ಆ್ಯಪ್ನಗರ

ಸೈನಿಕರ ಪ್ರಾಣಾರ್ಪಣೆ ಸ್ಮರಿಸಿ

ನವಲಗುಂದ : ಕಾರ್ಗಿಲ್‌ ಯುದ್ಧವಾಗಿ 20 ವರ್ಷಗಳು ಗತಿಸಿವೆ. ಕಾರ್ಗಿಲ್‌ನಂತಹ ಯುದ್ಧದಲ್ಲಿ ನಮ್ಮ ದೇಶದ ಸೈನಿಕರು ಪ್ರಾಣವನ್ನೇ ಪಣಕಿಟ್ಟು ಹೋರಾಟ ಮಾಡಿರುವುದನ್ನು ಇಂದು ನೆನಪಿಸಿಕೊಳ್ಳಬೇಕು ಎಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲರಝಾಕ ನದಾಫ ಹೇಳಿದರು.

Vijaya Karnataka 27 Jul 2019, 5:00 am
ನವಲಗುಂದ : ಕಾರ್ಗಿಲ್‌ ಯುದ್ಧವಾಗಿ 20 ವರ್ಷಗಳು ಗತಿಸಿವೆ. ಕಾರ್ಗಿಲ್‌ನಂತಹ ಯುದ್ಧದಲ್ಲಿ ನಮ್ಮ ದೇಶದ ಸೈನಿಕರು ಪ್ರಾಣವನ್ನೇ ಪಣಕಿಟ್ಟು ಹೋರಾಟ ಮಾಡಿರುವುದನ್ನು ಇಂದು ನೆನಪಿಸಿಕೊಳ್ಳಬೇಕು ಎಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲರಝಾಕ ನದಾಫ ಹೇಳಿದರು.
Vijaya Karnataka Web DRW-26-NVL-3
ಕರ್ನಾಟಕ ಪಿಂಜಾರ, ನದಾಫ ಸಂಘಗಳ ಮಹಾಮಂಡಳದಿಂದ ನವಲಗುಂದ ಪಟ್ಟಣದಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ 20ನೇ ಕಾರ್ಗಿಲ್‌ ವಿಜಯೋತ್ಸವವನ್ನು ಯೋಧರನ್ನು ಸನ್ಮಾನಿಸಿ, ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು.


ಅವರು ಶುಕ್ರವಾರ ಕಾರ್ಗಿಲ್‌ ವಿಜಯೋತ್ವದ ದಿನದಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿರುವ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ದೇಶಕ್ಕಾಗಿ ಸೇವೆ ಗೈಯುತ್ತಿರುವ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.

1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಜಯ ತಂದುಕೊಡಲು ಯೋಧರು ಹುತಾತ್ಮರಾಗಿ ನಮ್ಮ ರಕ್ಷ ಣೆ ಮಾಡಿರುವುದನ್ನು ಎಂದಿಗೂ ಮರೆಯುವಂತಿಲ್ಲ. ವೀರ ಯೋಧರ ದಿಟ್ಟತನದ ಹೋರಾಟ ನಮ್ಮಗೆಲ್ಲ ಸ್ಫೂರ್ತಿ ತರುತ್ತದೆ ಎಂದು ಹೇಳಿದರು.

ತಹಸೀಲ್ದಾರ ನವೀನ ಹುಲ್ಲೂರ ಮಾತನಾಡಿ, ಕಾರ್ಗಿಲ್‌ ವಿಜಯೋತ್ಸವವನ್ನು ಪಿಂಜಾರ, ನದಾಫ ಮಹಾಮಂಡಳದವರು ಕಾರ್ಗಿಲ್‌ ವಿಜಯೋತ್ಸವದಂದು ಯೋಧರನ್ನು ಸನ್ಮಾನಿಸಿರುವುದು ವಿಶೇಷವಾಗಿದೆ ಎಂದರು.

ಮಾಜಿ ಸೈನಿಕ ಬಸವರಡ್ಡಿ ಕರಡ್ಡಿ ಮಾತನಾಡಿ, ಯೋಧರ ಗುರಿ ಶತ್ರುಗಳನ್ನು ಸದೆಬಡೆಯುವುದು. ಕಾರ್ಗಿಲ್‌ ಜಯ ಇತಿಹಾಸದಲ್ಲಿ ಅಚ್ಚಲಿಯದೆ ಉಳಿಯುತ್ತದೆ. ಆ ಯುದ್ಧದಲ್ಲಿ ಮಹಾನ್‌ ಯೋಧರ ದಿಟ್ಟ ಹೋರಾಟ ಯಾವತ್ತು ಮರೆಯುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಈಗ ಸದ್ಯ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮಂಜುನಾಥ ಭೋವಿ, ಪುಂಡಲೀಕ ಭೋವಿ, ನಿಂಗನಗೌಡ ಕುರಹಟ್ಟಿ, ಸ್ಥಳೀಯ ನಿವೃತ್ತ ಯೋಧರಾದ ಬಸವರಡ್ಡಿ ಕರಡ್ಡಿ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷ ಕರಾದ ಎಂ.ಜಿ.ನದಾಫ, ಭರತೇಶ ಕುರುಬರ, ಬಸನಗೌಡ ಪಾಟೀಲ ಕಾರ್ಗಿಲ್‌ ವಿಜಯೋತ್ಸದಲ್ಲಿ ನಡೆದ ಘಟನೆಗಳ ಕುರಿತು ಮಾತನಾಡಿದರು.

ಸನ್ಮಾನದ ನಂತರ ಸಿಹಿ ಹಂಚುವುದರ ಮೂಲಕ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು. ಸಿಪಿಐ ರಘುನಾಥ ನೀಲಮ್ಮನವರ, ಪಿಎಸ್‌ಐ ಕವಟಗಿ, ಪುರಸಭೆ ಸದಸ್ಯ ಮಹಾಂತೇಶ ಭೋವಿ, ಕಾಶೀಂಸಾಬ ಅಲ್ಲಿಬಾಯಿ, ಡಾ.ಸುಭಾನಿ ನದಾಫ, ಸಿಕಂದರ ಕಾಲಾರಿ, ಎ.ಎಚ್‌.ನದಾಫ, ಶಿರಾಜ ಶಿರಗುಂಪಿ, ಜಾವೇದ ಗುತ್ತಲ, ಮನು ಬಿಜಾಪೂರ, ನಬಿಸಾಬ ನದಾಫ, ದಾವಲಸಾಬ ನದಾಫ, ಹುಸೇನಸಾಬ ನದಾಫ್‌, ಸಿರಾಜುದ್ದೀನ ದಾರವಾಡ. ಕುಮಾರ ಕಲಾಲ, ಸಿಕಂದರ ಶಿರಗುಪ್ಪಿ, ರಾಮನಗೌಡ ಬೆಳವಟಗಿ, ಸೋಮನಗೌಡ ಹಿರೇಗೌಡರ, ಮಹಮ್ಮದಲಿ ಜಿಗಳೂರ, ರಾಜು ದೋಂಗಡಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ