ಆ್ಯಪ್ನಗರ

ಅನುದಾನ ಬಿಡುಗಡೆ

ಧಾರವಾಡ: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಿನ್ಸಿಪಾಲರ ಹಾಗೂ ಉಪನ್ಯಾಸಕರುಗಳ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳ ವೇತನವು ಬಿಡುಗಡೆಯಾಗದೇ ತೊಂದರೆಯಾಗಿರುವದನ್ನು ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರ ಗಮನಕ್ಕೆ ತಂದ ಹಿನ್ನೆಲೆ 156

Vijaya Karnataka 9 Dec 2019, 5:00 am
ಧಾರವಾಡ: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಿನ್ಸಿಪಾಲರ ಹಾಗೂ ಉಪನ್ಯಾಸಕರುಗಳ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳ ವೇತನವು ಬಿಡುಗಡೆಯಾಗದೇ ತೊಂದರೆಯಾಗಿರುವದನ್ನು ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರ ಗಮನಕ್ಕೆ ತಂದ ಹಿನ್ನೆಲೆ 156 ಕೋಟಿ 73 ಲಕ್ಷ ರೂ.ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ತಿಳಿಸಿದ್ದಾರೆ.
Vijaya Karnataka Web release of grants
ಅನುದಾನ ಬಿಡುಗಡೆ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರ ವೇತನವನ್ನು ಪಡೆಯದೇ ಸಿಬ್ಬಂದಿಯ ವೇತನ ಶೀರ್ಷಿಕೆಯಲ್ಲಿಪಡೆದುಕೊಂಡಿದ್ದರಿಂದ ವೇತನ ವಿಳಂಬವಾಗಲು ಕಾರಣವಾಗಿದ್ದನ್ನು ಆರ್ಥಿಕ ಇಲಾಖೆ ಗಮನಿಸಿ ಅದನ್ನು ಸರಿಪಡಿಸಿ 156 ಕೋಟಿ 73 ಲಕ್ಷ ರೂ.ಹಣವನ್ನು ಸಂಬಂಧಪಟ್ಟ ವೇತನ ಕೋಡ್‌ ಗೆ ವರ್ಗಾವಣೆ ಮಾಡಲು ಆದೇಶ ಮಾಡಿ ಟಿ.ಎನ್‌.ಎಂ.ಸಿ ಸಂಸ್ಥೆಗೆ ಅಪಲೋಡ್‌ ಮಾಡಲು ನಿರ್ದೇಶನ ನೀಡಿರುವರು. ರಾಜ್ಯದ ಎಲ್ಲಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರಿಗೆ ಬರಬೇಕಾದ 2 ತಿಂಗಳ ಬಾಕಿ ವೇತನ ಇನ್ನೆರಡು ದಿನಗಳಲ್ಲಿಲಭಿಸಲಿರುವದು ಎಂದು ಸಂಕನೂರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ