ಆ್ಯಪ್ನಗರ

ಗಣರಾಜ್ಯೋತ್ಸವ: ಸಾಧಕರಿಗೆ ಸನ್ಮಾನ

ನವಲಗುಂದ: ಕೇಂದ್ರ ಸರಕಾರದ ದಿಟ್ಟ ನಿರ್ಧಾರದಿಂದಾಗಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದೆಲ್ಲಡೆ ಒಂದು ದೇಶ ಒಂದು ಭಾವುಟ ಎಂಬ ಸ್ವಾಭಿಮಾನವನ್ನು ಎತ್ತಿ ಹಿಡಿದಂತಾಗಿದೆ ಎಂದು ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಹೇಳಿದರು.

Vijaya Karnataka 27 Jan 2020, 5:00 am
ನವಲಗುಂದ: ಕೇಂದ್ರ ಸರಕಾರದ ದಿಟ್ಟ ನಿರ್ಧಾರದಿಂದಾಗಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದೆಲ್ಲಡೆ ಒಂದು ದೇಶ ಒಂದು ಭಾವುಟ ಎಂಬ ಸ್ವಾಭಿಮಾನವನ್ನು ಎತ್ತಿ ಹಿಡಿದಂತಾಗಿದೆ ಎಂದು ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಹೇಳಿದರು.
Vijaya Karnataka Web 26-NVL-1_21
ನವಲಗುಂದದಲ್ಲಿನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿವಿವಿಧ ಕ್ಷೇತ್ರಗಳಲ್ಲಿಸಾಧನೆಗೈದ ಸಾಧಕರಿಗೆ ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಸತ್ಕರಿಸಿದರು. ತಹಶೀಲ್ದಾರ ನವೀನ್‌ ಹುಲ್ಲೂರ ಮತ್ತಿತರರಿದ್ದರು.


ತಾಲೂಕಾಡಳಿತದಿಂದ ನವಲಗುಂದ ಮಾಡೆಲ್‌ ಹೈಸ್ಕೂಲ್‌ ಮೈದಾನದಲ್ಲಿಆಯೋಜಿಸಿದ್ದ ಗಣರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶ ಇಂದು ತಂತ್ರಜ್ಞಾನದ ಬಳಸಿಕೊಂಡು ವೇಗವಾಗಿ ಬೆಳೆಯುತ್ತಿದ್ದು, ರೈತರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ದೊರೆತಿದ್ದು, ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುವುದಾಗಿ ಹೇಳಿದರು.

ತಹಸೀಲ್ದಾರ್‌ ನವೀನ್‌ ಹುಲ್ಲೂರ ಧ್ವಜಾರೋಹಣ ನೆರವೇರಿಸಿದರು, ಇದೇ ಸಂದರ್ಭದಲ್ಲಿಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿಪದಕ ಗಳಿಸಿದ ಚಿಲಕವಾಡ ಗ್ರಾಮದ ವಿದ್ಯಾರ್ಥಿಗಳಾದ ವಿನಯ ಬಳಿಗೇರಿ, ಬೆಳಹಾರದ ವೀರೇಶ ಬಿ.ಎಮ್‌, ಹಿರಿಯ ಕ್ರೀಡಾಪಟು ಮಲ್ಲಪ್ಪ ಗಂಗಣ್ಣವರ, ಕವಿತಾ ಬಾಕಳೆ, ರಚನಾ ಬಾಳೋಜಿ ಹಾಗೂ ಉಪನ್ಯಾಸ ನೀಡಿದ ಪ್ರೊ.ಡಿ.ಎಂ.ಸವಡಿ ಅವರನ್ನು ಸತ್ಕರಿಸಲಾಯಿತು.

ಪುರಸಭೆ ಸದಸ್ಯರಾರ ಎಸ್‌.ಎಚ್‌.ನಾಶಿಪುಡಿ, ಪದ್ಮಾವತಿ ಪೂಜಾರ, ಗೀತಾ ಗೊಲ್ಲರ, ಮಂಜು ಜಾಧವ್‌, ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಜಯಪಾಲ ಪಾಟೀಲ್‌ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಪಟ್ಟಣದ ನಾನಾ ಶಾಲೆ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ