ ಉದ್ದೇಶ ನನ್ನದಾಗಿರಲಿಲ್ಲ. ಲೋಕಾರೂಢಿಯಂತೆ ಆ ಶಬ್ದವನ್ನು ಬಳಕೆ ಮಾಡಿದ್ದೇನೆ. ಅದರಿಂದ ಕೆಲ ಬಡಿಗೇರ ಸಮಾಜದ ಮಿತ್ರರು ಹಾಗೂ ಮುಖಂಡರು ತಮಗೆ ನೋವಾಗಿದೆ ಎಂದು ತಿಳಿಸಿದ್ದಾರೆ'' ಎಂದರು.

''ರಾಜ್ಯದ ಎಲ್ಲ ಧರ್ಮ, ಜಾತಿ ಹಾಗೂ ಜನಾಂಗಗಳ ಬಗ್ಗೆ ನಾನು ಸಮಾನ ಗೌರವ ಹೊಂದಿದ್ದೇನೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ನಮ್ಮ ದೇಶ ಹಾಗೂ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಲಿ ಎಂಬ ಭಾವನೆಯೊಂದಿಗೆ 40 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನನ್ನ ಹೇಳಿಕೆ ಯಾವುದೇ ವ್ಯಕ್ತಿ ಹಾಗೂ ಜನಾಂಗ ಗುರಿಯಾಗಿಸಿಕೊಂಡಿಲ್ಲ. ನನ್ನ ಹೇಳಿಕೆಯಿಂದ ಸಮಾಜಕ್ಕೆ ಅಥವಾ ಯಾರಿಗಾರದರೂ ವೈಯಕ್ತಿಕವಾಗಿ ನೋವಾಗಿದ್ದರೆ ಸಾರ್ವಜನಿಕವಾಗಿ ನನ್ನ ಹೇಳಿಕೆ ಹಿಂಪಡೆಯುತ್ತೇನೆ'' ಎಂದು ಹೊರಟ್ಟಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ